No Result
View All Result
Deeksha Brahmavara | A Divine Synergy of Artistic Excellence and Intellectual Brilliance
English Articles

Deeksha Brahmavara | A Divine Synergy of Artistic Excellence and Intellectual Brilliance

by ಕಲ್ಪ ನ್ಯೂಸ್
February 10, 2026
0

Kalpa Media House  |  Special Article: Satish Shetty Cherkadi Doddamane  | The coastal soil of Karnataka is fertile with art, but...

Read moreDetails
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ

Stay Hydrated to Protect Your Voice This Summer: ENT Expert Advice

February 10, 2026
Mysore – Shivamogga Express Big Update on this Date | Must Read

Mysore – Shivamogga Express Big Update on this Date | Must Read

February 9, 2026
Union Minister V. Somanna Flagged Off New Demu Train Services Between Dandeli – Alnavar

Union Minister V. Somanna Flagged Off New Demu Train Services Between Dandeli – Alnavar

February 9, 2026
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

A Second Chance at Life Through Deceased Organ Donation

February 3, 2026
  • Advertise With Us
  • Grievances
  • About Us
  • Contact Us
Wednesday, February 11, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಕಾಂಪ್ಲೆಕ್ಸ್‌ ಲೈಫ್ ಸ್ಟೈಲಲ್ಲಿ ತಂಗಾಳಿಯಂತೆ ಶಿವ

ಶಿವನಿಂದ ಕಲಿಯುವ ಪಾಠಗಳಿವು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 10, 2021
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ಕಾಂಪ್ಲೆಕ್ಸ್‌ ಲೈಫ್ ಸ್ಟೈಲಲ್ಲಿ ತಂಗಾಳಿಯಂತೆ ಶಿವ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬೆಳಿಗ್ಗೆದ್ದು ಎರಡು ಪೀಸ್ ಬ್ರೆಡ್ ತಿಂದು ಅರ್ಧ ಕಾಫಿ ಕುಡಿದು ದಿನವಿಡೀ ಕೆಲಸ ಕೆಲಸ ಎಂದು ಒತ್ತಡದಲ್ಲೇ ಒದ್ದಾಡಿ ತಲೆನೋವು ಬರಿಸಿಕೊಂಡು ದೇಹವನ್ನು ಬೆಳೆಸಿಕೊಂಡು ವಿಚಿತ್ರ ಮನಸ್ಥಿತಿಯಲ್ಲಿ ಮಾಡರ್ನು ಲೈಫನ್ನು ಜೀವಿಸುತ್ತಿರುವ ಅನೇಕಾನೇಕ ಮಂದಿಗೆ ಶಿವ ಇಷವಾಗುವುದಕ್ಕೆ, ಮಾಡೆಲ್ ಥರ ಕಾಣಿಸುವುದಕ್ಕೆ ಕಾರಣವಿದೆ. ಶಿವ ಕೂಲ್. ಶಿವನದ್ದು ಸಿಕ್ಸ್‌ ಪ್ಯಾಕ್. ಶಿವ ಮನಸ್ಸು ಸರಿ ಇಲ್ಲದಿದ್ದರೆ ಡಾನ್ಸು ಮಾಡಬಲ್ಲ. ಒತ್ತಡದಿಂದ ಮುಕ್ತನಾಗಬಲ್ಲ, ಅವನಿಗೆ ಶೋಕಿಯಿಲ್ಲ. ಅವನು ಎಲ್ಲರೂ ತನ್ನನ್ನು ಇಷ್ಟಪಡಲಿ ಎಂದು ಬಯಸುವುದಿಲ್ಲ. ಇಂಥಾ ವ್ಯಕ್ತಿತ್ವ ಹೊಂದಲು ಆಧುನಿಕ ಮನಸ್ಸು ಬಯಸುತ್ತದೆ. ಇಷ್ಟವಿದ್ದರೂ ಇಂಥಾ ವ್ಯಕ್ತಿತ್ವ ಹೊಂದುವುದು ಸಾಧ್ಯವಾಗುವುದಿಲ್ಲ. ಶಿವ ಅಚ್ಚರಿಯಾಗಿಯೇ ಉಳಿಯುತ್ತಾನೆ. ಇವರು ಆರಾಧಕರಾಗೇ ಉಳಿಯುತ್ತಾರೆ.

