ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಮ್ಮಿಂದೊಮ್ಮೆಲೆ ನೀನು ಮಾಡಿದ್ದೇನು? ಹೃದಯದಲ್ಲಿಯ ಹೂನಗೆಯನ್ನು ಅರಿವಾಗದಂತೆ ಕಿತ್ತುಕೊಂಡೆ. ಅನಾಮತ್ತಾಗಿ ನನ್ನ ಪ್ರೀತಿಗೆ ಘಾಸಿ ಮಾಡಿದೆ. ಇದೀಗ ನೀನಿಲ್ಲದೆ ಮೌನವೇ ಆವರಿಸಿದೆ ಜೀ…
ಈ ಹಾಳಾದ ಮನಸು ಅವನನ್ನು ಸೆಳೆಯುತ್ತಿದೆ. ಆದರೆ ಏನು ಮಾಡೋಣ, ನನ್ನ ಭಾವನೆ ಅವನಿಗೆ ಅರ್ಥವಾಗದೆ ಹೋಯಿತು. ನನ್ನದೆಯಲ್ಲಿ ಪ್ರೀತಿಯ ಬೀಜವನ್ನು ಬಿತ್ತಿ ಅವನು ಕಣ್ಮರೆಯಾಗಿ ಹೋದ.
ಎಲ್ಲಾ ಪ್ರೀತಿಯೂ ಆರಂಭದಲ್ಲಿ ಎಷ್ಟು ಚಂದ ಅನಿಸುತ್ತೆ. ನಾನು ನಿಮ್ಮನ್ನು ನನಗಿಂತ ಹೆಚ್ಚಾಗಿ ಪ್ರೀತಿಸಿದೆ. ಎಷ್ಟೇ ವರ್ಷಗಳು ಕಳೆದರೂ ಪರವಾಗಿಲ್ಲ ನಿಮಗಾಗಿ ಕಾಯುತ್ತೇನೆ ಅಂದಿದ್ದೆ. ಆದರೆ ನನ್ನ ಪ್ರೀತಿ ನಿಮಗೆ ಅರ್ಥವೇ ಆಗಲಿಲ್ಲ ಜೀ…
ಪರಿಚಯ ಸ್ನೇಹವಾಗಲೂ, ಸ್ನೇಹ ಪ್ರೀತಿಯಾಗಲೂ ಹೆಚ್ಚು ಸಮಯ ಹಿಡಿಯಲಿಲ್ಲ. ಪ್ರೀತಿ ತೋರಿಸಿದ ನೀವು ಒಂದು ದಿನ ಇದ್ದಕ್ಕಿದ್ದಂತೇ ಅಪರಿಚಿತನಾದಾಗ ಎಂದಾದರೂ ಒಂದು ದಿನ ಮರಳಿ ಬರುವಿರೆಂಬ ನಿರೀಕ್ಷೆಯಲ್ಲಿದ್ದೆ. ನಾವು ನಡೆದ ಹೆಚ್ಚೆ ಗುರುತುಗಳು, ಆಡಿದ ಮಾತು, ಕೂತಜಾಗ, ಕಂಡ ಕನಸುಗಳು ಎಲ್ಲವೂ ನನ್ನನ್ನು ಅಣಕಿಸಿದಂತೆ ಭಾಸವಾಗುತ್ತಿದೆ ಜೀ…
ಪ್ರತಿಬಾರಿ ನಿಮ್ಮ ತಿರಸ್ಕಾರದ ಮಾತುಗಳನ್ನು ಕೇಳಿ ಮನಸ್ಸಿಗೆ ನೋವು ಮಾಡಿಕೊಳ್ಳುವುದಕ್ಕಿಂತ ನಿಮ್ಮಿಂದ ದೂರವಾಗುವುದೇ ಒಳಿತು ಅನಿಸುತ್ತಿದೆ ಜೀ… ನನ್ನ ಮಾತುಗಳಿಂದ ನಿಮಗೆ ಆಶ್ಚರ್ಯವೆನಿಸುವುದಿಲ್ಲ. ಏಕೆಂದರೆ ಪ್ರತಿ ಕ್ಷಣ ನಿಮ್ಮ ಪ್ರೀತಿಗೆ ಕಾಯುತ್ತಿದ್ದೆನೇ ಹೊರತು ನಿಮ್ಮನ್ನು ದೂರ ಮಾಡುವ ಮಾತುಗಳನ್ನು ಆಡಿದವಳಲ್ಲ….
ಜೀ ನಿಮ್ಮಷ್ಟು ಮೌನಿ ನಾನಲ್ಲ, ಏನೇ ಇದ್ದರೂ ಮರು ಮಾತಿನಲ್ಲದೇ ಹೇಳಿಬಿಡುವ ಹುಡುಗಿ ನಾನು. ಆದರೆ ನಿಮ್ಮ ಎದುರಲ್ಲಿ ನಿಂತು ಮಾತನಾಡುವ ಧೈರ್ಯ ನನಗೆ ಬರಲೇ ಇಲ್ಲ ಜೀ.
ನನ್ನ ಪಾಲಿಗೆ ಆಗ ನೀವೇ ಪ್ರಪಂಚ, ನೀವೇ ಬದುಕು, ನಿಮ್ಮ ಜೊತೆಗೆ ಇದ್ದರೆ ಯಾರನ್ನು ಬೇಕಾದರೂ ಎದುರಿಸಿ ನಡೆಯುವೆನು ಎಂಬ ಧೈರ್ಯ ಜೀ. ನಿಮ್ಮ ಕರೆಗಾಗಿ ಕಾದ ದಿನಗಳಿಗೆ ಲೆಕ್ಕವೇ ಇಲ್ಲ. ದಿನಗಳು ಕಳೆದಂತೆ ಮೌನಿಯಾಗುತ್ತಾ ಹೋದೆ. ಯಾರಿಗೂ ಗೊತ್ತಿಲ್ಲದೇ ರಾತ್ರಿ ಇಡೀ ಕಣ್ಣೀರಿಟ್ಟೆ. ಈಗ ಬದುಕೆಂಬ ಪುಟದಲ್ಲಿ ಹೊಸ ಹೆಜ್ಜೆ ಹಾಕುತ್ತಿದ್ದೇನೆ. ನಿಮ್ಮ ನೆನಪಿಗೆ ಪೂರ್ಣ ವಿರಾಮ ಹಾಕಿ ಬಿಡೋಣ ಅನಿಸಿದೆ. ಈ ಬದುಕಿಗೆ ಮರಳಿ ಬರಬೇಡ. ಬದುಕು ತುಂಬಾನೇ ಕಲಿಸಿಕೊಟ್ಟಿದೆ.
Get in Touch With Us info@kalpa.news Whatsapp: 9481252093
Discussion about this post