ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನಾ ಯೋಧರು ಬಟ್ಟೆ ಬದಲಾಯಿಸದಂತಹ ತಂತ್ರಜ್ಞಾನಕ್ಕೆ ಪಶ್ಚಿಮ ಘಟ್ಟದ ಗಿಡಮೂಲಿಕೆ ಬಳಸಿಕೊಳ್ಳುವಲ್ಲಿ ಚಿಂತನೆಗಳು ನಡೆದಿವೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂಸದ ಬಿ.ವೈ. ರಾಘವೇಂದ್ರ, ಯುದ್ಧ ಸಂದರ್ಭದಲ್ಲಿ ಭಾರತೀಯ ಸೇನಾ ಯೋಧರು ಬಟ್ಟೆ ಬದಲಾಯಿಸದಂತಹುದಕ್ಕೆ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಾರೆ. ಆದರೆ, ಈಗ ಇಂತಹ ವಿಧಕ್ಕೆ ಪಶ್ಚಿಮ ಘಟ್ಟದಲ್ಲಿ ದೊರೆಯುವ ಗಿಡ ಮೂಲಿಕೆಗಳನ್ನು ಬಳಸಿಕೊಂಡು ಬಯೋಟೆಕ್ನಾಲಜಿ ಮೂಲಕ ತಂತ್ರಜ್ಞಾನ ಸಿದ್ದಪಡಿಸುವ ಕುರಿತಾಗಿ ಚಿಂತನೆಗಳು ನಡೆದಿವೆ ಎಂದಿದ್ದಾರೆ.
ಇನ್ನು, ರಾಗಿಗುಡ್ಡದಲ್ಲಿ ವಿಜ್ಞಾನ ಕೇಂದ್ರ ತೆರೆಯಲು ಏಳು ಎಕರೆ ಜಾಗ ಗುರುತಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಆ್ಯಂಟಿ ಮೈಕ್ರೋ ಬಯೋಲಾಜಿಕಲ್ ಸಂಬಂಧಿತ ಸಂಶೋಧನೆ ಇಲ್ಲಿ ನಡೆಯಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















