No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Saturday, September 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಪಾಕಿಸ್ಥಾನದ ಸಮರ ಸನ್ನಾಹ !

kalpa News by kalpa News
October 18, 2016
in Army
0
Share on FacebookShare on TwitterShare on WhatsApp

ಇಲ್ಲಿ ಎರಡು ರೀತಿಯಲ್ಲಿ ನೋಡಬೇಕು. ಮೊದಲನೆಯದ್ದು ಗ್ರಹಗತಿ ಆಧಾರಿತ.ಆದರೆ ಜ್ಯೋತಿಷ್ಯಾಧಾರಿತವಾಗಿ ಇದನ್ನು ಹೇಳುವ ಹಾಗಿಲ್ಲ.ಯಾಕೆಂದರೆ, ಹಿಂದೆಯೂ, ಇಂದೂ ,ಮುಂದಕ್ಕೆಯೂ ಜ್ಯೋತಿಷ್ಯಾಧರಿತವಾಗಿ ನಿರ್ಧರಿಸಿಕೊಂಡು ಆಡಳಿತ ನಡೆಸುವ ವಾಡಿಕೆ ಇಲ್ಲ.ಯಾಕೆಂದರೆ ,ಜ್ಯೋತಿಷ್ಯ ಸತ್ಯವಾಗಿದ್ದರೂ ಅದರ ಫಲಗಳನ್ನು ನಿಖರವಾಗಿ ಜ್ಯೋತಿಷ್ಯ ಕತೃಗಳಿಗೇ ಹೇಳಲಾಗಿಲ್ಲ ಅಂದ ಮೇಲೆ ಈಗಿನ ಜ್ಯೋತಿಷ್ಯರು ಹೇಳಲು ಸಾಧ್ಯವೇ? ಆದರೂ ಜ್ಯೋತಿರ್ಗಣಿತದ ಆಧಾರದಲ್ಲಿ ಹೀಗೆ ಆಗಬಹುದು ಎಂಬ ಸೂಚನೆಯನ್ನು( ನಿಖರತೆ ಇರಲಿ ಇಲ್ಲದಿರಲಿ) ಕೊಡುವುದು ಜ್ಯೋತಿಷ್ಯ ಧರ್ಮವಾಗುತ್ತದೆ.

ಮುಂದಿನ ವರ್ಷ ಜನವರಿ ಇಪ್ಪತ್ತೊಂಭತ್ತನೆಯ ತಾರೀಕಿನ ನಂತರ ಮಂದ ಗತಿಯ ಗ್ರಹನಾದ ಶನಿಯು ಧನು ರಾಶಿಯಲ್ಲಿ ಉದಯವಾಗುತ್ತಾನೆ. ಆಗ , ಧನು ರಾಶಿಯ ಅಧಿಪತಿ ಗುರು ಮಾರಕನಾಗಿ ಕನ್ಯಾ ರಾಶಿಯಲ್ಲಿ ಶನಿಗೆ ಕರ್ಮ ಸ್ಥಾನದಲ್ಲಿ ಇರುತ್ತಾನೆ. ಶನಿ ಮರಣ ಕಾರಕ, ರಾಜಕೀಯ ಇತ್ಯಾದಿ ಸೂಚಕ.ಇವನ ಆಯುಧ ಧನುಸ್ಸು.ಈಗ ಬರುವುದೂ ಅದೇ ಅಗ್ನಿತತ್ವದ ರಾಶಿ ಧನುಸ್ಸಿಗೆ. ಒಬ್ಬ ಪಾಪಗ್ರಹನ ಕೇಂದ್ರದಲ್ಲಿ ಶುಭಗ್ರಹನಿದ್ದರೆ ಶುಭಗ್ರಹ ಶಕ್ತಿಯನ್ನು ಪಾಪಗ್ರಹ ಕಸಿದುಕೊಳ್ಳುತ್ತಾನೆ. ಗುರು ಸಾತ್ವಿಕವೂ, ನಿರ್ಣಯಕಾರಕನೂ ಆಗಿರುವ ಕರ್ಮ ಕಾರಕ ಗ್ರಹನಾಗಿರುತ್ತಾನೆ. ಅಂದರೆ ಮರಣ ಕಾರಕನು ಬಲವಂತವಾಗಿ ಕರ್ಮಕಾರಕಾಧಿಪತಿಯ ಮೇಲೆ ಒತ್ತಡ ಹಾಕುತ್ತಾನೆ ಎಂದರ್ಥ.ಈ ರಾಷ್ಟ್ರವನ್ನುವಿಷ್ಲೇಶಣೆಯ ಉದ್ದೇಶವು ಈಗಿನ ರಾಜತಾಂತ್ರಿಕ ವಿದ್ಯಾಮಾನದ ವಿಚಾರವನ್ನು ತಾಳೆಮಾಡಿ ನೋಡಲು ಅನುಕೂಲ ಎಂಬ ದೃಷ್ಟಿಯಲ್ಲಿ ತಿಳಿಸಿದ್ದೇನೆ.

