ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಲ್ಪಸಂಖ್ಯಾತರನ್ನು ಸೆಳೆಯಲು ಹಾಗೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನಾವಶ್ಯಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿಯಲ್ಲಿ ಆರ್ಎಸ್ಎಸ್ ಬಗ್ಗೆ ತುಂಬಾ ಹಗುರವಾಗಿ ಮಾತನಾಡುತ್ತಿದ್ದಾರೆ. ಆದರೆ ಅವರ್ಯಾರಿಗೂ ಆರ್ಎಸ್ಎಸ್ ಹೆಸರನ್ನು ಹೇಳುವ ಯೋಗ್ಯತೆ ಇಲ್ಲ ಎಂದು ಸಂಸದ ರಾಘವೇಂದ್ರ MP Raghavendra ಕಟುವಾಗಿ ಹೇಳಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದ ಭಾಷೆ ಮತ್ತು ವಿಚಾರಗಳು ಬೇರೆಯಾಗಿದೆ. ಅದಕ್ಕೆ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯನ್ನು ಎಳೆದು ತರುವುದು ಅರ್ಥವಿಲ್ಲದ ವಿಚಾರ. ರಾಜಕೀಯ ಚಟಕ್ಕಾಗಿ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡುವುದು ಸಲ್ಲದು ಇನ್ನಾದರೂ ತಮ್ಮನ್ನು ತಪ್ಪನ್ನು ಅವರು ತಿದ್ದಿಕೊಂಡು ಅವರ ಸಾಧನೆ ಮೂಲಕ ಜನರನ್ನು ತಲುಪುವ ಕಾರ್ಯ ಮಾಡಲಿ ಎಂದು ಸಲಹೆ ನೀಡಿದರು.
Also read: ವಿಶ್ವ ಪರಿಸರ ದಿನ : ಸಸಿ ನೆಡುವ ಮೂಲಕ ಎಸ್. ದತ್ತಾತ್ರಿ ಕಾರ್ಯಕ್ರಮಕ್ಕೆ ಚಾಲನೆ
ಆರ್ಎಸ್ಎಸ್ ಒಂದು ದೇಶ ಭಕ್ತ ಸಂಘಟನೆ. ಇದು ಯಾವುದೇ ಕೋಮಿಗೆ ಸೀಮಿತವಾಗದೆ ಜಾತಿ ಭೇದಗಳನ್ನು ಮೀರಿ ನಿಂತಿದೆ. ದೇಶಕ್ಕಾಗಿ, ಹಿಂದೂ ರಾಷ್ಟ್ರಕ್ಕಾಗಿ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿದೆ. ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ ಸಂಘಟನೆ ಇಂದು ಈ ಮಟ್ಟಿಗೆ ಬೆಳೆದು ನಿಂತಿದೆ. ಹಾಗೂ ನಮ್ಮ ಹಿರಿಯರ ತಪಸ್ಸಿನ ಫಲ, ಪ್ರಧಾನಿ ಮೋದಿ ಯವರ ಆಶೀರ್ವಾದದಿಂದ ಅನೇಕ ಸಂಕಲ್ಪಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post