ನಮ್ಮಂತೆ ಮನುಷ್ಯ
ಕೃಷ್ಣ ಮನುಷ್ಯನಂತೆ ಕಾಣುತ್ತಿದ್ದ. ಆಮೇಲೆ ದೇವರಾಗಿ ಹೋದ. ನಮಗೊಬ್ಬ ದೇವರಾಗಿದ್ದೂ ಮನುಷ್ಯನಂತಿರುವ ವ್ಯಕ್ತಿ ಸಿಕ್ಕಿದ್ದು ಶಿವನಲ್ಲಿ. ಹೀಗೆ ಹೇಳುವ ಹುಡುಗನಿಗೆ ಶಿವ ರೋಲ್ ಮಾಡೆಲ್, ಶಿವನಿಗೆ ಅಹಂಕಾರವಿಲ್ಲ. ಶಿವ ತಾನು ದೇವರಂತೆ ನಡೆದುಕೊಳ್ಳಲಿಲ್ಲ. ಬಾಯಿಬಿಟ್ಟು ಮಾತನಾಡಿದ್ದನ್ನೂ ಎಲ್ಲೂ ಕೇಳಲಿಲ್ಲ. ಅವನು ಹೇಳದೆಯೂ ಎಲ್ಲವನ್ನೂ ಹೇಳಿದ. ಹೇಗೆ ಬದುಕಬೇಕು ಅನ್ನುವುದನ್ನು ತೋರಿಸಿದ. ಹೇಗಿರಬೇಕು ಅನ್ನುವುದನ್ನು ಕಲಿಸಿದ. ಅವನು ಸುಮ್ಮನಿದ್ದೆ ಎಲ್ಲಾ ಅದ್ಭುತವನ್ನೂ ನಡೆಸಿದ. ಅವನು ಲಯಕರ್ತ ಎಂಬ ಕಾರಣಕ್ಕೆ ನಲಿದಾಡಲಿಲ್ಲ. ಸುಮ್ಮನೆ ಧ್ಯಾನಸ್ಥನಾಗಿ ಕೂತ ಕೂಲ್ ಶಿವ ಇಷ್ಟವಾಗಿದ್ದಕ್ಕೆ ದೊಡ್ಡ ಕಾರಣಗಳು ಬೇಕಿಲ್ಲ.
ಹೀಗೆ ಒಂದಲ್ಸ ಭಸ್ಮಾಸುರ ಅಂಬೋ ರಾಕ್ಷಸ, ಶಿವನೇ ನನ್ನಪ್ಪಾ ನಾನು ಯಾರ ತಲೆ ಮೇಲೆ ಕೈ ಇಟ್ಟರೂ ಅವರು ಭಸ್ಮ ಆಗ್ಹೋಗೋ ಥರ ಮಾಡು ಅಂತ ಕೇಳಿದ್ನಾ, ನಮ್ಮ ಬೋಳೇಶಿವ ಅಸ್ತು ಅಂದುಬಿಟ್ಟ. ತಕೋ! ಹಲಲಲಲಲಲ ಅಂತ ಕಂಡ-ಕಂಡವರ ತಲೆ ಮೇಲೆ ಕೈಯಿಟ್ಟು ಊರೆಲ್ಲಾ ಭಸ್ಮ ಮಾಡುತ್ತಾ ಹೊರಟ ಭಸ್ಮಾಸುರ! ಇವನ ರುದ್ರಾಟಕ್ಕೆ ಹೆದರಿ, ಜನರೆಲ್ಲಾ ವಿಷ್ಣು ಹತ್ತಿರ ಓಡಿದ್ರು, ವಿಷ್ಣು ಒಂಥರಾ ಟ್ರಬಲ್-ಶೂಟರ್ ಇದ್ದ ಹಾಗೆ. ಶಿವ ಕಂಡವರಿಗೆಲ್ಲಾ, ಅಸ್ತು ಅಂತಿದ್ನಾ, ಜನ ಎಲ್ಲಾ ವಿಷ್ಣು ಹತ್ರ ಓಡಿ ಪರಿಹಾರ ಕೇಳೊಕೆ ಓಡಿದ್ರು. ಆಗ ವಿಷ್ಣು ಚೆಂದದ ಹುಡುಗಿ ವೇಷದಲ್ಲಿ ಭಸ್ಮಾಸುರನ ಹತ್ರ ಬಂದು, ನಾನು ಮೋಹಿನಿ ಅಂತ ನೃತ್ಯಗಾತಿ. ನಿನ್ನ ಕಂಡ್ರೆ ನಂಗೆ ತುಂಭಾ ಇಷ್ಟ. ನಾ ನಿಂಗೂ ನೃತ್ಯ ಕಲಿಸ್ತೀನಿ ಅಂದ. ಎಷ್ಟ್‌ ಚೆನಾಗಿದಾಳಲ್ಲ. ಹೆಂಗೂ ನಂಗೆ ನೃತ್ಯ ಬರಲ್ಲ ಕಲಿತ್ರಾಯ್ತು ಅಂತ ಭಸ್ಮಾಸುರ ಒಪ್ಪಿದ. ಮೋಹಿನಿ ನೃತ್ಯ ಮಾಡ್ತಾ ತನ್ನ ತಲೆ ಮೇಲೆ ಕೈ ಇಟ್ಕೊಂಡ್ಲಾ, ಅದನ್ನೇ ಅನುಕರಿಸಿದ ಭಸ್ಮಾಸುರ ಸುಟ್ಟೂ ಬೂದಿಯಾದ!

ನಮಗೆಲ್ಲಾ ಇರೋ ಹಾಗೆ ದೇವರಿಗೂ ಒಂದೊಂದು ಕೆಲಸ ಇರುತ್ತದೆ. ಹಾಗೆ ಶಿವ ಲಯಕರ್ತ. ಹಂಗದ್ರೆ ಏನಪ್ಪಾ ಅಂತಂದ್ರೆ ಈಗ ಕಂಪ್ಯೂಟರ್‌ನಲ್ಲಿ ಬೇಡದೇ ಇರೋ ಹಾಗೂ ಹಳೇ ಬೇಡದೆ ಇರೋ ಫೈಲ್‌ಗಳು ಇರುತ್ತೆ ಅಲ್ವಾ. ಅದನ್ನು ಡಿಲಿಟ್ ಮಾಡಿದ್ರೇನೆ ಕಂಪ್ಯೂಟರ್ ಕ್ಲೀನ್ ಆಗಿ ಚೆನ್ನಾಗಿ ಕೆಲಸ ಮಾಡೋದು. ಇಲ್ಲ ಅಂದ್ರೆ ಬೇಡದೇ ಇರೋದು. ಬೇಕಾಗಿರೋದು ಎಲ್ಲಾ ದೇರಿಕೊಂಡು ಕಂಪ್ಯೂಟರ್ ತುಂಬಿಕೊಂಡು ಕೆಲಸವೇ ಮಾಡಲ್ಲ, ಹಾಗೆ ಭೂಮಿ ಮೇಲಿರೋ ಮನುಷ್ಯರಿಗೆ ಶಿವ ಡಿಲಿಟ್ ಬಟನ್ ಇದ್ದ ಹಾಗೆ. ತುಂಬಾ ವಯಸ್ಸಾಗಿರೋ ಅಥವಾ ಕೆಟ್ಟವರಾಗಿಯೋ ಮನುಷ್ಯರನ್ನು ಡಿಲಿಟ್ ಮಾಡೋದು ಶಿವನ ಕೆಲಸ. ಆಗ, ಹೊಸದಾಗಿ ಹುಟ್ಟೋರಿಗೆ ಜಾಗ ಆಗುತ್ತದೆ.
ಶಿವನಿಂದ ಕಲಿಯುವ ಪಾಠಗಳು
1. ಶಿವ ಎಂದರೆ ಶಾಂತ ಎಂದರ್ಥ. ಶಿವನಿಂದ ನಾವು ಕಲಿಯಬೇಕಾದ ಮೊದಲ ಪಾಠವೇ ಶಾಂತತೆ ಅಂದರೆ ಸಹನೆ. ಪ್ರಸನ್ನತೆ. ಎಂತಹ ಸಂದರ್ಭದಲ್ಲೂ ವಿಚಲಿತರಾಗದಂತೆ ಬಾಳುವುದು. ಬದುಕನ್ನು ರೂಪಿಸಿಕೊಳ್ಳುವುದು.
2. ಶಿವ ಎಂದರೆ ಸರಳತೆ. ಜಟಾಜೂಟಧಾರಿಯಾಗಿ, ಮೃಗಚರ್ಮಾಂಬರಿಯಾದ ಶಿವನ ಉಡುಗೆಯೇ ಸರಳ. ಆತನೆಂದೂ ಆಡಂಬರವನ್ನು ಬಯಸಿದವನಲ್ಲ. ನಮ್ಮ ಬದುಕು ಆಡಂಬರದಿಂದ, ಡಾಂಭಿಕ ಜೀವನ ಶೈಲಿಯಿಂದ ಹೊರತಾಗಿರಬೇಕು. ಸರಳತೆಯೇ ಬದುಕಿನ ಉಸಿರಾಗಬೇಕು.