ಇನ್ನೊಂದೆಡೆ ಇದಕ್ಕೆ ಪೂರಕವಾದ ರಾಜಕೀಯವಾಗಿ ಬೆಳವಣಿಗೆ ನೋಡೋಣ.
ಗುರುವಾಗಿ ( ಪ್ರಕೃತಿಯ ಸಾತ್ವಿಕ ತತ್ವ ಪ್ರತಿಪಾದಕ ಗುರು) ಭಾರತವನ್ನು ತೆಗೆದುಕೊಂಡಾಗ ,ಶನಿಯನ್ನು ಪಾಕಿಸ್ಥಾನವೆಂದು ತೆಗೆದುಕೊಂಡಾಗ ಏನಾಗುತ್ತದೆ ನೋಡೋಣ.

ಈಗ ಯುದ್ಧ ವಾತಾವರಣ ಸೃಷ್ಟಿಸುತ್ತಿರುವುದು ಪಾಕಿಸ್ಥಾನ. ಅಂದರೆ ಭಾರತವನ್ನು ಆಹ್ವಾನಿಸುವುದು. ಅನಿವಾರ್ಯವಾಗಿ ಭಾರತ ಯುದ್ಧಕ್ಕೆ ಇಳಿಯಲೇ ಬೇಕಾಗುತ್ತದೆ‌.
ಅತ್ತ ಪಾಕಿನ ಪರಿಸ್ಥಿತಿಯೇ ಬೇರೆ.ಹೆಸರಿಗೆ ಪ್ರಜಾಪ್ರಭುತ್ವ ಸರಕಾರ.ಪ್ರಜಾಪ್ರಭುತ್ವ ಸರಕಾರಕ್ಕೆ ಇಡೀ ಜಗತ್ತೇ ಮನ್ನಣೆ ಕೊಡಬೇಕಾದುದು ಈಗಿನ ಸಂಪ್ರದಾಯ. ಆ ಮನ್ನಣೆಗಾಗಿಯೇ ಪಾಕಿಸ್ಥಾನದಲ್ಲಿ ಪ್ರಜಾಪ್ರಭುತ್ವ ಇರುವುದೇ ಹೊರತು ಪಾಕಿನ ಜನರ ಉದ್ಧಾರಕ್ಕಾಗಿ ಅಲ್ಲವೇ ಅಲ್ಲ. ಇನ್ನೊಂದು ಕಡೆ ಜಗತ್ತನ್ನೇ ಇಸ್ಲಾಮೀಕರಣ ಮಾಡಲು ಹೊರಟ ವರ್ಗವೇ ಈಗ ಭಯೋತ್ಪಾದಕರಾಗಿ ಜಗತ್ತಿನ ಶಾಂತಿಗೆ ಮಾರಕವಾಗಿದೆ. ಇಡೀ ಇಸ್ಲಾಂ ಸಮುದಾಯ ನಿಜವಾಗಿಯೂ ಇದನ್ನು ಬಯಸುವುದಿಲ್ಲ. ಅಶಾಂತಿಯನ್ನೂ ಬಯಸುವುದೇ ಇಲ್ಲ.‌ಆದರೆ ಭಯೋತ್ಪಾದಕ ಜನರಿಗೆ ಪಾಕಿಸ್ಥಾನ, ಅಫಘಾನಿಸ್ಥಾನ, ಕೆಲ ರಷ್ಯಾದಿಂದ ವಿಭಜಿಸಲ್ಪಟ್ಟ ತುಂಡು ರಾಜ್ಯಗಳು ಆಶ್ರಯ ನೀಡುತ್ತಿದೆ.ಆದರೆ ಹೆಚ್ಚಾಗಿ ಅಮೇರಿಕ ರಷ್ಯಾಗಳ ಧಾಳಿಯಲ್ಲಿ ಅವುಗಳ ನೆಲೆಗೆ ಭದ್ರತೆ ಇಲ್ಲದಂತಾಗಿದೆ.ಆ ಕಡೆ ಸೌದಿ ರಾಷ್ಟ್ರಗಳಲ್ಲಿ ಇಂತಹ ಭಯೋತ್ಪಾದಕರಿಗೆ ಆಶ್ರಯ ನೀಡುವುದಿಲ್ಲ. ಈಗ ವಿಶೇಷ ಆಶ್ರಯ ನೀಡಿದ ರಾಷ್ಟ್ರ ಎಂದರೆ ಪಾಕಿಸ್ಥಾನ.
ಈ ರೀತಿಯ ಆಶ್ರಯ ನೀಡಿದ್ದು ನಿಜವಾದ ಪಾಕ್ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.ಈಗ ಪಾಕ್ ಆಡಳಿತ ಸರಕಾರವು ಕೇವಲ ಒಂದು ಮುನಿಸಿಪಾಲಿಟಿಯ ಕೆಲಸಕ್ಕೇ ಸೀಮಿತವಾದಂತಿದೆ.. ಹೊರ ರಾಷ್ಡ್ರದ ಜತೆ ಯಾವುದಾದರೂ ಒಪ್ಪಂದ ಮಾಡಿಕೊಳ್ಳಬೇಕಾದ ರೂ ಈ ಮೂಲಭೂತ ವಾದಿಗಳಿಗೆ ತೊಂದರೆ ಬಾರದಂತೆ ಆಗಿರಬೇಕಾಗುತ್ತದೆ.

