ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸದ್ಯ ರಾಜ್ಯದಲ್ಲಿರುವ ಕೊರೋನಾ ವೈರಸ್ ಹಾವಳಿಯಿಂದ ಪಾರಾಗಲು ಇಡಿಯ ರಾಜ್ಯವನ್ನು ಶಟ್ ಡೌನ್ ಮಾಡುವುದು ಒಂದೇ ಮಹತ್ವದ ದಾರಿ ಎಂದು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿಗಳೊಂದಿಗೆ ಮಧ್ಯಾಹ್ನ ನಡೆದ ಸಭೆಯಲ್ಲಿ ತಜ್ಞರು ಈ ಸಲಹೆ ನೀಡಿದ್ದು, ಕೋವಿಡ್ ಸೋಂಕು ಕಂಡು ಬಂದವರನ್ನು ಕ್ವಾರಂಟೈನ್’ನಲ್ಲಿ ಇರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಇಡಿಯ ರಾಜ್ಯವನ್ನು ತಾತ್ಕಾಲಿಕವಾಗಿ ಶಟ್ ಡೌನ್ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.
ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಮನೆಯಲ್ಲೇ ಇದ್ದು, ಸೋಂಕು ಮುಕ್ತರಾಗಿರಿ ಎಂಬ ಘೋಷವಾಕ್ಯವನ್ನು ಜನರು ಪಾಲಿಸಬೇಕು. ಇದರೊಂದಿಗೆ ನಗರ ಪ್ರದೇಶದ ಜನರು ಸಾಧ್ಯವಾದಷ್ಟು ಗ್ರಾಮಗಳಿಗೆ ತೆರಳಬೇಡಿ ಎಂದು ಸಿಎಂ ಮನವಿ ಮಾಡಿದ್ದಾರೆ.
Get in Touch With Us info@kalpa.news Whatsapp: 9481252093

