3. ಸದಾಚಾರ ಸದಾಶಯಗಳಿಗೆ ಒಲಿವ ಸದಾಶಿವ ದುರ್ನಡತೆ, ದುರಾಚಾರಗಳನ್ನು ಕಂಡಾಗ ಪ್ರಳಯ ರುದ್ರನಾಗುತ್ತಾನೆ. ಏರುಪೇರಿನ ಹಾದಿಯ ಜೀವನದಲ್ಲೂ ಸುಗುಣ, ದುರ್ಗುಣಗಳು ಎದುರಾಗುತ್ತವೆ. ನಮ್ಮ ದೃಷ್ಟಿ ದುರ್ಗುಣಗಳನ್ನು ಮೆಟ್ಟಿ ನಿಲ್ಲಬೇಕು. ಸಗುಣಗಳನ್ನು ಮನನ ಮಾಡಿಕೊಳ್ಳಬೇಕು.
4. ಯೋಗಿಗಳಿಗೆ ಯೋಗಿಯಾದವನೇ ಸಾಂಬಶಿವ. ಧ್ಯಾನ ತತ್ಪರನಾದ ಯೋಗಿ ಜ್ಞಾನದ ಸಂಕೇತವಾಗಿ ಕಂಗೋಳಿಸುತ್ತಾನೆ. ನಾವಿಲ್ಲಿ ಕಲಿಯಬೇಕಾದ ಅಂಶವೆಂದರೆ, ಜ್ಞಾನಾರ್ಜನೆ ನಮ್ಮ ಗುರಿಯಾಗಬೇಕಾದರೆ ಮೊದಲು ಮನಸ್ಸಿಗೆ ಕಡಿವಾಣ ಹಾಕಿಕೊಳ್ಳಬೇಕು. ಚಂಚಲತೆಯನ್ನು ದೂರಮಾಡಿಕೊಂಡು ಜ್ಞಾನಾರ್ಜನೆಯತ್ತ ಮನಸ್ಸನ್ನು ನಿಲ್ಲಿಸಬೇಕು.
5. ಭಸ್ಮಾರೂಢನಾದ ಶಿವ ರುದ್ರಾಕ್ಷಿಯ ಹೊರತು ಪಡಿಸಿ ಮತ್ಯಾವ ಆಭರಣವನ್ನು ಧರಿಸುವುದಿಲ್ಲ. ನಾವು ಕಲಿಯಬೇಕಾದುದಿಷ್ಟೇ. ಪ್ರಾಪಂಚಿಕ ವಿಷಯಗಳಿಗೆ ಅಂಟಿಕೊಳ್ಳಬಾರದು. ವಿದ್ಯಾರ್ಥಿ ಜೀವನದ ದೃಷ್ಟಿ ಜ್ಞಾನವನ್ನು ಸಂಪಾದಿಸುವತ್ತ ನೆಟ್ಟಿರಬೇಕೇ ಹೊರತು ವಿಷಯ ಲಂಪಟ ಮಾಡುವ ಪ್ರಲೋಭನೀಯ ವಸ್ತುಗಳೆಂದರೆ ಗ್ಯಾಜೆಟ್, ಕಂಪ್ಯೂಟರ್, ಮೊಬೈಲ್ ಇತ್ಯಾದಿ.