ಪಾಕಿನಲ್ಲಿ ಅಣ್ವಸ್ತ್ರಗಳಿವೆ. ಅದನ್ನು ಕಳುಹಿಸುವ ಕ್ಷಿಪಣಿಗಳೂ ಇವೆ. ಇದೆಲ್ಲವೂ ಈ ಭಯೋತ್ಪಾದಕರಿಗೆ ಬೇಕಾಗಿಯೇ ಮಾಡಿದಂತಿದೆ‌. ನೀವೇ ಯೋಚಿಸಿ ನೋಡಿ, ಅಷ್ಟು ಸಣ್ಣ ರಾಷ್ಟ್ರಕ್ಕೆ ಆರು ಲಕ್ಷ ಸೈನ್ಯ, ಅಣ್ವಸ್ತ್ರಾದಿಗಳು ಯಾಕೆ ಬೇಕು? ಸರಿಯಾಗಿ ಊಟಕ್ಕೇ ತತ್ವಾರ ಇರುವ ರಾಷ್ಟ್ರಕ್ಕೆ ಇಷ್ಟೊಂದು ಸೈನ್ಯಕ್ಕೆ ಖರ್ಚು ಮಾಡುವುದು ಬೇಕೇ? ಭಾರತ ಎಂದೂ ಪಾಕಿಸ್ಥಾನವನ್ನು ವಶಪಡಿಸಿಕೊಳ್ಳುವ ಸೂಚನೆಯಲ್ಲಿಲ್ಲ. ಆ ಕಡೆ ಇರಾನ್ ಪಾಕಿಗೇನೂ ಕಣ್ಣಿಟ್ಟಿಲ್ಲ.ಅಫಘಾನಿಸ್ಥಾನಕ್ಕೂ ಪಾಕಿಸ್ಥಾನ ನಮ್ಮದಾಗಬೇಕೆಂದೇನಿಲ್ಲ.ಅದೂ ಅಲ್ಲದೆ ಇವೆಲ್ಲ ಒಂದೇ ಧರ್ಮಾಚರಣೆಯ ದೇಶಗಳು. ಹಾಗಿರುವಾಗ ಧಾರ್ಮಿಕ ವಿಚಾರದಲ್ಲಿ ಯುದ್ಧವಾಗದು. ಈ ಕಡೆ ಭಾರತವು ಜಾತ್ಯಾತೀತ ರಾಷ್ಟ್ರ. ಇಲ್ಲಿ ಹಿಂದುಗಳು,ಮುಸ್ಲಿಮರು,ಕ್ರಿಶ್ಚನರು ಇದ್ದು ಅವರೆಲ್ಲರೂ ಸಮಾನತೆಯಲ್ಲಿರುವವರು. ಇಲ್ಲದೆ ಮುಸ್ಲಿಮರಿಗೆ ತಲಾಕ್ ಮುಂತಾದ ಧರ್ಮಾಚರಣೆಗೆ ಶೆರಿಯತ್ ಕಾನೂನಿನ ಪಾಲನೆಗೂ ಭಾರತದಲ್ಲಿ ಅವಕಾಶ ನೀಡಿದೆ. ಹೀಗಿರುವಾಗ ಭಾರತವು ಪಾಕಿಸ್ಥಾನದ ಮೇಲೆ ಧಾಳಿಮಾಡೀತು