ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೆ ತಾಲ್ಲೂಕು ಬಿಜೆಪಿ ಪಕ್ಷದವರು ಪಟ್ಟಣ ಪುರಸಭೆ ಕಛೇರಿ ಎದರು ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು. ಮೊದಲ ಬಾರಿಗೆ ಡಿ.ಹೆಚ್. ಶಂಕರಮೂರ್ತಿಯವರ ಮಗ ಡಿ.ಎಸ್. ಅರುಣ್ ಗೆಲುವು ಸಾಧಿಸಿರುವುದು ಜಿಲ್ಲೆಯ ಬಿಜೆಪಿಗೆ ಬಲ ಬಂದಂತಾಗಿದೆ ಎಂದ ಮುಖಂಡರು ವಿಜಯ ಸಂಕೇತ ಸೂಚಿಸಿದರು.

ಈ ವೇಳೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಜಿಲ್ಲಾ ವಿಶೇಷ ಆಹ್ವಾನಿತರಾದ ಗಜಾನನರಾವ್, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಪುರಸಭೆ ಪ್ರಭಾರ ಅಧ್ಯಕ್ಷ ಮಧುರಾಯಶೇಟ್, ಸದಸ್ಯರಾದ ವೀರೇಶ್ ಮೇಸ್ತ್ರಿ, ನಟರಾಜ್, ಪ್ರೇಮಾ ಟೋಕಪ್ಪ, ಜಯಲಕ್ಷ್ಮೀ, ಪರಮೇಶ್, ಪ್ರಭು ಮೇಸ್ತ್ರಿ, ಅನ್ಸರ್, ಪಕ್ಷ ಪ್ರಮುಖರಾದ ಗೌರಮ್ಮ ಭಂಡಾರಿ, ಸಂಜೀವ್ ಆಚಾರ್, ಮೋಹನ್ ಇನ್ನೂ ಅನೇಕರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















