Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಲಾಕ್ ಡೌನ್ ಸಂದರ್ಭ ಬಳಸಿಕೊಂಡು ಕಳಪೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಹುನ್ನಾರ

May 21, 2021
in ಭದ್ರಾವತಿ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್

ಭದ್ರಾವತಿ: ತಾಲೂಕಿನಲ್ಲಿ ಕೊರೋನಾ ಸೋಂಕಿರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಾರದಿರುವುದರಿಂದ ಬಿಗಿಗೊಳಿಸಲಾಗಿರುವ ಲಾಕ್‌ಡೌನ್ ಪರಿಣಾಮ ರಸ್ತೆಗಳಲ್ಲಿ ವಾಹನ ಸಂಚಾರ ಜನಸಂಚಾರ ಬಹುತೇಕ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೊರೋನಾ ಆರಂಭವಗುವ ಮುನ್ನ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಕೆಲವು ಕಾಮಗಾರಿಗಳು ಅಸಮರ್ಪಕ ಹಾಗೂ ಬೇಕಾಬಿಟ್ಟಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಆರೋಪ ಕೇಳಿ ಬಂದಿದ್ದವು. ಈ ಮೇರೆಗೆ ಸ್ಥಗಿತಗೊಂಡಿದ್ದ ಕೆಲವು ಕಾಮಗಾರಿಗಳು ಈಗ ಲಾಕ್‌ಡೌನ್ ಇರುವ ವೇಳೆ ಜನರು ಬೀದಿಗೆ ಬರುವಂತಿಲ್ಲದಿರುವ ಸಂದರ್ಭವನ್ನು ಬಳಸಿಕೊಂಡು ಸ್ಥಗಿತಗೊಂಡಿದ್ದ ಅಂತಹ ಕಾಮಗಾರಿಗಳಿಗೆ ಮರು ಚಾಲನೆ ನೀಡುವ ಪ್ರಯತ್ನ ಆರಂಭಗೊಂಡಂತಿದೆ.

ಚನ್ನಗಿರಿ ರಸ್ತೆ ಅಗಲೀಕರಣ
ನಗರದ ಜನಸಂಖ್ಯೆ, ವಾಹನ ಸಂಖ್ಯೆ ಏರಿದ ಕಾರಣ ಜನ ಸಂಚಾರ ವಾಹನ ನಿಲುಗಡೆಗೆ ತೊಂದರೆಯಗುತ್ತಿದ್ದು ಇಲ್ಲಿನ ಮಾಧವಾಚಾರ್ ರಸ್ತೆಯಿಂದ ರಂಗಪ್ಪ ವೃತ್ತದವರೆಗೆ ಹಾಗು ಅಲ್ಲಿಂದ ಚನ್ನಗಿರಿ ರಸ್ತೆ ಪೂರ್ಣವಾಗಿ ಅಗಲೀಕರಣವಾಗಬೇಕು ಎಂಬುದು ಸಾರ್ವಜನಿಕರ ಒತ್ತಡ ಪೂರ್ವಕ ಅಭಿಪ್ರಾಯ. ಆದರೆ ಇಲ್ಲಿನ ಕೆಲವು ಅಧಿಕಾರಶಾಹಿ ರಾಜಕೀಯ ಹಿತಾಸಕ್ತಿಗಳ ಕೈವಾಡದಿಂದಾಗಿ ಮಾಧವಾಚಾರ್ ರಸ್ತೆಯಿಂದ ರಂಗಪ್ಪ ವೃತ್ತದವರೆಗಿನ ರಸ್ತೆ ಅಗಲೀಕರಣಕ್ಕೆ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳು ಕೈ ಹಾಕಲೇಯಿಲ್ಲ.
ಆದರೆ ರಂಗಪ್ಪ ವೃತ್ತದಿಂದ ಚನ್ನಗಿರಿ ಕಡೆ ಹೋಗುವ ರಸ್ತೆಯನ್ನು ಅಗಲೀಕರಣ ಮಾಡುವ ಕೆಲಸವನ್ನು ಲಾಕ್ ಡೌನ್ ಸಂದರ್ಭದಲ್ಲಿ ಯಾರು ರಸ್ತೆಗಿಳಿಯುವುದಿಲ್ಲ ಎಂಬ ಖಾತ್ರಿಯೊಂದಿಗೆ ಕಳಪೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ಮಾಡಿ ಮುಗಿಸಿದ್ದಾರೆ.

