ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಮನಗರ: ಸೆಖೆ ಎಂದು ಮನೆಯ ಬಾಗಿಲನ್ನು ತೆರೆದಿಟ್ಟು ಮಲಗಿದ್ದ ವೇಳೆ ಚಿರತೆಯೊಂದು ಮನೆಗೆ ನುಗ್ಗಿ ಮಲಗಿದ್ದ ಮಗುವನ್ನು ಹೊತ್ತೊಯ್ದು ತಿಂದ ಘಟನೆ ನಡೆದಿದೆ.
ರಾಮನಗರದ ಮಾಗಡಿ ಸಮೀಪದ ಗ್ರಾಮವೊಂದರಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಮೂರುವರೆ ವರ್ಷದ ಹೇಮಂತ್ ಎಂಬ ಬಾಲಕನೇ ಚಿರತೆಗೆ ಬಲಿಯಾದ ಮಗು.
ಬೇಸಿಗೆಯ ಸೆಖೆ ಎಂದು ಮನೆಯ ಬಾಗಿಲನ್ನು ತೆರೆದಿಟ್ಟು ಮನೆಯವರೆಲ್ಲಾ ಮಲಗಿದ್ದರು. ಈ ವೇಳೆ ಮನೆಗೆ ನುಗ್ಗಿದ ಚಿರತೆ ಮಗುವನ್ನು ಹೊತ್ತೊಯ್ದು ತಿಂದು ಹಾಕಿದ್ದು, ಮನೆಯ ಕೇವಲ 60 ಮೀಟರ್ ದೂರದಲ್ಲಿ ಮಗುವಿನ ದೇಹದ ಅವಶೇಷ ದೊರೆತಿದೆ ಎಂದು ವರದಿಯಾಗಿದೆ.
ಈ ಘಟನೆ ಸ್ಥಳೀಯರನ್ನು ಆತಂಕ ಸೃಷ್ಠಿಸಿದ್ದು, ಚಿರತೆಯ ಹಿಡಿಯುವಂತೆ ಆಗ್ರಹಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post