ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಆಟೋಕಾಂಪ್ಲೆಕ್ಸ್ನಲ್ಲಿ ಕೃತಕ ಆಕ್ಸಿಜನ್ ಮಾರಾಟ ಮಾಡುತ್ತಿದ್ದ ಎರಡು ಗ್ಯಾಸ್ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲಿಸಿ ಆಕ್ಸಿಜನ್ ಸಿಲಿಂಡರ್ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ವಿನೋಬನಗರ ಠಾಣಾ ಪಿಎಸ್ಐ ಅವರು ಮೇ 2ರಂದು ಪರಿಶೀಲನೆ ಮಾಡಿದಾಗ ಅನುಮತಿ ಇಲ್ಲದೇ ಇರುವವರಿಗೆ ಕೃತಕ ಆಕ್ಸೀಜನ್ ಸಿಲಿಂಡರ್ ಗಳನ್ನು ಮಾರಾಟ ಮಾಡುತ್ತಿದ್ದ ಆಟೋ ಕಾಂಪ್ಲೆಕ್ಸ್ನಲ್ಲಿರು ವಎರಡು ಗ್ಯಾಸ್ ಏಜೆನ್ಸಿಗಳ ವಿರುದ್ಧ ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆಕ್ಟ್ 2020 ರಿತ್ಯ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಆಕ್ಸಿಜನ್ ತುಂಬಿದ ಒಟ್ಟು 8 ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ಮಿತಿಮೀರಿದ್ದು, ಸೋಂಕಿತರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ನ ಅವಶ್ಯಕತೆ ಇರುವುದರಿಂದ ಕೃತಕ ಆಕ್ಸಿಜನ್ ಸಿಲಿಂಡರ್ಗಳನ್ನು ಯಾವುದೇ ಖಾಸಗಿ ಕಂಪೆನಿಗಳಿಗೆ, ಗ್ಯಾರೇಜ್ಗಳಿಗೆ, ಕೈಗಾರಿಕೆಗಳಿಗೆ ಮಾರಾಟ ಮಾಡದೇ, ಕೇವಲ ಆಸ್ಪತ್ರೆಯ ಉಪಯೋಗಕ್ಕಾಗಿ ಹಾಗೂ ಅನುಮತಿ ನೀಡಿದ ಕೈಗಾರಿಕೆಗಳಿಗೆ ಮಾತ್ರ ಬಳಸಲು ರಾಜ್ಯ ಸರ್ಕಾರದ ಆದೇಶಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post