ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅವರು ಹಲಾಲ್ ಮಾಡಿ ಎಡೆ ಇಡುತ್ತಾರಂತೆ. ಅದನ್ನು ನಾವು ನಮ್ಮ ದೇವರಿಗೆ ಇಡಬೇಕಾ? ನಮಗೆ ಅದನ್ನು ತಿನ್ನಲು ಗ್ರಹಚಾರನಾ? ತಾವು ಇಲ್ಲಿಯವರೆಗೂ ಒಂದು ಬಾರಿಯೂ ಹಲಾಲ್ ಮಾಂಸ ತಿಂದಿಲ್ಲ. ಇನ್ನು ಮುಂದೆಯೂ ತಿನ್ನುವುದಿಲ್ಲ್ಲ ಎಂದು ಶಾಸಕ ಈಶ್ವರಪ್ಪ MLA Eshwarappa ಹಲಾಲ್ ಆಂದೋಲನದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಹಲಾಲ್ ಕಟ್ ಮಾಡಿ ಅದನ್ನು ಹಿಂದೂಗಳಿಗೆ ಮಾರಿ ಅದರಲ್ಲಿ ಬರುವ ಹಣದಿಂದ ಬಾಂಬ್ ತಯಾರಿಸಿ, ನಮ್ಮ ಮೇಲೇ ಬಾಂಬ್ ಹಾಕಲು ಯೋಜನೆ ರೂಪಿಸುತ್ತಿದ್ದಾರೆ. ಇದರಿಂದ ಸ್ವಾಭಾವಿಕ ಹಿಂದೂ ಸಮಾಜ ಜಾಗೃತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಸಲ್ಮಾನರು ತಮಗೆ ಬರುವ ಲಾಭದ ಹಣವನ್ನು ಬಾಂಬ್ ತಯಾರಿಸಲು ಮತ್ತು ದೇಶದ್ರೋಹಿ ಚಟುವಟಿಕೆಗಳಿಗೆ ಬಳಸುತ್ತಾರೆ. ಇಂತಹ ದುಷ್ಕೃತ್ಯವನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
Also read: ಕಾಂತಾರ ಚಿತ್ರ ವೀಕ್ಷಿಸಿದ ನಟ ಜಗ್ಗೇಶ್’ಗೆ ಕಾಕತಾಳೀಯವಾಗಿ ನಡೆದಿದ್ದೇನು?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















