ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಲಜ್ಞಾನಿ ಯೋಗಿ ನಾರೇಯಣ ತಾತಯ್ಯನವರ ಜನ್ಮದಿನವನ್ನು ಈ ವರ್ಷದಿಂದ ಆಚರಿಸಲು ನಿರ್ಧರಿಸಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹಾಗೂ ನಿಕಟಪೂರ್ವ ಸಿಎಂ ಬಿ.ಎಸ್. ಯಡಿಯೂರಪ್ಪ Former CM BS Yadiyurappa ಅವರಿರಗೆ ಜಿಲ್ಲಾ ಬಲಿಜ ಸಮಾಜ ಪ್ರಮುಖರಾದ ರಘುಕುಮಾರ್ ನಾಯ್ಡು ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್ ಜೊತೆಯಲ್ಲಿ ಮಾತನಾಡಿದ ಅವರ, ಕಾಲಜ್ಞಾನಿ ಕೈವಾರ ತಾತಯ್ಯನವರ ಜನ್ಮ ದಿನವನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇದಕ್ಕೆ ಸಹಕಾರ ನೀಡಿದ ನಿಕಟಪೂರ್ವ ಸಿಎಂ ಯಡಿಯೂರಪ್ಪನವರಿಗೆ ಇಡಿಯ ಬಲಿಜ ಸಮುದಾಯ ಧನ್ಯವಾದ ಅರ್ಪಿಸುತ್ತದೆ ಎಂದಿದ್ದಾರೆ.
Also read: ಶೀಘ್ರದಲ್ಲೇ ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಮುಖ್ಯಮಂತ್ರಿ ಬೊಮ್ಮಾಯಿ
ನಾಳೆ ನಗರದಲ್ಲಿ ಜಯಂತ್ಯೋತ್ಸವ
ಶಿವಮೊಗ್ಗ ಜಿಲ್ಲಾ ಬಲಿಜ ಸೇವಾ ಸಂಘ, ಬಲಿಜ ಸೌಹಾರ್ದ ಪತ್ತಿನ ಸಹಕಾರಿ, ಆದಿಲಕ್ಷ್ಮಿ ಬಲಿಜ ಮಹಿಳಾ ಸಂಘ ಹಾಗೂ ಎಲ್ಲ ತಾಲೂಕಿನ ಬಲಿಜ ಸಂಘಗಳ ಸಹಕಾರದೊಂದಿಗೆ ಮಾರ್ಚ್ 18ರ ನಾಳೆ ಯೋಗಿ ನಾರೇಯಣ ತಾತಯ್ಯನವರ 296ನೆಯ ಜಯಂತಿಯನ್ನು ಆಚರಿಸಲಾಗುತ್ತಿದೆ.
ನೂತನವಾಗಿ ನಿರ್ಮಾಣಗೊಂಡಿರುವ ಬಲಿಜ ಸಮುದಾಯ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಾತಯ್ಯನವರ ಕೃಪೆಗೆ ಪಾತ್ರರಾಗಬೇಕು ಎಂದು ಜಿಲ್ಲಾ ಬಲಿಜ ಸೇವಾ ಸಂಘ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post