ಕಲ್ಪ ಮೀಡಿಯಾ ಹೌಸ್ | ಆಡಿಲೇಡ್ |
ಭಾರೀ ಮಳೆಯ ನಡುವೆಯೂ ಭಾರತ ತಂಡ ಬಾಂಗ್ಲಾ ವಿರುದ್ಧ 5 ರನ್’ಗಳ ರೋಚಕ ಜಯ ಸಾಧಿಸಿದ್ದು, ದೇಶದಲ್ಲಿ ಕ್ರಿಕೇಟ್ ಪ್ರೇಮಿಗಳ ಹರ್ಷ ಮುಗಿಲು ಮುಟ್ಟಿದೆ.
1 ವಿಕೆಟ್ ನಷ್ಟಕ್ಕೆ 84 ರನ್’ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾ ಮುಂದಿನ 24 ರನ್’ಗಳ ಅಂತರದಲ್ಲಿ 5 ವಿಕೆಟ್’ಗಳನ್ನು ಕಳೆದುಕೊಂಡಿದ್ದರಿಂದ ಪಂದ್ಯವನ್ನು ಕಳೆದುಕೊಂಡಿತು. ಕೊನೆಯ 6 ಎಸೆತಗಳಲ್ಲಿ ಬಾಂಗ್ಲಾ ಗೆಲುವಿಗೆ 20 ರನ್ ಬೇಕಾಯಿತು. ಆದರೆ ಅರ್ಷದೀಪ್ ಸಿಂಗ್ ಎಸೆದ ಕೊನೆಯ ಓವರ್ ಕೊನೆಯ ಎಸೆತಗಳಲ್ಲಿ 7 ರನ್ ಬೇಕಾಯಿತು. ಕೊನೆಯ ಎಸೆತದಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟು ಭಾರತಕ್ಕೆ ಗೆಲುವು ತಂದುಕೊಟ್ಟರು.
ಭಾರತ ನೀಡಿದ 185 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಮಳೆ ಅಡಚಣೆಯಾಯಿತು. ಆ ಬಳಿಕ 16 ಓವರ್ಗಳಿಗೆ ಪಂದ್ಯವನ್ನು ಇಳಿಸಲಾಯಿತು. 54 ಎಸೆತಗಳಲ್ಲಿ 85 ರನ್ ಗುರಿ ಪಡೆದ ಬಾಂಗ್ಲಾ, ಭಾರತದ ಬೌಲರ್’ಗಳ ಶಿಸ್ತುಬದ್ಧ ದಾಳಿಗೆ ಬೆದರಿತು. ಅಂತಿಮವಾಗಿ 16 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು.
Also read: ವೀರಶೈವ ಲಿಂಗಾಯತ ಸಂಘಟನಾ ಸಮಿತಿ ಜಿಲ್ಲಾಧ್ಯಕ್ಷರಾಗಿ ಬಿ. ಶಿವರಾಜ್ ಆಯ್ಕೆ: ಜ್ಯೋತಿ ಪ್ರಕಾಶ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post