ಬದುಕಿನ ಪಂಚಾಕ್ಷರಿ
ಮಹೇಶ್ವರ ಬದುಕಿಗೆ ತುಂಬ ಹತ್ತಿರ. ಸರಳಾತಿ ಸರಳಾತೆ, ಬದುಕಿನ ಮಾರ್ದವತೆ, ಆತ್ಮಸಂಯಮ, ಯೋಗಶಕ್ತಿಗೆ ಪ್ರತಿರೂಪದಂತಿರುವ ಶಿವನ ಜೀವನ ನಮಗೂ ಮಾಗದರ್ಶನ. ಅವನ ಮಹೋನ್ನತ ಬಾಳಿನಿಂದ ಎತ್ತಿಕೊಂಡ ಪಂಚಸೂತ್ರಗಳು ಇಲ್ಲಿವೆ. ಇದೂ ಒಂಥರಾ ಶಿವ ಪಂಚಾಕ್ಷರಿ.

ದೇವ ದೇವರ ದೇವ ಮಹಾದೇವ ಅಂತ ಭಜಕರು ಕೊಂಡಾಡುವ ಮಹೇಶ್ವರ, ಪೊರೆಯುವ ಶಿವನೂ ಹೌದು, ತರಿಯುವ ರುದ್ರನೂ ಹೌದು. ಅವನು ಶಿಷ್ಟ ಪಾಲಕನೂ ಆಗಬಲ್ಲ, ದುಷ್ಟ ದಮನಕನೂ ಆಗಬಲ್ಲ. ಏಕಕಾಲದಲ್ಲಿ ಸೌಂದರ್ಯದ ಖನಿಯೂ, ಭಯ ಹುಟ್ಟಿಸುವ ಸ್ಮಶಾನವಾಸಿಯೂ ಆಗಿ ತೋರಬಲ್ಲ.

ಮೇಲ್ನೋಟಕ್ಕೆ ನೋಡಿದರೆ ಶಿವ ಕಲರ್‌ಪುಲ್ ಆಲ್ಲ. ಬರಿ ಮೈಯ ಭಸ್ಮಧಾರಿ, ಜಟೆಯ ಯೋಗಿಯಲ್ಲಿ ಏನು ಸೌಂದರ್ಯ ಎಂದು ಕೇಳಬಹುದು. ಆದರೆ, ಶಿವ ಜಗತ್ತಿನ ಸೌಂದರ್ಯಕ್ಕೊಂದು ಮೀಮಾಂಸೆ. ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಂಡರೂ ವಸ್ತುಶಃ ಏನೂ ಬೇಡವೆಂಬಂತೆ ಬದುಕುವ ನಿರ್ಮೋಹಿ. ಬಹು ಬಣ್ಣಗಳಲ್ಲಿ ಹರಡಿಕೊಂಡಿರುವ ಶಿವನ ಬದುಕು ಎನ್ನುವುದು ನಿಜಕ್ಕೂ ನಮಗೆ ವಿವೇಕದ ಮಹಾಪಾಠಗಳನ್ನು ಹೇಳಿಕೊಡಬಲ್ಲ ಮಹಾ ಟೀಚರ್. ನಮ್ಮನ್ನು ಆವರಿಸಿಕೊಂಡಿರುವ ಶಿವಶಕ್ತಿ, ಬದುಕಿಗೆ ನೀಡಬಲ್ಲ ಪಂಚಸೂತ್ರಗಳಿವು.
1. ಆತ್ಮಸಂಯಮದಿಂದ ದಿವ್ಯಶಕ್ತಿ
ಶಿವ ಎಂದ ಕೂಡಲೇ ನಮಗೆ ನೆನೆಪಿಗೆ ಬರುವುದು ಯೋಗ ಮುದ್ರೆಯಲ್ಲಿ ಕುಳಿತ ಮಹಾದೇವ. ಧ್ಯಾನ ಭಂಗಿಯಲ್ಲಿ ಕುಳಿತ ಈಶ್ವರ ನಮಗೆ ಆಸೆ, ಮೋಹಗಳ ಪಾಶಕ್ಕೆ ಒಳಗಾಗದ ಮನೋನಿಯಂತ್ರಣದ ಮೂಲಕ ಗುರಿಯತ್ತ ನೇರ ದೃಷ್ಟಿ ಇಟ್ಟ ಒಬ್ಬ ಸಂತನ ಹಾಗೆ ಕಾಣುತ್ತಾನೆ. ತನ್ನ ಅಹಂಕಾರವನ್ನು ನಿಗ್ರಹಿಸಲೇಂದೇ ತ್ರಿಶೂಲಧಾರಿಯಾದ ಆತ ಇತರರ ದುರಹಂಕಾರಗಳನ್ನು ಅದೇ ರೀತಿ ಮೆಟ್ಟಿ ನಿಲ್ಲುತ್ತಾನೆ. ಗಮನಿಸಿ ನೋಡಿ, ಒಳ್ಳೆಯವನಾಗುತ್ತೇನೆ ಎಂದರೆ, ನಿನ್ನ ಮೊರೆ ಹೊಕ್ಕಿದ್ದೇನೆ ಎಂದರೆ ಸಂಪೂರ್ಣ ಬೆಂಬಲ ನೀಡುವ ಈ ದೇವ, ಅನ್ಯಾಯಕ್ಕೆ ಮಾತ್ರ ಝಿರೋ ಟಾಲರೆನ್ಸ್‌ ಪ್ರದರ್ಶಿಸುತ್ತಾನೆ.