ಎಂದು ಪ್ರಪಂಚದ ಯಾವ ರಾಷ್ಟ್ರವೂ ಹೇಳುವುದಕ್ಕಾಗಲೀ, ಸಂಶಯ ಪಡುವುದಕ್ಕಾಗಲೀ ಸಾಧ್ಯವೇ ಇಲ್ಲ. ಯಾವುದೋ ಆಂತರಿಕ ವಿಚಾರದಲ್ಲಿ ಹಿಂದು ಮುಸ್ಲಿಂ ಕಲಹಗಳು ಯಾವಾಗಲೋ ಒಮ್ಮೊಮ್ಮೆ ಕಾಣಿಸಿಕೊಂಡರೆ ಅದು ಈ ದೇಶದ ಆಂತರಿಕ ವಿಚಾರ.ಹೀಗೇನಾದರೂ ಸಂಭವಿಸಿದರೆ ಸರಕಾರವು ಯಾರ ಪರವೂ ಬೆಂಬಲ ನೀಡುವುದೂ ಇಲ್ಲ. ಕಾನೂನು ಪಾಲನೆ ಮಾಡಬಹುದಷ್ಟೆ. ಹೀಗಿದ್ದರೂ ಪಾಕಿಸ್ಥಾನ ಇಷ್ಟು ಪ್ರಮಾಣದ ಸೈನ್ಯ, ಆಯುಧ ಸಂಗ್ರಹ,ಅಣ್ವಸ್ತ್ರ ಇಟ್ಟುಕೊಂಡಿದೆ ಎಂದರೆ, ಇದು ಮತಾಂಧ ಮೂಲಭೂತವಾದಿ ಭಯೋತ್ಪಾದಕರ ಹಿಡಿತವೇ ಆಗಿದೆ.ಇಲ್ಲಿ ನೆಲೆ ನಿಂತರೆ ಇಡೀ ಪ್ರಪಂಚವನ್ನೇ ಬೇಕಾದಂತೆ ಸುಡಬಹುದು ಎಂಬ ಲೆಕ್ಕಾಚಾರ ಇವರದ್ದು ಆಗಿದೆ.
ಇಲ್ಲಿ ಪಾಕಿನ ರಕ್ಷಣಾ ಸೈನ್ಯದಲ್ಲೂ ಭಿನ್ನಾಭಿಪ್ರಾಯ ಗಳಿವೆ. ಒಂದನೆಯ ವರ್ಗ ಮತಾಂಧ ಭಯೋತ್ಪಾದಕರೊಂದಿಗೆ.ಇನ್ನೊಂದು ‘ ನಾಮ್ಕೇ ವಾಸ್ತೇ ‘ ಸರಕಾರದ ಪರವಾಗಿ. ಸರಕಾರದ ಜುಟ್ಟು ಭಯೋತ್ಪಾದಕರ ಕೈಯಲ್ಲಿ ! ಈಗ ನೀವೇ ಯೋಚಿಸಿ.ಇಂತಹ ದುರ್ಬಲ ಸರಕಾರವು ಈ ಅಪಾಯಕಾರಿ ಅಸ್ತ್ರಗಳನ್ನು ಭದ್ರವಾಗಿಟ್ಟುಕೊಳ್ಳಲು ಸಾಧ್ಯವೇ?

