ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ರಾಷ್ಟ್ರೀಯ ಹೆದ್ದಾರಿ 206ರ ತಾಳಗುಪ್ಪ ಬಳಿಯಲ್ಲಿ ಸೈಕಲ್ ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ಮರತ್ತೂರು ಗ್ರಾಮದ ತಿರುವಿನ ಬಳಿ ಘಟನೆ ನಡೆದಿದ್ದು, ಸೈಕಲ್ ಹಾಗೂ ಬೈಕ್ ನಡುವೆ ವೇಗವಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಸೈಕಲ್ ಸವಾರ ಅಣ್ಣಪ್ಪ ತಿರುಪತಿ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಪಘಾತ ಸಂಭವಿಸಿರುವುದು ಸೈಕಲ್ ಹಾಗೂ ಬೈಕ್ ನಡುವೆಯಾದರೂ ಸೈಕಲ್ ಸವಾರ ಸಾವನ್ನಪ್ಪಿರುವ ಸ್ಥಿತಿಯನ್ನು ನೋಡಿದರೆ ಬೈಕ್’ನ ವೇಗ ಎಷ್ಟಿತ್ತು ಎಂಬುದನ್ನು ಅಂದಾಜು ಮಾಡಬಹುದು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post