ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪುನೀತ್ ರಾಜ್ಕುಮಾರ್ Puneeth Rajkumar ಅವರ ಕನಸಿನ ಕೂಸು ಗಂಧದ ಗುಡಿ ಶೀಘ್ರದಲ್ಲೇ ರಾಜ್ಯದ ಎಲ್ಲಾ ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ.
ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರ ಮುಂದೆ ತರುವ ಸಲುವಾಗಿ ಅಪ್ಪು ಬಹಳ ಶ್ರಮಪಟ್ಟು ಈ ಡಾಕ್ಯುಮೆಂಟರಿಯನ್ನು ನಿರ್ಮಿಸಿ ಕನ್ನಡರಾಜ್ಯೋತ್ಸವ ಸಮಯದಲ್ಲಿ ಗಂಧದ ಗುಡಿ Gandhadagudi ಹೆಸರಲ್ಲಿ ಬಿಡುಗಡೆ ಮಾಡುವ ಇಚ್ಛೆ ಹೊಂದಿದ್ದರು. ದುರಾದೃಷ್ಠವಶಾತ್ ಅದಕ್ಕೂ ಮುನ್ನವೇ ಪುನೀತ್ ನಿಧನರಾದ ಪರಿಣಾಮ ಅವರ ಆಸೆಯಂತೆ ರಾಜ್ಯೋತ್ಸವ ಸಂದರ್ಭದಲ್ಲಿ ಟ್ರೈಲರನ್ನು ಬಿಡುಗಡೆ ಮಾಡಲಾಗಿತ್ತು.
ಗಂಧದಗುಡಿ ಡಾಕ್ಯುಮೆಂಟರಿಯನ್ನು ಥಿಯೇಟರ್ನಲ್ಲೇ ಪ್ರೇಕ್ಷಕರಿಗೆ ತೋರಿಸಬೇಕು ಎನ್ನುವುದು ಅಪ್ಪು ಪ್ಲ್ಯಾನ್ ಆಗಿತ್ತು. ಅದಕ್ಕಾಗಿ ಅವರು ಅನೇಕ ದಿನಗಳ ಕಾಲ ಕಾಡು ಮೇಡು ಸುತ್ತಿದ್ದರು. ಸಮುದ್ರದಾಳಕ್ಕೂ ಇಳಿದಿದ್ದರು. ಮುರುಡೇಶ್ವರ ಸೇರಿದಂತೆ ಹಲವು ಕಡೆ ಈ ಡಾಕ್ಯುಮೆಂಟರಿಯ ಚಿತ್ರೀಕರಣ ಮಾಡಿದ್ದರು. ಉನ್ನತ ತಂತ್ರಜ್ಞಾನ ಬಳಸಿ ಸಿನಿಮಾದ ಮಾದರಿಯಲ್ಲೇ ಶೂಟ್ ಆಗಿರುವುದರಿಂದ ಒಂದು ಗಂಟೆಗೂ ಅಧಿಕ ಸಮಯದ ಡಾಕ್ಯುಮೆಂಟರಿ ಇದಾಗಿದೆ ಎನ್ನಲಾಗಿದೆ.
Also read: ಎರಡಂಕಿಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ ಸಿಎಂ ಆಗುವುದು ಅಪೂರ್ವ ಸಂಗತಿ: ಬಿಜೆಪಿ ಲೇವಡಿ
ಕನ್ನಡ ರಾಜ್ಯೋತ್ಸವಕ್ಕೆ ಉಡುಗೊರೆಯಾಗಿ ಗಂಧದ ಗುಡಿ ಟ್ರೈಲರ್ ಕೊಡಬೇಕು ಎನ್ನುವ ಅವರ ಕನಸು ಇದೀಗ ಈಡೇರಲಿದ್ದು, ಅಪ್ಪು ಆಸೆಯಂತೆ ನವೆಂಬರ್ನಲ್ಲಿ ಗಂಧದ ಗುಡಿ ಡಾಕ್ಯುಮೆಂಟರಿಯನ್ನು ಥಿಯೇಟರ್ನಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post