2. ಸರಳ ಬದುಕಿನ ಮಹಾಪಾಠ
ಶಿವ ಸಾಕ್ಷಾತ್ ದೇವರು, ತ್ರಿಮೂರ್ತಿಗಳಲ್ಲಿ ಒಬ್ಬರು. ಅವನಿಗೆ ಕೈಲಾಸದಲ್ಲಿ ಅರಮನೆ ಇದ್ದರೂ ಭಸ್ಮದಿಂದ ತುಂಬಿ ಹೋದ ಸ್ಮಶಾನವನ್ನೇ ಮಹಾಮನೆಯಾಗಿಸಿದ್ದರ ಹಿಂದೆ ಅಡಗಿರುವುದು ನಿರ್ಮೋಹ ಶಕ್ತಿ. ತನ್ನ ಕರ್ತವ್ಯವೇ ಪ್ರಧಾನ ಎನ್ನುವ ನೆಲೆಯಲ್ಲಿ ಬದುಕಿನ ಅಂತ್ಯಕ್ಕೆ ಪೂರಕವಾದ ಸ್ಮಶಾನವನ್ನು ನೆಲೆಯಾಗಿ ಆರಿಸಿರಬಹುದು ಶಿವ.

ಶಿವ ದೇವಾಧಿದೇವನೇ ಆದರೂ ಹಲವು ಸಂದರ್ಭದಲ್ಲಿ ನಮ್ಮ ನಿಮ್ಮಂತೆ ಅನಿಸಿಬಿಡುತ್ತಾನೆ. ಭಸ್ಮಾಸುರನ ಮೃತ್ಯು ಹಸ್ತಗಳಲ್ಲಿ ಸಿಕ್ಕಿಹಾಕಿಕೊಂಡಾಗ, ಬ್ರಹ್ಮಕಪಾಲ ಬೆನ್ನಟ್ಟಿ ಬರುವಾಗ ಶಿವನೂ ಯಃಕಶ್ಚಿತ್ ಮನುಷ್ಯನೋ ಅನಿಸಿಬಿಡುತ್ತದೆ. ಆದರೆ, ಇದು ಸರ್ವಶಕ್ತನಿಗೂ ಸಂಕಟ ತಪ್ಪಿದ್ದಲ್ಲ, ಅಂಥ ಸಂದರ್ಭದಲ್ಲಿ ಇನ್ನೊಬ್ಬರ ಸಹಾಯ ಕೇಳುವ ದೀನತೆಯೂ ಬೇಕು ಎಂಬ ಸಂದೇಶ ಕೊಡುತ್ತಾನೆ ಅನಿಸುತ್ತದೆ ಶಿವ.

3. ನೆಗೆಟಿವ್ ಟು ಪಾಸಿಟಿವ್
ಸಮುದ್ರ ಮಥನ ಕಾಲದಲ್ಲಿ ಸಮುದ್ರದಿಂದ ಎದ್ದು ಬಂದ ಹಾಲಾಹಲವನ್ನು ಕುಡಿದ ಪ್ರಕರಣ ಶಿವನ ಪಾಸಿಟಿವ್ ಶಕ್ತಿಗೆ ಒಳ್ಳೆಯ ನಿದರ್ಶನ. ಜಗತ್ತಿನ ಅತ್ಯಂತ ಘೊರ ಸಂಕಟವೊಂದು ಆವರಿಸಿಕೊಳ್ಳಲೇಬೇಕು ಎಂದಾದಾಗ ಅದಕ್ಕೆ ತನ್ನನೇ ತೆರೆದುಕೊಳ್ಳುವ ಔದಾರ್ಯದ ಪ್ರತೀಕವದು. ಜತೆಗೆ, ಏನನ್ನಾದರೂ ಸ್ವೀಕರಿಸಿ ಸಂಭಾಳಿಸಿಕೊಳ್ಳಬಲ್ಲೇ ಎನ್ನುವ ಆತ್ಮವಿಶ್ವಾಸದ ಧನಾತ್ಮಕ ಮನೋಸ್ಥಿತಿಯದು.

