ಚೆನ್ನೈ: ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಶಿಕ್ಷಕಿಯೊಬ್ಬಳನ್ನು ಆಕೆಯ ಸೇವೆ ಸಲ್ಲಿಸುತ್ತಿದ್ದ ಶಾಲೆಯ ಮುಂದೆಯೇ ದುಷ್ಕರ್ಮಿಯೊಬ್ಬ ಇರಿದು ಕೊಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಕಡಲೂರಿನ ಕುರಿಂಜಿಪಾಡಿ ಗ್ರಾಮದ ಶಾಲೆಯಲ್ಲಿ ಈ ಘಟನೆ ಇಂದು ಮುಂಜಾನೆ ನಡೆದಿದ್ದು, ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಎಸ್. ರಮ್ಯ(೨೩) ಮೃತ ದುರ್ದೈವಿದ್ದಾಳೆ.
ಇಂದು ಬೆಳಿಗ್ಗೆ ಶಾಲೆ ತೆರೆಯಲು ತಡವಾಗಿದ್ದ ಕಾರಣ ಶಾಲೆ ಮುಂದೆ ನಿಂತು ಕಾಯುತ್ತಿದ್ದಾಗ ಬೈಕಿನಲ್ಲಿ ಬಂದಿದ್ದ ರಾಜಶೇಖರ್ ಸಮೀಪಕ್ಕೆ ಬಂದು ಶಿಕ್ಷಕಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಶಿಕ್ಷಕಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ರಾಜಶೇಖರ್ ಕಳೆದ ಕೆಲವು ತಿಂಗಳಿನಿಂದ ರಮ್ಯಾಳನ್ನು ಹಿಂಬಾಲಿಸುತ್ತಾ ಆಕೆ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ರಮ್ಯಾ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆತ ಈ ಕೃತ್ಯ ಎಸಗಿದ್ದಾನೆ ಎಂದು ಪೇಲೀಸರು ಮಾಹಿತಿ ನೀಡಿದ್ದಾರೆ.
Discussion about this post