ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಭ್ರಮಾಚಣೆ ನಡೆಸಲಾಯಿತು.
ಸಂಭ್ರಮಾಚರಣೆಯ ನೇತೃತ್ವ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಗಟ್ಟ ಮಾತನಾಡಿ, ಪಕ್ಷದ ನೂತನ ಸಾರಥಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಎಲ್ಲರನ್ನು ಒಗ್ಗಟ್ಟಿನಿಂದ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸುತ್ತಾರೆ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಮೂಡಿದೆ. ಇದೇ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ, ಸಿಪಿಎಲ್ ನಾಯಕರಾದ ಸಿದ್ಧರಾಮಯ್ಯ, ನೂತನ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕೀಹೊಳಿ, ಸಲೀಂ ಅಹ್ಮದ್ ಅವರಿಗೂ ಬ್ಲಾಕ್ ಕಾಂಗ್ರೆಸ್ ಅಭಿನಂದಿಸುತ್ತದೆ ಎಂದರು.
ಇಲ್ಲಿನ ಶ್ರೀ ರಂಗನಾಥ ದೇವಸ್ಥಾನ ವೃತ್ತ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಲ್ಲಪ್ಪ ಚಿತ್ರಟ್ಟಹಳ್ಳಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ. ಕೆರಿಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ಪಪಂ ಸದಸ್ಯೆ ಸುಲ್ತಾನಾ ಬೇಗಂ, ಮುಖಂಡರಾದ ಕೆ. ಮಂಜುನಾಥ್, ಇ.ಎಚ್. ಮಂಜುನಾಥ್, ಮುಹಮ್ಮದ್ ಸಾಜೀದ್, ಸಿರಾಜುದ್ಧೀನ್, ನೆಮ್ಮದಿ ಸುಬ್ಬು, ಇರ್ಫಾನ್ ಭಾಷಾ, ಮುಹಬೂಬ್ ಬಾಷಾ, ಆಹ್ಮದ್ ಶರೀಫ್, ಪರಮೇಶ್ವರಪ್ಪ, ಷಣ್ಮುಖ ಮೇಸ್ತ್ರಿ, ಸುರೇಶ್ ಶಿಗ್ಗಾ, ಮುಜೀಬ್, ಶಿವಪ್ಪ ನಡಹಳ್ಳಿ, ಫ್ರೂಟ್ ನಾಸೀರ್, ಯಶೋಧಮ್ಮ, ಮಹೇಶ್ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
Get in Touch With Us info@kalpa.news Whatsapp: 9481252093
Discussion about this post