ಸತತ ಭಯೋತ್ಪಾದಕರ ಧಾಳಿಯನ್ನು ಮೋದಿಯವರ ಸರಕಾರ ವಿಫಲಗೊಳಿಸುತ್ತಾ ಇರುತ್ತದೆ. ಸಾಲದಕ್ಕೆ ಸರ್ಜಿಕಲ್ ಧಾಳಿಯೂ ಮಾಡಿದೆ ಮತ್ತು ಮುಂದೆಯೂ ಮಾಡಬೇಕಾಗಬಹುದು. ಪರಿಣಾಮ ? ಅವರಿಗೆ ಬೇರೆ ದಾರಿಯೇ ಕಾಣುವುದಿಲ್ಲ.ಅಂದರೆ Desperate ಆಗಿ ಕೊನೆಗೆ ಪಾಕಿನ ಅಣ್ವಸ್ತ್ರವನ್ನೇ ಹಿಡಿತಕ್ಕೆ ತಂದುಕೊಳ್ಳಬಹುದು.ಯಾಕೆಂದರೆ ಭಯೋತ್ಪಾದಕರು ಇತ್ತೀಚೆಗಿನ ದಿನದಲ್ಲಿ ಪಾಕ್ ನೆಲದಲ್ಲಿ ಪಾಕ್ ಸೈನಿಕರ ವೇಷದಲ್ಲೇ ಇದ್ದಾರೆ ಎಂದರೆ ಪಾಕ್ ಆರ್ಮಿಯ ಬೆಂಬಲವಲ್ಲದೆ ಇನ್ನೇನು.? ಯಾವಾಗ ನಮ್ಮ ಆರ್ಮಿಯು ಭಯೋತ್ಪಾದಕರ ವಧೆಯನ್ನು ಮಾಡಲು ಹೋಗಿ ಪಾಕ್ ಸೈನಿಕರನ್ನೇ (ಇತ್ತೀಚೆಗಿನ ಸರ್ಜಿಕಲ್ ಅಪರೇಶನ್ ವೇಳೆ ಪಾಕ್ ಸೈನಿಕರೂ ಮೃತರಾದದ್ದು) ಬಲಿ ತೆಗೆದುಕೊಂಡರೆ, ಕೊನೆಗೆ ಆರ್ಮಿಯು ಜಗತ್ತಿಗೆ ತಾವು ಹತಾಶರಾಗಿದ್ದೇವೆ ಎಂದು ತೋರಿಸುತ್ತಾ ಅಣ್ವಸ್ತ್ರಗಳನ್ನು ಭಯೋತ್ಪಾದಕರ ಕೈಗೆ ಕೊಡುವುದು ಖಚಿತ. ಹಾಗೇನಾದರೂ ಆಗಿಬಿಟ್ಟರೆ ,ಅಣ್ವಸ್ತ್ರಗಳನ್ನು ಹೊತ್ತ ಕ್ಷಿಪಣಿಗಳು ಇಸ್ಲಾಮಾಬಾದ್ ದಾಟುವುದೂ ಸಂಶಯ. ಯಾಕೆಂದರೆ ನಮ್ಮ Destroyer ಗಳು ಈಚೆಗೆ ಬಾರದಂತೆ ಅಲ್ಲೇ ಹೊಡೆದುರುಳಿಸಿದರೆ ? ಅದು ವಿನಾಶಕಾರಿ ನ್ಯೂಕ್ಲಿಯರ್ ಬಾಂಬ್.!!

