Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಬೆಂಗಳೂರಿಗರ ವಿಶಿಷ್ಠ ಹಬ್ಬ: ಬಸವನಗುಡಿ ಕಡಲೆಕಾಯಿ ಪರಿಷೆಯ ವೈಶಿಷ್ಠ್ಯ ನಿಮಗೆ ಗೊತ್ತಾ?

November 23, 2019
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Image Courtesy: Deccan Chronicle

Image Courtesy: Deccan Chronicle

Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕಡಲೆಕಾಯಿ ಪರಿಷೆ ಎಂದರೆ ಕಡಲೆಕಾಯಿ ಹಬ್ಬ. ಎಲ್ಲಿ ನೋಡಿದರೂ ಕಡಲೆಕಾಯಿಯ ತಿನಿಸುಗಳು, ಕಾರ್ತಿಕಮಾಸದ ಕೊನೆಯ ಸೋಮವಾರ ಬಂತೆಂದರೆ ಬೆಂಗಳೂರಿಗರಿಗೆ ಸಂಭ್ರಮದ ಹಬ್ಬ. ಐತಿಹಾಸಿಕ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ಜಾತ್ರೆಯನ್ನು ಮಾಡುವ ವಿಶೇಷ ಸಂದರ್ಭ.

ಐಟಿ ನಗರ ಬೆಂಗಳೂರಿನ ಒಂದು ವೈಶಿಷ್ಟ್ಯವೆಂದರೆ, ಅದು ತನ್ನ ಮಾಲ್, ಹೈಫೈ, ಹೈಟೆಕ್‌ಗಳ ನಡುವೆಯೂ ತನ್ನ ಮೂಲ ಸಂಸ್ಕೃತಿಯ ಪ್ರತೀಕದಂತಹ ದಿರುಸು ತೊಟ್ಟು ಬಿಡುವುದು! ಸಾಮಾನ್ಯ ಜನ ಕೇಳರಿಯದ ಪಾಪ್ ಗಾಯಕನ ಕಚೇರಿಗೆ ಯುವಜನ ಸೇರುವಂತೆ ಕುಮಾರವ್ಯಾಸ ಭಾರತದ ವಾಚನ ಕಾರ್ಯಕ್ರಮಕ್ಕೂ ಸೇರುತ್ತಾರೆ. ಕನ್ನಡ ಸಾಹಿತ್ಯ ಸಮ್ಮೇಳನ ರಂಗೇರುತ್ತದೆ! ಪ್ರಾಯಶಃ ಇಂತಹದ್ದು ಜಗತ್ತಿನ ಇತರ ಯಾವುದೇ ಹೈಟೆಕ್ ನಗರದಲ್ಲಿ ಆಗುವುದೋ ತಿಳಿಯದು. ಇವುಗಳ ಸಾಲಿಗೆ ಸೇರಬೇಕಾದ್ದು ಬೆಂಗಳೂರಿನ ಕರಗ ಮತ್ತು ಕಡಲೆಕಾಯಿ ಪರಿಷೆ! ಕ್ಷಣಾರ್ಧದಲ್ಲಿ ಹಳ್ಳಿಯ ಗಂಧ ಪಸರಿಸುವುದು ಈ ಪರಿಷೆಯ ವೈಶಿಷ್ಟ್ಯ. ಕಾರ್ತಿಕಮಾಸದ ಕೊನೆ ಸೋಮವಾರ ನಡೆಯುವ ಈ ಪರಿಷೆ ಬೆಂಗಳೂರಿನ ಸಂಸ್ಕೃತಿಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ.