ಸದರಿ ರಸ್ತೆಯನ್ನು ಮಾಡಬೇಕಾದ ಪ್ರಮಾಣದಲ್ಲಿ ಅಗಲೀಕರಣ ಮಾಡದೆ, ಈ ಹಿಂದೆ ಇದ್ದಷ್ಟೇ ವಿಸ್ತೀರ್ಣದ ಟಾರ್ ರಸ್ತೆಯನ್ನೇ ಅಲ್ಪ-ಸ್ವಲ್ಪ ಅಗಲ ಮಾಡಿದಂತೆ ಮಾಡಿ, ಅದರ ಉಭಯಪಾರ್ಶ್ವಗಳಲ್ಲಿ ಮಣ್ಣಿನ ರಸ್ತೆಯನ್ನೇ ಫುಟ್‌ಪಾತ್ ರೀತಿ ಮಾಡಿ ರಸ್ತೆ ಅಗಲೀಕರಣ ಆಯಿತು ಎನಿಸಿದ್ದಾರೆ.

ಕೋರ್ಟ್ ರಸ್ತೆ
ನಗರದ ತಾಲೂಕು ಕಚೇರಿ ರಸ್ತೆಯನ್ನು ಅಗಲೀಕರಣದ ನೆಪದಲ್ಲಿ ಅ ಸಂಖ್ಯಾತ ಬೃಹತ್ ಮರಗಳನ್ನು ಕಡಿದು ಹಾಕಲಾಯಿತು. ಆದರೆ ಮಾಡಿರುವ ರಸ್ತೆ ಅಗಲೀಕರಣ ಅಸಮರ್ಪಕವಾಗಿದ್ದು, ಒಂದೊಂದು ಕಡೆ ಒಂದೊಂದು ಅಳತೆಯಂತೆ ಮನಸ್ಸಿಗೆ ಬಂದಂತೆ ಸಿಮೆಂಟ್ ರಸ್ತೆ ಮಾಡಿ, ಕೋರ್ಟ್ ಮುಂದೆ ರಸ್ತೆಯ ವಿಸ್ತೀರ್ಣವನ್ನು ಮಾಡದೆ ಅದಕ್ಕೇ ತೇಪೆ ಹಾಕುವ ಕೆಲಸಕ್ಕೆ ಮುಂದಾದಾಗ ನಗರದ ನ್ಯಾಯವಾದಿಗಳ ಸಂಘ ಹಾಗೂ ಸಾರ್ವಜನಕರು ಖಂಡಿಸಿ ಆಗಿರುವ ಲೋಪವನ್ನು ಸರಿಪಡಿಸುವಂತೆ 2020ರ ಮಾರ್ಚ್ ತಿಂಗಳಲ್ಲಿ ಪ್ರತಿಭಟನೆ ಮಾಡಿದ್ದರು. ಆಗ ಅಧಿಕಾರಿಗಳು ಸ್ಥಳಕ್ಕೆ ಬಂದು ಆಗಿರುವ ಲೋಪವನ್ನು ಸರಿ ಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ವಕೀಲರ ಸಂಘ ಪ್ರತಿಭಟನೆಗೆ ನಿಲ್ಲಿಸಿತ್ತು.
ಈಗ ಲಾಕ್ ಡೌನ್ ಇರುವುದರಿಂದ ನ್ಯಾಯಾಲಯವೂ ಸಹ ಹಲವು ನಿರ್ಬಂಧಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ನ್ಯಾಯವಾದಿಗಳೂ ಸಹ ನ್ಯಾಯಾಲಯಕ್ಕೆ ಬರುತ್ತಿರುವುದು ಕಡಿಮೆಯಾಗಿದೆ. ಈಗ ಯಾವುದೇ ರೀತಿ ಕಾಮಗಾರಿಯನ್ನು ಯಾರ ವಿರೊಧವೂ ಇಲ್ಲದೆ ಮನಸ್ಸಿಗೆ ಬಂದಂತೆ ಪೂರ್ಣಗೊಳಿಸಬಹುದೆಂದು ಅರಿತು, ರಸ್ತೆ ಅಗಲಿಕರಣ ಹಾಗೂ ವೃತ್ತ ಅಗಲೀಕರಣ ಮಾಡುವ ಜವಾಬ್ಧಾರಿ ಹೊತ್ತಿರುವ ಲೋಕೋಪಯೋಗಿ ಇಲಾಖೆ, ನಗರಸಭೆ ಈಗ ಶುಕ್ರವಾರದಿಂದ ರಂಗಪ್ಪ ವೃತ್ತದ ಅಗಲೀಕರಣದ ಹೆಸರಲ್ಲಿ ಕಾಮಗಾರಿಯನ್ನು ಆರಂಭಿಸಿರುವಂತೆ ಕಾಣುತ್ತದೆ. ಸಾರ್ವಜನಕಿರ ಉಪಯೋಗಕ್ಕಾಗಿ ಮಾಡುವ ರಸ್ತೆ ಅಗಲೀಕರಣ, ವೃತ್ತಗಳ ಅಗಲೀಕರಣದಲ್ಲಿ ಈ ರೀತಿಯ ರಾಜಕೀಯ ಊರಿನ ಹಿತದೃಷ್ಟಿಯಿಂದ ಸಮರ್ಥನೀಯವಲ್ಲ ಎಂಬುದನ್ನು ಸರ್ಕಾರಿ ಅಧಿಕಾರಿಗಳು ಹಾಗೂ ಜನರಿಂದ ಜನರಿಗಾಗಿ ಜನರೇ ಆರಿಸಿರುವ ಅಧಿಕಾರರೂಢ ರಾಜಕಾರಣಿಗಳು ಅರಿಯಬೇಕಿದೆ.
ಒಂದೊಮ್ಮೆ ಕೋರ್ಟ್ ಎದುರಿಗೆ ರಸ್ತೆ ಕಾಮಗಾರಿಯಲ್ಲಿ ಆಗಿರುವ ಲೋಪದೋಷವನ್ನು ಸರಿಪಡಿಸದೇ ಹಾಗೇ ಸಂಕುಚಿತಗೊಳಿಸಿ ರಸ್ತೆ ಅಗಲೀಕರಣ ಪೂರ್ಣಗೊಳಿಸಿದರೆ, ಅದರಿಂದ ಅಧಿಕಾರರೂಢರ ಕೆಲವು ಹಿಂಬಾಲಕರಿಗೆ ಅನುಕೂಲವಾಗಬಹುದು. ಆದರೆ ಊರಿನ ಉದ್ಧಾರ ಮಾಡುತ್ತಾರೆ ಎಂದು ನಂಬಿ ಮತ ಹಾಕಿ ಆರಿಸಿರುವ ಜನಸಾಮಾನ್ಯರಿಗೆ ಇದರಿಂದ ಅನಾನುಕೂಲವಾಗುತ್ತದೆ ಎಂಬ ಸಾಮಾನ್ಯ ಪ್ರಜ್ಞೆ ಜನನಾಯಕರಲ್ಲಿ ಮರೆಯಾಗಬಾರದಲ್ಲವೇ.
ರಸ್ತೆ ಅಗಲೀಕರಣ ಕಾಮಗಾರಿಯಾಗಲಿ, ವೃತ್ತದ ಅಗಲೀಕರಣ ಕಾಮಗಾರಿಯಾಗಲಿ, ಅಧಿಕಾರಿಗಳು ಸಹ ಸರ್ಕಾರದ ಕೆಲಸ ದೇವರ ಕೆಲಸ ಎಂಬುದನ್ನು ಕರ್ತವ್ಯ ನಿರ್ವಹಣೆಯಲ್ಲಿ ಪಾಲಿಸಿದಾಗ ಈ ರೀತಿ ಕಳಪೆ ಕಾಮಗಾರಿ ಅಥವಾ ಅಸಮರ್ಪಕ ಕಾಮಗಾರಿಗಳಾಗದಂತೆ ತಡೆಯಬಹುದು. ಅಧಿಕಾರ ಶಾಶ್ವತವಲ್ಲ. ಆದರೆ ಮಾಡಿರುವ ಕಾಮಗಾರಿಗಳು ನಿಯಮಾನುಸಾರ ಸಧೃಡವಾಗಿದ್ದರೆ ಅದರಿಂದ ಜನರು ಅಧಿಕಾರಿಗಳನ್ನು ಮತ್ತು ಜನಪ್ರತಿನಿದಿಗಳನ್ನು ಸದಾ ಸ್ಮರಿಸುತ್ತಾರೆ.

