ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚಗುತ್ತಿದ್ದು, ಅಪಘಾತಗಳ ಹೆಚ್ಚುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳ ಹೆಚ್ಚು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ತಳ ಮಟ್ಟದಿಂದ ಜಾಗೃತಿ ಮೂಡಿಸಿಬೇಕು ಎಂದು ವೃತ್ತ ನಿರೀಕ್ಷಕ ಈ. ಆನಂದ್ ಹೇಳಿದರು.
ನಗರದ ಚಿತ್ರದುರ್ಗ ರಸ್ತೆಯ ವಾಸವಿ ಕಾಲೇಜಿನಲ್ಲಿ ಪೋಲೀಸ್ ಇಲಾಖೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಅವರು ಮಾತನಾಡಿದರು.
ರಸ್ತೆ ಅಪಘಾತಗಳಲ್ಲಿ ಮೃತ ಪಡುವವರ ಪೈಕಿ ಶೇ. 50ರಷ್ಟು ಮಂದಿ ದ್ವಿಚಕ್ರ ವಾಹನ ಸವಾರರಾಗಿದ್ದಾರೆ. ವಾಹನಗಳ ಚಾಲಕರು ಹಾಗೂ ದ್ವಿಚಕ್ರ ವಾಹನಗಳ ಸವಾರರು ಮತ್ತು ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಲಾ ಕಾಲೇಜು, ಕಚೇರಿಗೆ ಸರಿಯಾದ ಸಮಯಕ್ಕೆ ಹೋಗಲು ತಡವಾದರೂ ಸಹ ಸಂಚಾರ ನಿಯಮ ಪಾಲಿಸಬೇಕು. ಆತುರಕ್ಕೆ ಬಿದ್ದು ಅಪಘಾತಕ್ಕೆ ಒಳಗಾದರೆ ಜೀವನ ಪರ್ಯಂತ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿಗೂ ಕಾರಣವಾಗುತ್ತದೆ. ಯಾವುದೆ ರೀತಿಯ ವಾಹನ ಚಾಲನೆ ಮಾಡುವಾಗ ಸುರಕ್ಷತಾ ಚಾಲನೆ, ರಸ್ತೆ ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು, ಇತರರಿಗೂ ಜಾಗೃತಿ ಮೂಡಿಸಬೇಕು. ವಾಹನ ಸಂಚಾರ ನಿಯಮ ಪಾಲಿಸಬೇಕು ಕಾನೂನಿಗೆ ವಿರುದ್ದವಾಗಿ ನಡೆದರೆ ಒಂದೆರಡು ಸಲ ದಂಡ ವಿಧಿಸಲಾಗುತ್ತದೆ. ಮೂರನೆಯ ಬಾರಿಗೆ ಪರವಾನಗಿ ರದ್ದು ಪಡಿಸಲಾಗುವುದು. ನಾಲ್ಕನೆಯ ಬಾರಿ ವಾಹನವನ್ನೇ ವಶಪಡಿಸಿಕೊಳ್ಳಲಾಗುವುದು ಎಂದರು.
ಪಿಎಸ್ಐ ಎಸ್.ಡಿ. ನೂರ್ ಅಹ್ಮದ್ ಮಾತನಾಡಿ, ವಿದ್ಯಾರ್ಥಿಗಳು 18 ವರ್ಷ ದಾಟಿದ್ದರೆ ಮಾತ್ರ ದ್ವಿಚಕ್ರ ವಾಹನ ಓಡಿಸಬಹುದು, ಕಡ್ಡಾಯವಾಗಿ ವಾಹನ ಪರವಾನಗಿ, ವಿಮೆ ಮಾಡಿಸಬೇಕು, ಹೆಲ್ಮೆಟ್ ಬಳಸಬೇಕು ಎಂದರು.
18 ವರ್ಷದ ಒಳಗೆ ದ್ವಿಚಕ್ರ ವಾಹನ ಚಲಾಯಿಸಿದರೆ. ವಾಹನದಲ್ಲಿ ಮೂವರು ಕುಳಿತು ಓಡಾಡುತ್ತಿದ್ದರೆ, ಇಂತಹ ವಿದ್ಯಾರ್ಥಿಗಳ ಪೋಷಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಪಾದಚಾರಿಗಳು ಪುಟ್ಪಾತ್ ಬಳಸಬೇಕು, ರಸ್ತೆ ದಾಟುವಾಗ ತಿರುವುಗಳಲ್ಲಿ, ವೃತ್ತಗಳಲ್ಲಿ ಅವಸರ ಮಾಡದೇ ವಾಹನ ಚಲಿಸಿದ ಮೇಲೆ ಹೋಗಬೇಕು, ಮೊಬೈಲ್’ನಲ್ಲಿ ಮಾತನಾಡಿಕೊಂಡು ಸಂದೇಶ ಮಾಡಿಕೊಂಡು, ಬರುವಾಗ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ರಸ್ತೆ ನಿಯಮಗಳನ್ನು ಪಾಲಿಸಿದೆರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ವಾಸವಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post