ಕಡಲೆಕಾಯಿ ಪುರಾಣ
ಡಾ.ಸೂರ್ಯನಾಥ ಕಾಮತರು ದಾಖಲಿಸಿರುವಂತೆ ಇಮ್ಮಡಿ ಕೆಂಪೇಗೌಡ (1585-1633)ನ ಕಾಲದಲ್ಲಿ ಬೆಂಗಳೂರಿನ ಹೊರಪ್ರದೇಶಗಳು ಅಭಿವೃದ್ಧಿಗೊಂಡವು. ಅದರಲ್ಲಿ ಆಗ ರಾಜಧಾನಿಯ ಹೊರಗಿದ್ದ ಸುಂಕೇನಹಳ್ಳಿ ಕೂಡ ಸೇರಿತ್ತು (ಈಗಿನ ಬಸವನ ಗುಡಿ). ಅಲ್ಲಿದ್ದ ಪ್ರಾಚೀನ ದೇಗುಲವಾದ ಗವಿಗಂಗಾಧರೇಶ್ವರ ದೇವಾಲಯವನ್ನು ವಿಸ್ತರಿಸಿ ಮುಖಮಂಟಪ. ಏಕಶಿಲಾತ್ರಿಶೂಲ, ಡಮರು, ಸೂರ‌್ಯಪಾನ ಶಿಲ್ಪಗಳನ್ನು ನಿರ್ಮಿಸಿದನು. ಬಯಲಿನಲ್ಲಿದ್ದ ದೊಡ್ಡಗಣಪತಿ ಮತ್ತು ಬಸವಣ್ಣನ ದೇಗುಲಗಳಿಗೆ ಮಂಟಪಗಳನ್ನು ಕಟ್ಟಲಾಯಿತು.

ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿ ಅದರ ಆವರಣದಲ್ಲಿ ಕಾರಂಜಿಕೆರೆಯನ್ನು ನಿರ್ಮಿಸಿದನು. (ಆ ಜಾಗದಲ್ಲಿ ಇವತ್ತು ಗಾಂಧಿಬಜಾರ್ ತಲೆ ಎತ್ತಿದೆ) ಕ್ರಿಶ 1498ರ ವೇಳೆಗೆ ಪೋರ್ಚುಗೀಸರು ಕಡಲೆಕಾಯಿಯನ್ನು ಭಾರತಕ್ಕೆ ಪರಿಚಯಿಸಿದರು. ಇದನ್ನು ತನ್ನ ರಾಜ್ಯಕ್ಕೆ ಪರಿಚಯಿಸಿದ ಕೆಂಪೇಗೌಡನು ಸುಂಕೇನಹಳ್ಳಿ ಸುತ್ತಮುತ್ತಲಿದ್ದ ಕೃಷಿ ಪ್ರದೇಶದಲ್ಲಿ ಅದರ ಬೆಳೆಗೆ ಪ್ರೋತ್ಸಾಹ ನೀಡಿದನು. ಹಾಗೆ ಬೆಳೆದ ಕಡಲೆಕಾಯಿಗೆ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಕಡಲೆಕಾಯಿ ಪರಿಷೆ ಕ್ರಿಶ 1600ರ ಸುಮಾರಿಗೆ ಕಾರಂಜಿಕರೆಯ ಆವರಣದಲ್ಲಿ ಆರಂಭವಾಗಿರಬಹುದು ಇದಕ್ಕೆ ಸ್ಥಳೀಯವಾದ ಐತಿಹ್ಯವೂ ಇದ್ದು ಸುಂಕೇನಹಳ್ಳಿ ಗ್ರಾಮಸ್ಥರು ಬೆಳೆದ ಕಡಲೆಕಾಯಿಬೆಳೆಯನ್ನು ಬಸವವೊಂದು ಹಾಳು ಮಾಡುತ್ತಿತ್ತೆಂದು ಅದನ್ನು ಪ್ರಾರ್ಥಿಸಿ ಕಾರ್ತಿಕಮಾಸದ ಕಡೆ ಸೋಮವಾರ ಜಾತ್ರೆ ಮಾಡಲು ಗ್ರಾಮಸ್ಥರು ತೀರ್ಮಾನಿಸಿದರೆಂದು ಈ ಐತಿಹ್ಯವು ಹೇಳುತ್ತದೆ.