ಬೆಲೂಚಿಸ್ಥಾನ,ಸಿಂದ್,ಪಂಜಾಬ್,POK ಬಿಟ್ಟು ಉಳಿದ ಪಾಕ್ ಸಂಪೂರ್ಣ ನಾಶವಾಗುವುದು ಬಹುತೇಕ ಖಚಿತವೆ. ಇದು ಕೇವಲ ಅರ್ಧಘಂಟೆಯಲ್ಲಾಗುತ್ತದೆ. ಅಲ್ಲಿಗೆ ಸಧ್ಯ ಭಯೋತ್ಪಾದನೆಯೂ ಮುಕ್ತಾಯವಾದಂತೆ.

ಇಂತಹ ವಿಕಾರಗಳು ಕೆಲ ಗ್ರಹಸ್ಥಿತಿಗಳ ಕಾಲದಲ್ಲಿ ಸಂಭವಿಸಿದ್ದು ಈ ಲೇಖನ ಬರೆಯಲು ಪ್ರೇರಣೆ. ಮಹಾಭಾರತದಲ್ಲಿ ತ್ರಿಗ್ರಹರು ಏಕಕಾಲದಲ್ಲಿ ರೋಹಿಣಿ ಶಕಟಭೇಧ ಮಾಡಿದಾಗ ಅಂದರೆ ಶನಿಯೂ,ಕುಜನೂ,ರವಿಯೂ (ಗ್ರಹಯುದ್ಧ) ವೃಷಭದಲ್ಲಿ ರೋಹಿಣೀ ನಕ್ಷತ್ರದ ರಷ್ಮಿಯನ್ನು ಗ್ರಹಣ ಮಾಡುತ್ತಿದ್ದಾಗ ಅಶ್ವತ್ಥಾಮನ ಆಗ್ನೇಯಾಸ್ತ್ರದ ಪ್ರಯೋಗವಾಗಿತ್ತು ಎಂಬುದು ಪುರಾಣದ ಉಲ್ಲೇಖ.
ಇಲ್ಲಿ ಶನಿಯು ಧನುವಿನಲ್ಲಿ ಅಗ್ನಿತತ್ವ ರಾಶಿಯಲ್ಲಿ ವಾಯು ತತ್ವದವನಾಗಿರುವ ಸ್ಥಿತಿಯೂ ಕನ್ಯಾ ಗುರುವೂ ಇದಕ್ಕೆ ಪೂರಕವಾಗಿದ್ದಾಗ ಇಂತಹ ದುರ್ಯೋಗ ಉತ್ಪತ್ತಿಯಾಗುವ ಸೂಚನೆಯಾಗುತ್ತದೆ. ಅಲ್ಲದೆ ದುರ್ಮುಖಿ ಸಂವತ್ಸರದ ಫಲವು ಜಗತ್ತಿಗೆ ಲಭಿಸಲೇ ಬೇಕು.

Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೊಡ್ಲಿಪೇಟೆಯಲ್ಲಿ ಯಶಸ್ವಿಯಾಗಿ ನಡೆದ ವೀರಶೈವ ಸಮಾಜ ಬಾಂಧವರ ಜಿಲ್ಲಾ ಸಮಾವೇಶ

Next Post

ಮಡಿಕೇರಿ ಕೊಡವ ಸಮಾಜ ಬಿಜೆಪಿಯ ಬ್ರ್ಯಾಂಚ್ ಆಫೀಸ್ : ಎ.ಕೆ.ಸುಬ್ಬಯ್ಯ ಟೀಕೆ

kalpa News

kalpa News

Next Post

ಮಡಿಕೇರಿ ಕೊಡವ ಸಮಾಜ ಬಿಜೆಪಿಯ ಬ್ರ್ಯಾಂಚ್ ಆಫೀಸ್ : ಎ.ಕೆ.ಸುಬ್ಬಯ್ಯ ಟೀಕೆ

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL