Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಕ್ಷಯವಿಲ್ಲದ ಅಕ್ಷಯ ತೃತೀಯ ಪರ್ವಕಾಲ: ದಾನ ಮಾಡಿದರೆ ಅಕ್ಷಯ ಪುಣ್ಯ ನಿಶ್ಚಿತ

May 4, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ವೈಶಾಖ ಶುಕ್ಲ ತೃತೀಯವು ರೋಹಿಣಿ ನಕ್ಷತ್ರ ಯುಕ್ತವಾಗಿ, ಬುಧವಾರವೂ ಆಗಿ ಬಂದರೆ ಇದಕ್ಕಿಂತ ಪುಣ್ಯ ಕಾಲ ಬೇರಾವುದೂ ಇಲ್ಲ ಎಂದು ಧರ್ಮಶಾಸ್ತ್ರ ವಚನ. ಇದರ ಮಹತ್ವವೇ ಸಪಾತ್ರರಿಗೆ ದಾನ ಮಾಡುವುದು, ಪಿತೃಗಳಿಗೆ ಪಿತೃ ಕಾರ್ಯ ಮಾಡುವಂತದ್ದಾಗಿರುತ್ತದೆ. ನಿರ್ಣಯ ಸಿಂಧು ಮುಂತಾದ ಧರ್ಮಗ್ರಂಥಗಳಲ್ಲಿ ತಿಳಿಸಿದ ಪ್ರಕಾರ ವ್ರತಾಚರಣೆ ಮಾಡಲು ಈ ಕಲಿಯುಗದಲ್ಲಿ ಅಸಾಧ್ಯವಾದರೂ, ಈ ಅಕ್ಷಯ ತೃತೀಯದ ಮಹತ್ವವನ್ನಾದರೂ ತಿಳಿದುಕೊಂಡಾಗಲೂ ಧರ್ಮ ಕಾರ್ಯ ಮಾಡಿದ ತೃಪ್ತಿ ಸಿಗಬಹುದು.

ಅಕ್ಷಯ ಎಂಬುದೇ ಒಂದು ಮಹಾ ತಿಳುವಳಿಕೆ ಕೊಡುತ್ತದೆ. ಕ್ಷಯ ಇಲ್ಲದ್ದೇ ಅಕ್ಷಯವಲ್ಲವೇ? ವೈಶಾಖ ಶುದ್ಧ ತೃತೀಯವು ಸೋಮವಾರ ರೋಹಿಣಿ ಸಹಿತ, ಬುಧವಾರ ರೋಹಿಣಿ ಸಹಿತ ಬಂದದ್ದೇ ಆದರೆ ಅಂತಹ ದಿವಸದಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡಿದರೆ ಅಥವಾ ಪಿಂಡ ರಹಿತ ಶ್ರಾದ್ಧವಾದರೂ ಮಾಡಿದರೆ ಅಥವಾ ಪಿತೃಗಳಿಗೆ ತಿಲ ತರ್ಪಣವನ್ನಾದರೂ ಕೊಟ್ಟರೆ, ಅದೂ ಅಸಾಧ್ಯವಾದರೆ ಪಿತೃಗಳಿಗೆ ಜಲ ತರ್ಪಣ ನೀಡಿದರೂ ಅವರಿಗೆ ಅಕ್ಷಯ ಪುಣ್ಯಲೋಕ ಪ್ರಾಪ್ತಿಯಾಗುತ್ತದೆ ಮತ್ತು ಈ ಕಾರ್ಯ ಮಾಡಿದವರ ಮಡಿಲಿಗೆ ಮತ್ತೆ ಆ ಪಿತೃಗಳು ಉತ್ತಮ ಸಂತತಿಯನ್ನೂ ನೀಡುತ್ತಾರೆ.


ದೇವರಿಗೆ, ಪಿತೃ ದೇವತೆಗಳಿಗೆ, ಫಲ ಬರುವ ವೃಕ್ಷಗಳಿಗೆ ಸೇವೆ ನೀಡಿದರೆ ಅವರೆಂದೂ ಋಣ ಇಟ್ಟುಕೊಳ್ಳುವವರಲ್ಲ. ಅದರ ಫಲವನ್ನು ಕೊಟ್ಟೇ ಕೊಡುತ್ತಾರೆ. ಯಾರಲ್ಲಿ ನಿಸ್ವಾರ್ಥತೆ ಇರುವುದೋ ಅವರು ಯಾವ ಪೂಜನೆಯನ್ನೂ ಬಯಸುವುದಿಲ್ಲ ಮತ್ತು ಪೂಜಿಸಿದವರಿಗೆ ಫಲ ಕೊಡದೆ ಇರುವುದೂ ಇಲ್ಲ. ಉದಾಹರಣೆಗೆ ಭೂಮಿಯನ್ನು ಸ್ವಚ್ಛ ಮಾಡಿದರೆ ಅದರ ಫಲ, ಅದು ನೀಡುವ ಶುದ್ಧ ವಾತಾವರಣಗಳು ನಮಗಲ್ಲದೆ ಇನ್ಯಾರಿಗೆ? ಒಬ್ಬ ಮಾಡಿದರೂ ಹಲವರಿಗೆ ಇದರ ಫಲ ಸಿಗುವಂತೆ ಈ ಅಕ್ಷಯ ತೃತೀಯ ಪರ್ವ ಕಾಲದಲ್ಲಿ ದೇವತಾ ಕಾರ್ಯ, ಪಿತೃ ಕಾರ್ಯ, ದಾನ ಧರ್ಮ ಮಾಡಿದರೆ ಅದರ ಸತ್ಪಲವು ಹಲವರಿಗಿರುತ್ತದೆ.

ದೇವೀ ಪುರಾಣದಲ್ಲಿ ಈ ಅಕ್ಷಯ ತೃತೀಯದ ಆಚರಣೆಯನ್ನು ಹೇಳಿದೆ. ಇದು ತ್ರೇತಾಯುಗಾರಂಭದ ದಿನವಾಗಿದ್ದು ಆ ದಿವಸ ತೃತೀಯಾಯಾಂ ತು ರೋಹಿಣ್ಯೃಕ್ಷೇಃ ಪ್ರಪೂಜ್ಯತು॥ ಉದಕುಂಭ ಪ್ರಧಾನೇನ ಶಿವಲೋಕೇ ಮಹೀಯತೇ ಏಷ ಧರ್ಮ ಘಟೋ ದತ್ತೋ ಬ್ರಹ್ಮ ವಿಷ್ಣು ಶಿವಾತ್ಮಕಃ ಅಸ್ಯ ಪ್ರಧಾನಾತ್ತೃಪ್ಯಂತು ಪಿತರೋಪಿ ಪಿತಾಮಹಾಃ॥ ಅಂದರೆ ಪಿತೃ ಕಾರ್ಯವನ್ನೂ ಮಾಡಿ ಉದಕುಂಭ(ಕಲಶ) ದಾನ ಮಾಡಿದರೆ ಆಕಡೆ ಪಿತೃಗಳಿಗೂ ಅಕ್ಷಯ ಪುಣ್ಯ ಲೋಕ, ಈ ಕಡೆ ಮಾಡಿದವರಿಗೂ ಅಕ್ಷಯ ಸಂಪತ್ತು ಬರುತ್ತದೆ.


ಬ್ರಹ್ಮ ವಿಷ್ಣು ಮಹೇಶ್ವರರನ್ನು ಉದಕ ಕುಂಭದಲ್ಲಿ ಆವಾಹಿಸಿ ದಾನ ಮಾಡು. ಇದು ಅತ್ಯಂತ ಪುಣ್ಯ ಪರ್ವಕಾಲ ಎಂದು ತಿಳಿಸಿದೆ. ವ್ಯಾವಹಾರಿಕವಾಗಿ ನೋಡಿದರೆ ಈ ಮೇ ತಿಂಗಳು ಯಾವಾಗಲೂ ಸುಡು ಬೇಸಿಗೆ. ನೀರಿಗೆ ಹಾಹಾಕಾರ. ಈ ಸಮಯದಲ್ಲಿ ಯಾರಿಗಾದರೂ, ಯಾವ ಪ್ರಾಣಿ ಪಕ್ಷಿಗಳಿಗೆ ನೀರನ್ನು ಕೊಟ್ಟರೆ ಅದಕ್ಕಿಂತ ಪುಣ್ಯ ಬೇರೆ ಇಲ್ಲ. Save water, donate water ಎಂದು ವ್ಯಾಖ್ಯಾನಿಸಬಹುದು.

ನಮ್ಮ ಪುರಾತನರು ಪ್ರತೀ ದಿನದ ಮಹತ್ವವನ್ನರಿತೇ ವ್ರತಗಳ ಆಚರಣೆ, ದಾನ ಧರ್ಮಗಳನ್ನು ಮಾಡಲು ಹೇಳಿದ್ದಾರೆ.


ಈಗ ಒಂದು fashion ಇದೆ. ಅಕ್ಷಯ ತೃತೀಯದ ದಿನ ಮನೆಗೆ ಸುವರ್ಣ ತಂದರೆ ಸಂಪತ್ತು ಅಕ್ಷಯ ಆಗುತ್ತದೆ ಎಂದು ಆ ದಿನ ಚಿನ್ನವನ್ನು ವಿಕ್ರಯಿಸಲು ಓಡುತ್ತಾರೆ. ಆ ದಿನ ಚಿನ್ನ ತರಲಿ, ಬೇಡ ಅನ್ನಲ್ಲ. ಆದರೆ ಅದರ ಜತೆ ನೀರು ದಾನ ಮಾಡಿ. ಅಕ್ಷಯವಾದ ಪುಣ್ಯ ಸಿಗುತ್ತದೆ. ಅಕ್ಷಯ ತೃತೀಯವು ಬಹಳ ಶುಭ ಮುಹೂರ್ತ, ಆ ದಿನ ಗೃಹ ಪ್ರವೇಶ, ಮದುವೆ ಮುಂಜಿ ಮಾಡಿದರೆ ಉತ್ತಮ ಎಂಬ ಒಂದು ಚಿಂತನೆ ಜನರಲ್ಲಿದೆ. ಇದು ತಪ್ಪು ಕಲ್ಪನೆ. ಯಾವುದಕ್ಕೆ ಯಾವ ಕಾಲ ಸೂಕ್ತ ಎಂದು ಮುಹೂರ್ತ ಚಿಂತಾಮಣಿಯಲ್ಲಿ ತಿಳಿಸಿದಂತೆ, ಅಕ್ಷಯ ತೃತೀಯಕ್ಕೆ ಅದರದ್ದೇ ಆದಂತಹ ಫಲಗಳಿದ್ದು, ದಾನ ಧರ್ಮಾದಿಗಳಿಗೇ ಇದು ಅಕ್ಷಯ ಪುಣ್ಯಕಾಲವೇ ಹೊರತು ವಿವಾಹಾದಿ ಮಂಗಲಕ್ಕೆ ಹೇಳಿದ ದಿವಸವಲ್ಲ. ಆದರೆ ಕೆಲವೊಮ್ಮೆ, ಕೆಲವು ವರ್ಷಗಳಲ್ಲಿ ಈ ದಿನವೂ ಮುಹೂರ್ತ ಪ್ರಕಾರ ಇತರ ಕಾರ್ಯಗಳಿಗೂ ಉತ್ತಮ ಆಗುವುದಿದೆ. ಅಂತಹದ್ದೇನಾದರೂ ಬಂದರೆ ಅದಕ್ಕಿಂತ ಪುಣ್ಯ ಪರ್ವಕಾಲ ಇನ್ನೊಂದಿಲ್ಲ. ಯಾರಿಗೆ ಅಕ್ಷಯ ಪುಣ್ಯ ಪ್ರಾಪ್ತಿಗೆ ನಮ್ಮ ಉದ್ದೇಶ ಇರುತ್ತದೋ ಆಗ ಅದರ ಫಲದಲ್ಲಿ ನಮಗೂ ಅಕ್ಷಯ ಪುಣ್ಯ ಫಲ ಬಂದೇ ಬರುತ್ತದೆ. ಇದುವೇ ಈ ಮಹಾ ಪರ್ವಕಾಲವಾದ ಅಕ್ಷಯ ತೃತೀಯದ ಫಲ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Akshaya Tritiyadon't waterGoldKannada ArticlePrakash AmmannayaSave WaterSpecial Articleಅಕ್ಷಯ ತೃತೀಯಜ್ಯೋರ್ತಿವಿಜ್ಞಾನಂತ್ರೇತಾಯುಗದೇವೀ ಪುರಾಣಪಿಂಡ ಪ್ರಧಾನಪ್ರಕಾಶ್ ಅಮ್ಮಣ್ಣಾಯ
Previous Post

ಬಿಡುಗಡೆಯಾಯ್ತು ಮನಮುಟ್ಟುವ ರತ್ನಮಂಜರಿ ಹಾಡುಗಳು

Next Post

ಮಲೆನಾಡ ಸಣ್ಣ ದೇಗುಲದಲ್ಲಿ ಸಿಎಂ ರಹಸ್ಯ ಯಾಗ ಮಾಡಿದ್ದೇಕೆ? ಸೋಲಿನ ಭಯ ಕಾಡುತ್ತಿದೆಯೇ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮಲೆನಾಡ ಸಣ್ಣ ದೇಗುಲದಲ್ಲಿ ಸಿಎಂ ರಹಸ್ಯ ಯಾಗ ಮಾಡಿದ್ದೇಕೆ? ಸೋಲಿನ ಭಯ ಕಾಡುತ್ತಿದೆಯೇ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!