ನೇತ್ಯಾತ್ಮಕ ಶಕ್ತಿಯೇ ಆದರೂ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು, ಜಗತ್ತಿಗೂ ತನಗೂ ಇಬ್ಬರಿಗೂ ತೊಂದರೆಯಾಗದಂತೆ ಸಂಭಾಳಿಸಿ ನೀಲಕಂಠನಾದ. ಕೊರಳ ತುಂಬ ವಿಷವೇ ತುಂಬಿದ್ದರೂ ಮಾತಿನಲ್ಲಾಗಲೀ, ಕೃತಿಯಲ್ಲಾಗಲೀ ಅದು ಕಾಣಿಸದಂತೆ ವರ್ತಿಸಿದ್ದರಲ್ಲಿ ಬದುಕಿಗಿರುವ ಪಾಠ ದೊಡ್ಡದು.4. ಅರ್ಧಾಂಗಿಗೆ ಅರ್ಧ ಬದುಕು
ಶಿವನನ್ನು ಕಲ್ಪಿಸಿಕೊಳ್ಳುವ ಚಿತ್ರಗಳಲ್ಲಿ ಅರ್ಧನಾರೀಶ್ವರವೂ ಒಂದು. ಹೆಣ್ಣಿಲ್ಲದೆ ಗಂಡು ಪರಿಪೂರ್ಣನೇ ಅಲ್ಲ, ಗಂಡಿನ ಶಕ್ತಿಯಲ್ಲಿ ಹೆಣ್ಣಿನ ತಾಕತ್ತೂ ಅಡಗಿರುತ್ತದೆ.. ಸತಿ ಶಕ್ತಿ ಎನ್ನುವುದು ನಮ್ಮ ಬದುಕಿನ ಅರ್ಧ ಭಾಗ ಎಂದು ತನ್ನ ರೂಪದಿಂದಲೇ ತಿಳಿಸಿಕೊಟ್ಟವನು ಶಿವ.

ಹೆಣ್ಣೆಂಬುದು ಮಾಯೆ. ಕಂಡಕೂಡಲೇ ಅದರ ಮೋಹಪಾಶಕ್ಕೆ ನೀಳಬಾರದು. ಪರೀಕ್ಷಿಸಿ, ಸ್ಪುಟಗೊಂಡ ನಂತರವೇ ಸ್ವೀಕರಿಸಬೇಕು. ಹಾಗೆ, ಸ್ವೀಕರಿಸಿದ ಬಳಿಕ ಬದುಕಿನುದ್ದಕ್ಕೂ ಕಣ್ಣಿನಂತೆ ರಕ್ಷಿಸಬೇಕು ಎನ್ನುವುದನ್ನು ಶಿವ ಪಾಲಿಸಿ ತೋರಿಸಿದ್ದಾನೆ. ತನ್ನ ನಿರ್ಧಾರದಲ್ಲಿ, ನಡೆಯಲ್ಲಿ, ನುಡಿಯಲ್ಲಿ ಪತ್ನಿ ವಾಕ್ಯಕ್ಕೂ ಗೌರವ ನೀಡಿದವನು ಶಿವ. ಪತ್ನಿಯನ್ನು ಶಿವೆಯಾಗಿಸಿದ್ದು ಇದೇ ಅರ್ಥದಲ್ಲಿ. ಹೆಂಡತಿಯನ್ನು ಮುಡಿಯಲ್ಲಿ ಧರಿಸಿದ ಗಂಡನಿದ್ದರೆ ಅದು ಶಿವ. ಗಂಡ ಕುಡಿದ ವಿಷ ಹೊಟ್ಟೆ ಸೇರದಂತೆ ಗಂಟಲು ಹಿಡಿದದ್ದು ಅನ್ಯೋನ್ಯ ದಾಂಪತ್ಯದ ಗುಟ್ಟು. ಗಂಡ-ಹೆಂಡಿರ ಅನ್ಯೋನ್ಯತೆ ಕೇವಲ ತೋರಿಕೆಯಲ್ಲಿ, ಪ್ರೀತಿಯಲ್ಲಿ ಅಷ್ಟೇ ಅಲ್ಲ. ಆಂತರ್ಯದಲ್ಲೂ ಇರಬೇಕು ಎನ್ನುವುದಕ್ಕೆ ಶಿವ ತತ್ವ ಒಳ್ಳೆಯ ನಿದರ್ಶನ.

5. ಸದಾ ಹೊಸತನದ ಆರಸು
ಶಿವನದ್ದು ಸದಾ ಹೊಸತನದ ಹುಡುಕುವ ಮನಸು. ಬದಲಾವಣೆಗಳಿಗೆ ಹೊಂದಿಕೊಳ್ಳುವ ಮನೋಸ್ಥಿತಿ. ಎಲ್ಲವನ್ನೂ ಸ್ವೀಕರಿಸಿವ ಗುಣ ಆತನದ್ದು ಎನ್ನುವುದಕ್ಕೆ ಸಿಕ್ಕಿದ ಅವಕಾಶಗಳೂ ನಿದರ್ಶನ. ಧರೆಗಿಳಿದ ಗಂಗೆಗೆ ಜಟೆಯನ್ನೇ ಆಧಾರವಾಗಿಸುವ ಕಲ್ಪನೆಯೇ ಅದ್ಭುತ..