ಚಿತ್ರಕೃಪೆ: ಅಂತರ್ಜಾಲ

ಕ್ರಿಶ 1600ರ ಸುಮಾರಿಗೆ ಕೆಂಪೇಗೌಡನು ಬಸವಣ್ಣ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ನಂದಿಕಂಬವನ್ನು ಸ್ಥಾಪಿಸಿ ಕಾರಂಜಿಕೆರೆಯ ಆವರಣದಲ್ಲಿ ಜಾತ್ರೆಗೆ ಅವಕಾಶ ಕಲ್ಪಿಸಿದನು ಎಂದು ಕಾರಂಜಿ ಆಂಜನೇಯಯನ ದೇವಸ್ಥಾನದ ಬಳಿ ಇರುವ ಶಾಸನದಲ್ಲೂ ಉಲ್ಲೇಖಿತವಾಗಿದೆ. ಹೀಗೆ ಧಾರ್ಮಿಕ ಮತ್ತು ವಾಣಿಜ್ಯಿಕ ಕಾರಣಗಳು ಸೇರಿ ‘ಕಡಲೆಕಾಯಿ ಪರಿಷೆ ಆರಂಭವಾಗಿರಬಹುದು. ಶಿವನು ಕೃಷಿಯ ಅಧಿದೇವತೆ. ಬಸವ ಅವನ ವಾಹನ ಈ ಭಾವನಾತ್ಮಕ ಕಾರಣವೂ ಈ ಜಾತ್ರೆ ಜನಪ್ರಿಯವಾಗಲು ಕಾರಣವಾಗಿರಬಹುದು. ಅಂತೂ ಕಳೆದ ಐದುನೂರು ವರ್ಷಗಳಿಂದ ಕಡಲೆಕಾಯಿ ಪರಿಷೆ ಜನಪ್ರಿಯವಾಗಿ ಬೆಳೆದು ಒಂದು ಪರಂಪರೆಯನ್ನು ನಿರ್ಮಿಸಿರುವುದು ಚಾರಿತ್ರಿಕ ಸತ್ಯ.

ಜಾತ್ರೆ ಹಿಂದಿನ ಕಥೆ
ಒಂದು ಜನಪದ ಕಥೆಯಂತೆ ಹೊಲ ಗದ್ದೆಗಳಲ್ಲಿ ಕಡಲೆಕಾಯಿ ಕಟಾವಿಗೆ ಬರುವ ಹೊತ್ತಿಗೆ ಗೂಳಿಯೊಂದು ಕದ್ದುಮುಚ್ಚಿ ಬಂದು ಬೆಳೆಯನ್ನು ಹಾಳುಮಾಡಿ ಹೋಗುತ್ತಿತ್ತು. ಬೆಳೆ ಉಳಿಸಿಕೊಳ್ಳುವ ಸಲುವಾಗಿ ಸುಂಕೇನಹಳ್ಳಿ ಗ್ರಾಮದ ರೈತರು ಹಗಲು, ರಾತ್ರಿ ಕೈಯಲ್ಲಿ ಮಾರಕಾಸ್ತ್ರವನ್ನು ಇಟ್ಟುಕೊಂಡು ಹೊಲವನ್ನು ಕಾವಲು ಕಾಯ್ದರು.

ಎಂದಿನಂತೆ ಹೊಲಕ್ಕೆ ನುಗ್ಗಿದ ಗೂಳಿ ಅಲ್ಲಿ ಗುಂಪಾಗಿ ನೆರೆದಿದ್ದವರನ್ನು ಕಂಡು ಹೆದರಿ ಓಡಿ ಹೋಯಿತು. ರೈತರೂ ಸುಮ್ಮನೆ ಬಿಡಲಿಲ್ಲ. ಅದನ್ನು ಅಟ್ಟಿಸಿಕೊಂಡು ಹೋದರು. ಬಸವ ಗುಡ್ಡವನ್ನೇರಿದ ಕಲ್ಲಾಗಿ ನಿಂತ. ದಿನಗಳೆದಂತೆ ಬೆಳೆಯುತ್ತಾ ಹೋದ. ರೈತರೋ ದಿಗ್ಮೂಢರಾದರು. ಇದು ಸಾಮಾನ್ಯ ಬಸವನಲ್ಲ, ನಮ್ಮನ್ನು ಹರಸಲು ಬಂದ ಶಿವನ ವಾಹನ ನಂದಿಯೇ ಎಂದು ಭಾವಿಸಿದರು.

ಆ ಬಸವನಿಗೆ ಪೂಜಿಸಲು ಆರಂಭಿಸಿದರು. ಮಾಡಿದ ತಪ್ಪಿಗೆ ಕ್ಷಮೆ ಕೋರಿದರು. ಹರಕೆಯ ರೂಪದಲ್ಲಿ ದಂಡವನ್ನು ಪಾವತಿಸಿದರು. ಬಸವನ ಪ್ರೀತ್ಯರ್ಥವಾಗಿ ಕಡಲೆಕಾಯಿಯ ನೈವೇದ್ಯವಾಗಿ ಅರ್ಪಿಸಿದರು. ಅಂದಿನಿಂದ ಪರಿಷೆ ನೆವದಲ್ಲಿ ಮೊದಲ ಕಡಲೆಕಾಯಿ ಬೆಳೆ ಬಸವನಿಗೆ ಅರ್ಪಿಸುವ ವಾಡಿಕೆ ಬಂತು.

ಚಳಿಗಾಲಕ್ಕೆ ನಾಂದಿ, ಎಲ್ಲೆಡೆ ಇಬ್ಬನಿಯ ತಾಂಡವ, ಇಂತಹ ತಣ್ಣನೆಯ ವಾತಾವರಣದಲ್ಲಿ ಕಡಲೆಕಾಯಿಯನ್ನು ಮೆಲ್ಲುವುದೆಂದರೆ ಅದೊಂದು ವಿಶೇಷಾನುಭವ. ಇಂತಹ ಐತಿಹಾಸಿಕ ಹಾಗೂ ಬೆಂಗಳೂರಿನ ಸಂಸ್ಕೃತಿಯ ಭಾಗದಂತಿರುವ ದೊಡ್ಡ ಬಸವಣ್ಣನ ಕಡಲೆಕಾಯಿ ಪರಿಷೆ ಇದೇ ನವೆಂಬರ್ 27 ರಿಂದ ಆರಂಭವಾಗುತ್ತದೆ. ಅಧಿಕೃತವಾಗಿ 3 ದಿನಗಳ ಕಾಲವಾದರೂ ಒಂದು ವಾರದ ಪರ್ಯಂತ ಈ ಪರಿಷೆ ನಡೆಯುತ್ತದೆ. ಯಾವುದಾದರೊಂದು ಸಂಜೆ ನಿಮ್ಮ ಮನೆಯವರು, ಸ್ನೇಹಿತರೊಂದಿಗೆ ಒಂದು ರೌಂಡ್ ಹಾಕಿ ಬಗೆಬಗೆಯ ಕಡಲೆಕಾಯಿ ಮೆಲ್ಲುವುದನ್ನು ಮರೆಯಬೇಡಿ.

ತಿಂದರೆ ರುಚಿ ಆರೋಗ್ಯಕ್ಕೆ ವರ
ಕಡಲೆಕಾಯಿ ಬಾಯಿಗೆ ರುಚಿ, ದೇಹಕ್ಕೂ ಹಿತ ಚಳಿಗಾಲದ ಈ ಅವಧಿಯಲ್ಲಿ ಕಡಲೆಕಾಯಿ ದೇಹಕ್ಕೆ ಅಗತ್ಯವಿರುವ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ.

