ನವದೆಹಲಿ: ಅ:28: ದೇಶಾದ್ಯಂತ ಇಂದು ಮೊದಲ ರಾಷ್ಟ್ರೀಯ ಮೊದಲ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ದಿನವನ್ನು ಆಚರಿಸಲಾಯಿತು. ದೆಹಲಿಯಲ್ಲಿಂದು ಮುಂಜಾನೆನಡೆದ ಮುಖ್ಯ ಸಮಾರಂಭದಲ್ಲಿ ಪ್ರಧಾನಮಂತ್ರಿ ಕಾರ್ಯಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಆಆಯುರ್ವೇದ
ದಿನಾಚರಣೆಯ ಕಾರ್ಯಕ್ರಮಗಳನ್ನು ಲೋಕಾರ್ಪಣೆ ಮಾಡಿದರು.
ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ಯಸ್ಸೊ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಯುರ್ವೇದ ಚಿಕಿತ್ಸೆಯಿಂದ ಮಧುಮೇಹ ರೋಗ ತಡೆ ಮತ್ತು
ನಿಯಂತ್ರಣ ಈ ವರ್ಷದ ಧ್ಯೇಯ ವಾಕ್ಯವಾಗಿದ್ದು, ಆಯುರ್ವೇದ ಮೂಲಕ ಮಧುಮೇಹಕ್ಕೆ ಚಿಕಿತ್ಸೆ ನೀಡುವ ರಾಷ್ಟ್ರವ್ಯಾಪಿ
ಕಾರ್ಯಕ್ರಮವನ್ನು ಇಂದಿನಿಂದ ಜಾರಿಗೆ ತರಲಾಗುತ್ತಿದೆ.















