ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚೆನ್ನೈ: ಕನ್ನಡದ ಸೂರ್ಯವಂಶ ಚಿತ್ರ ಖ್ಯಾತಿಯ ನಟಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಅಪ್’ಲೋಡ್ ಮಾಡಿದ ವಿಜಯಲಕ್ಷ್ಮೀ, ನಾನು ಈಗಾಗಲೇ 2 ಬಿಪಿ ಮಾತ್ರೆ ತೆಗೆದುಕೊಂಡಿದ್ದು, ಲೋ ಬಿಪಿ ಆಗಿದೆ. ಕೆಲವೇ ಗಂಟೆಗಳಲ್ಲಿ ನಾನು ಸಾಯುತ್ತೇನೆ. ವೀಡಿಯೋ ನೋಡುವ ಅಭಿಮಾನಿಗಳಿಗೆ ನಾನು ಹಿಂಸೆ ನೀಡುತ್ತಿದ್ದೇನೆ ಎಂದಿದ್ದಾರೆ.
ವಿಷಯ ತಿಳಿದಾಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಾರಣವೇನು?
ವಿಜಯಲಕ್ಷ್ಮಿ ಅವರು ಸೀಮನ್ ಮತ್ತು ಹರಿ ನಾಡರ್ ಅವರ ಅನುಯಾಯಿಗಳ ಕಿರುಕುಳವನ್ನು ತೀವ್ರ ಕಾರಣವನ್ನು ತೆಗೆದುಕೊಳ್ಳಲು ಪ್ರೇರೇಪಿಸಿದ ಪ್ರಮುಖ ಕಾರಣವೆಂದು ಉಲ್ಲೇಖಿಸಿದ್ದಾರೆ. ತನ್ನನ್ನು ತೀವ್ರ ಆನ್ಲೈನ್ ಕಿರುಕುಳಕ್ಕೆ ಒಳಪಡಿಸಿದ್ದಕ್ಕಾಗಿ ಇಬ್ಬರು ನಾಯಕರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post