ಒಮ್ಮೆ ತಿನ್ನ ಹೊರಟರೆ ಕೈಗೂ ಬಾಯಿಗೂ ನಡುವಣ ಜಗಳಕ್ಕೆ ಅಂತ್ಯವೇ ಇಲ್ಲ, ಎದುರಿನಲ್ಲಿಟ್ಟ ಕಡಲೆಕಾಯಿ ಮುಗಿಯುವ ತನಕ ಯಾವುದಕ್ಕೂ ಬಿಡುವಿಲ್ಲ. ಶೇಂಗಾದ ಆ ರುಚಿ ನಾಲಿಗೆಯಲ್ಲಿ ನಲಿಯುವಾಗ ಜಗತ್ತೇ ಮುಳುಗಿಹೋದರೂ ಗಮನಕ್ಕೆ ಬಾರದು. ಕಡಲೆಕಾಯಿಯ ಮಾಯೆಯೇ ಅಂಥದ್ದು, ಹಸಿಯಾಗಲಿ, ಹುರಿದಿದ್ದೇ ಆಗಲಿ, ಬೇಯಿಸಿದ್ದೇ ಆಗಲಿ ಅದರ ರುಚಿಗೆ ಸಾಟಿ ಬೇರಿಲ್ಲ.

ರುಚಿಯಷ್ಟೇ ಅಲ್ಲ, ಆರೋಗ್ಯದ ವಿಚಾರದಲ್ಲಿ ಶೇಂಗಾ ದೇಃಕ್ಕೆ ಪೂರಕ, ಸಿರಿವಂತರು ಬಾದಾಮಿ ಕೊಂಡು ತಿಂದರೆ ಬಡವರು ಕಡಲೆಕಾಯಿ ಚಪ್ಪರಿಸುತ್ತಾರೆ. ಹಾಗೆಂದೇ ಬಡವರ ಬಾದಾಮಿ, ಗಾಂಧೀಜಿಯವರಿಗೂ ಕಡಲೆಕಾಯಿ ಎಂದರೆ ಅಚ್ಚುಮೆಚ್ಚು. ಇದರಲ್ಲಿ ಅಧಿಕವಾಗಿರುವ ಪೋಷಕಾಂಶಗಳೇ ಇದಕ್ಕೆ ಬಾದಾಮಿಗೆ ಸರಿಗಟ್ಟುವ ಅಗ್ಗಳಿಕೆಯನ್ನು ತಂದುಕೊಟ್ಟಿದೆ.

Get in Touch With Us info@kalpa.news Whatsapp: 9481252093

Tags: Almonds of the PoorBENGALURUDr Gururaj PoshettihalliGroundnutKadalekaiKadalekai ParisheKannada Articleಇಮ್ಮಡಿ ಕೆಂಪೇಗೌಡಕಡಲೆಕಾಯಿಕಡಲೆಕಾಯಿ ಪರಿಷೆಕಾರಂಜಿ ಆಂಜನೇಯ ಸ್ವಾಮಿಡಾ.ಗುರುರಾಜ ಪೋಶೆಟ್ಟಿಹಳ್ಳಿಬಡವರ ಬಾದಾಮಿಬೆಂಗಳೂರು ದಕ್ಷಿಣ
Previous Post

ಮರಳಲಾಗದ ಬಾಲ್ಯದ ನೆನಪುಗಳ ಬುತ್ತಿ ಬಿಚ್ಚಿಟ್ಟ ರಿಷಬ್ ಶೆಟ್ಟಿಯವರ ಸ್ಕೂಲ್ ವಿಸಿಟ್!

Next Post

ಎರಡು ಭೀಕರ ಅಪಘಾತಕ್ಕೆ ಬೆಚ್ಚಿಬಿದ್ದ ಹೈದರಾಬಾದ್: ಭಯಾನಕರ ವೀಡಿಯೋ ನೋಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಎರಡು ಭೀಕರ ಅಪಘಾತಕ್ಕೆ ಬೆಚ್ಚಿಬಿದ್ದ ಹೈದರಾಬಾದ್: ಭಯಾನಕರ ವೀಡಿಯೋ ನೋಡಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025

A Divine Journey to South India on Bharat Gaurav Train Here is the full details of tour

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!