ನಾಗರೀಕರೆಲ್ಲ ಕೊರೊನಾ ಸಂಕಷ್ಟದ ಕಪಿಮುಷ್ಠಿಯಲ್ಲಿ ಸಿಲುಕಿ ಹೊರ ಜಗತ್ತಿಗೆ ಬರಲಾಗದ ಪರಿಸ್ಥಿತಿಯ ದುರ್ಲಾಭ ಬಳಸಿಕೊಂಡು ಹೊಸದಾದ ಮತ್ತು ಸ್ಥಗಿತಗೊಂಡೊರುವ ಕಳಪೆ ಕಾಮಗಾರಿಗಳನ್ನು ತೇಪೆಹಚ್ಚಿ ಮುಗಿಸಲು ಹೊರಟಿರುವವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಲೇಖನ: ಕೋ.ಶ್ರೀ. ಸುಧೀಂದ್ರ, ಭದ್ರಾವತಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: BhadravathiKannada News WebsiteLatest News KannadaLocal NewsMalnad NewsRoad WideningShimogaShivamoggaShivamogga Newsಕೊರೋನಾ 2ನೆಯ ಅಲೆಭದ್ರಾವತಿಮಲೆನಾಡು ಸುದ್ಧಿರಸ್ತೆ ಅಗಲೀಕರಣಲಾಕ್ ಡೌನ್ಶಿವಮೊಗ್ಗ ನ್ಯೂಸ್
Previous Post

BIG BREAKING NEWS: ರಾಜ್ಯದಾದ್ಯಂತ ಜೂನ್ 7ರವರೆಗೆ ಲಾಕ್‌ಡೌನ್ ವಿಸ್ತರಣೆ: ಪೊಲೀಸರಿಗೆ ಫುಲ್ ಪವರ್

Next Post

ಕೋವಿಡ್ ಹಾಗೂ ಬ್ಲ್ಯಾಕ್‌ಫಂಗಸ್ ಬಗ್ಗೆ ಆತಂಕಪಡದೆ ಜಾಗೃತರಾಗಿರಿ: ಸಚಿವ ಬಿ.ಸಿ. ಪಾಟೀಲ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಕೋವಿಡ್ ಹಾಗೂ ಬ್ಲ್ಯಾಕ್‌ಫಂಗಸ್ ಬಗ್ಗೆ ಆತಂಕಪಡದೆ ಜಾಗೃತರಾಗಿರಿ: ಸಚಿವ ಬಿ.ಸಿ. ಪಾಟೀಲ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮೈಸೂರು ರೈಲ್ವೆ ನಿಲ್ದಾಣ ಕುರಿತಾಗಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದ ರೈಲ್ವೆ ಇಲಾಖೆ

June 30, 2025

ಹಾಸನ | ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಮೂವರ ಸಾವು | ಆತಂಕ

June 30, 2025

ಆಷಾಢ ಏಕಾದಶಿ | ಹುಬ್ಬಳ್ಳಿಯಿಂದ ಪಂಢರಪುರಕ್ಕೆ ತೆರಳುವ ಭಕ್ತರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್

June 30, 2025

Dyson announced the results of its first Global Wet Cleaning Study

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮೈಸೂರು ರೈಲ್ವೆ ನಿಲ್ದಾಣ ಕುರಿತಾಗಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದ ರೈಲ್ವೆ ಇಲಾಖೆ

June 30, 2025

ಹಾಸನ | ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಮೂವರ ಸಾವು | ಆತಂಕ

June 30, 2025

ಆಷಾಢ ಏಕಾದಶಿ | ಹುಬ್ಬಳ್ಳಿಯಿಂದ ಪಂಢರಪುರಕ್ಕೆ ತೆರಳುವ ಭಕ್ತರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!