ತಪಸ್ಸು ಮಾಡುವ ರಾಕ್ಷಸರಿಗೆ ಎಂಥ ವರವನ್ನೇ ಕೊಟ್ಟರೂ, ಅದರಲ್ಲೊಂದು ಒಳನುಸುಳಿಯನ್ನು ಇಟ್ಟು ದಮನಕ್ಕೆ ಪೂರಕವಾಗುವ ಚಾಣಾಕ್ಷತೆ ಆಧುನಿಕ ನೀತಿ ಪಾಠಗಳಲ್ಲೊಂದು. ಸಪ್ತ ತಾಂಡವಗಳ ಮೂಲಕ ಬದುಕಿನ ನಾನಾ ಮಜಲುಗಳಿಗೆ ನೃತ್ಯ ರೂಪ ಕೊಟ್ಟ ಶಿವ ಖುಷಿಗೂ ಕುಣಿದ, ಸಿಟ್ಟಿಗೂ ಕುಣಿದ.. ಆ ಮೂಲಕ ಜಗತ್ತಿನ ಮೊದಲ ನಾಟ್ಯ ಗುರುವಾದ.
(ವಿವಿಧ ಮೂಲಗಳಿಂದ)


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Dr Gururaj PoshettihalliKannada News WebsiteLatest News KannadaLord ShivaMahashivratriShivaratriಆತ್ಮಸಂಯಮಡಾ. ಗುರುರಾಜ ಪೋಶೆಟ್ಟಿಹಳ್ಳಿತಂಗಾಳಿಶಿವಸಮುದ್ರ ಮಥನ
Share197Tweet123Send
Previous Post

ಸಂತಾನ ಭಾಗ್ಯ ಕರುಣಿಸುವ ಬೆಂಗಳೂರಿನ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿಗೆ ಕ್ಷಣಗಣನೆ

Next Post

ಗಮನಿಸಿ: ಮಾಚ್ 14ರಂದು ಶಿವಮೊಗ್ಗದ ಈ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ: ಮಾಚ್ 14ರಂದು ಶಿವಮೊಗ್ಗದ ಈ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
Deeksha Brahmavara | A Divine Synergy of Artistic Excellence and Intellectual Brilliance

Deeksha Brahmavara | A Divine Synergy of Artistic Excellence and Intellectual Brilliance

February 10, 2026
ರೈಲ್ಒನ್ ಸೂಪರ್ ಆ್ಯಪ್ | ರೈಲ್ವೆ ಸೇವೆಗಳೆಲ್ಲವೂ ಈಗ ಒಂದೇ ಕಡೆ | ಏನೆಲ್ಲಾ ಅನುಕೂಲಗಳಿವೆ?

ರೈಲ್ಒನ್ ಸೂಪರ್ ಆ್ಯಪ್ | ರೈಲ್ವೆ ಸೇವೆಗಳೆಲ್ಲವೂ ಈಗ ಒಂದೇ ಕಡೆ | ಏನೆಲ್ಲಾ ಅನುಕೂಲಗಳಿವೆ?

February 10, 2026
ಚಂದ್ರಯಾನ-4 ಮಿಷನ್‌ ಲ್ಯಾಂಡಿಂಗ್ ಸ್ಥಳ ನಿಗದಿ: ಇಸ್ರೋ

ಚಂದ್ರಯಾನ-4 ಮಿಷನ್‌ ಲ್ಯಾಂಡಿಂಗ್ ಸ್ಥಳ ನಿಗದಿ: ಇಸ್ರೋ

February 10, 2026
ಹಾರನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಲೋಕಾರ್ಪಣೆ

ಹಾರನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಲೋಕಾರ್ಪಣೆ

February 10, 2026
ಕೊಳಚೆ ಪ್ರದೇಶ ನಿವಾಸಿಗಳ ಹಕ್ಕು ರಕ್ಷಣೆ | ಅಧಿಕಾರಿಗಳೊಂದಿಗೆ ಶಾಸಕ ಚನ್ನಬಸಪ್ಪ ಸ್ಥಳ ಪರಿಶೀಲನೆ

ಕೊಳಚೆ ಪ್ರದೇಶ ನಿವಾಸಿಗಳ ಹಕ್ಕು ರಕ್ಷಣೆ | ಅಧಿಕಾರಿಗಳೊಂದಿಗೆ ಶಾಸಕ ಚನ್ನಬಸಪ್ಪ ಸ್ಥಳ ಪರಿಶೀಲನೆ

February 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL