No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Sunday, August 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ವೃಶ್ಚಿಕದಲ್ಲಿ ಗುರು: ವಿಕೃತ ಕೇಕೆ ಹಾಕಿ ಕುಣಿಯಲಿವೆ ದೆವ್ವ ಸಂತಾನಗಳು

kalpa News by kalpa News
October 21, 2018
in Army
0
ವೃಶ್ಚಿಕದಲ್ಲಿ ಗುರು: ವಿಕೃತ ಕೇಕೆ ಹಾಕಿ ಕುಣಿಯಲಿವೆ ದೆವ್ವ ಸಂತಾನಗಳು
Share on FacebookShare on TwitterShare on WhatsApp

ಬಹುಷಃ ನಮ್ಮ ಸನಾತನ ಧರ್ಮದ ಮೇಲಾದಷ್ಟು ದಾಳಿಗಳು, ದಬ್ಬಾಳಿಕೆಗಳು ಜಗತ್ತಿನ ಇನ್ನಾವುದೇ ಧರ್ಮದ ಮೇಲಾಗಿಲ್ಲ. ಆದರೂ, ಇಂದಿಗೂ ಸನಾತನ ಧರ್ಮವೇ ಜಗತ್ತಿನ ಅತ್ಯಂತ ಶ್ರೇಷ್ಠ ಧರ್ಮವಾಗಿ ಉಳಿದಿದೆ ಎಂದರೆ ಅದು ನಮ್ಮ ಧರ್ಮದ ಅಂತಃಸತ್ವ.

ಇನ್ನು, ಕಲಿಯ ಪ್ರಭಾವದಲ್ಲಿ ಧರ್ಮಗಳ ಮೇಲಿನ ದಾಳಿಗಳು ಹೆಚ್ಚಾಗಿ, ಅಧರ್ಮದ ಅಟ್ಟಹಾಸಗಳು ಮೇಲಾಗಿ, ಧರ್ಮಕ್ಕೆ ಸಂಚಕಾರ ಬಂದೊದಗುವ ಹಂತಕ್ಕೆ ಪರಿಸ್ಥಿತಿ ಬಂದರೂ ಸಹ ಅಂತಿಮ ಜಯ ಧರ್ಮದ್ದೇ ಹೊರತು ಅಧರ್ಮದ್ದಲ್ಲ ಎನ್ನುವುದನ್ನೂ ಸಹ ಹೇಳಬೇಕು.

ಸುಮ್ಮನೆ ದೇಶದಲ್ಲಿ ನಡೆಯುತ್ತಿರುವ ಒಂದೊಂದೇ ಘಟನೆಗಳನ್ನು ಗಮನಿಸುತ್ತಾ ಬನ್ನಿ.

ಅತ್ಯಂತ ಪ್ರಮುಖವಾಗಿ ಭಾರತ ಸಂವಿಧಾನದ ಅಡಿಯಲ್ಲಿರುವ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುತ್ತಲೇ ಧರ್ಮದ ವಿಚಾರದಲ್ಲಿ ನ್ಯಾಯಾಲಯಗಳು ನೀಡುತ್ತಿರುವ ಹಲವು ತೀರ್ಪುಗಳ ಸನಾತನ ಧರ್ಮಕ್ಕೆ ಮಾರಕವಾಗಿ ಪರಿಣಮಿಸಿದ್ದು, ಇದರಿಂದ ಪ್ರಜೆಗಳ ನಮ್ಮದಿಗೆ ಭಂಗ ಬರುತ್ತಿದೆ.

ಅತ್ಯಂತ ಪ್ರಮುಖವಾಗಿ ಹಿಂದೂ ಧರ್ಮದ ಮೇಲಿನ ದಬ್ಬಾಳಿಕೆಗಳು, ದಾಳಿಗಳು ಹಾಗೂ ಸನಾತನ ಧರ್ಮಕ್ಕೆ ಅಪಚಾರ ಎಸಗುವ ಕೃತ್ಯಗಳು ಒಂದಿಲ್ಲೊಂದು ನಡೆಯುತ್ತಲೇ ಇವೆ. ಇದಕ್ಕೆ ಕಾಂಗ್ರೆಸ್ ಹಾಗೂ ಇದರ ಪ್ರಣೀತ ಎಡಪಂಥೀಯ ಪಕ್ಷಗಳು, ಬುದ್ದಿಜೀವಿಗಳು ನೀಡುತ್ತಿರುವ ಸಹಕಾರದಿಂದ ಧರ್ಮಕ್ಕೆ ಅಪಚಾರ ಮಾಡಿ, ವಿಕೃತ ಕೇಕೆ ಹಾಕಲಾಗುತ್ತಿದೆ.

ಶಬರಿಮಲೆ ವಿಚಾರದಲ್ಲಿ ನೋಡಿ… ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮುರಿದು, ಅದರ ಮೇಲೆ ದಬ್ಬಾಳಿಕೆ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ನ್ಯಾಯಾಲಯಕ್ಕೆ ಹೋಗಲಾಯಿತು. ಇಲ್ಲಿ, ದೇವಾಲಯಕ್ಕೆ 10 ವರ್ಷದಿಂದ 60 ವರ್ಷದೊಳಗಿನ ಮಹಿಳೆಯರ ಪ್ರವೇಶ ನಿಷಿದ್ದ ಏಕೆ ಎಂಬುದನ್ನು ದೇವಾಲಯ ಮಂಡಳಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಕೈ ಮೇಲಾಗಲಿಲ್ಲ ಎನ್ನುವುದು ಎಷ್ಟು ಸತ್ಯವೋ, ನ್ಯಾಯಾಲಯವೂ ಸಹ ವಾಸ್ತವ ಸ್ಥಿತಿ ಹಾಗೂ ಸಂಪ್ರದಾಯವನ್ನು ಹಾಗೂ ಭಕ್ತರ ಭಾವನಾತ್ಮಕ ವಿಚಾರಗಳನ್ನು ಅರ್ಥ ಮಾಡಿಕೊಳ್ಳದೇ ತೀರ್ಪು ನೀಡಿದೆ ಎಂಬುದೂ ಸಹ ಸತ್ಯ.

ತೀರಾ ಗಮನಿಸಬೇಕಾದ ಅಂಶವೆಂದರೆ, ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದ ಮಾತ್ರಕ್ಕೆ ಶಬರಿಮಲೆಗೆ ನುಗ್ಗುವ ಯತ್ನ ನಡೆಸುತ್ತಿರುವವರು ಯಾರು? ಯಾರಾದರೂ ಹಿಂದೂ ಸಂಪ್ರದಾಯಸ್ತ ಅಯ್ಯಪ್ಪ ಭಕ್ತ ಮಹಿಳೆಯರು ಯತ್ನಿಸುತ್ತಿದ್ದಾರೆಯೇ? ಇಲ್ಲ… ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಯುವತಿಯರು ಹಿಂದೂ ಸಂಪ್ರದಾಯವನ್ನು ಮುರಿಯಲೇ ಬೇಕು ಎಂಬ ದುಷ್ಟ ಬುದ್ದಿಯಿಂದ ವಿಫಲ ಯತ್ನ ನಡೆಸಿದ್ದೇ ವಿನಾ ಇನ್ನಾವುದೇ ಕಾರಣದಿಂದ ಅಲ್ಲ..

ಧರ್ಮಶಾಸ್ತ, ಅಖಂಡ ಬ್ರಹ್ಮಚಾರಿ ಎಂದು ನಾಮಾಂಕಿತ ಹೊಂದಿರುವ ಅಯ್ಯಪ್ಪ ಸ್ವಾಮಿಗೆ ಭಕ್ತರ ಇರುಮುಡಿ ಎಂದರೆ ಅತ್ಯಂತ ಪ್ರೀತಿ. ಆದರೆ, ಮೊನ್ನೆ, ರೆಹೆನಾ ಫಾತಿಮಾ ಎಂಬ ಮುಸ್ಲಿಂ ಯುವತಿ ತಾನು ಇರುಮುಡಿ ಎಂದು ಹೊತ್ತು ತಂದಿದ್ದ ಕಟ್ಟಿನಲ್ಲಿ ಸ್ಯಾನಿಟರಿ ನ್ಯಾಪ್ ಕಿನ್‍ಗಳನ್ನು ಹೊತ್ತು ತಂದಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದ್ದು, ಎಂತಹ ವಿಕೃತಿ ಇವರಲ್ಲಿದೆ ಎಂಬುದು ತಿಳಿಯುತ್ತದೆ.

ಸಮೀರಾ ಎನ್ನುವ ಇನ್ನೊಬ್ಬ ಮುಸ್ಲಿಂ ಹೆಣ್ಣು ಅಯ್ಯಪ್ಪನ ಮುಂದೆ ತನ್ನ ಬಾಯ್ ಫ್ರೆಂಡ್ ಜೊತೆಯಲ್ಲಿ ಸೆಕ್ಸ್ ಮಾಡುತ್ತೇನೆ ಎಂದು ತನ್ನ ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾಳೆ. ಇಂದು ಧರ್ಮ ಶ್ರದ್ಧಾ ಭಕ್ತಿಯ ಕೇಂದ್ರದಲ್ಲಿ ಇಂತಹ ಕೃತ್ಯ ಮಾಡುತ್ತೇನೆ ಎಂದು ಈಕೆ ನೇರವಾಗಿ ಹೇಳಿಕೊಳ್ಳುತ್ತಾಳೆ, ಅಲ್ಲಿನ ಸರ್ಕಾರ ಇವಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದಾದರೆ, ಹಿಂದೆ ಮುಸ್ಲಿಂ ಸಾಮ್ರಾಟರು ಭಾರತದ ಮೇಲೆ ದಾಳಿ ನಡೆಸಿ, ಮೆರೆದ ವಿಕೃತಿಗಳಿಗೂ ಇದಕ್ಕೂ ಏನೂ ವ್ಯತ್ಯಾಸ ಕಾಣುವುದಿಲ್ಲ.

ಇನ್ನು, ಕೇರಳ, ಕೊಡಗು ಹಾಗೂ ಉತ್ತರ ಭಾರತದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಗಳನ್ನು ನೋಡಿದರೆ ಎಲ್ಲವೂ ಸಹ ಪ್ರಕೃತಿ ಮುನಿಸೇ ಹೌದು. ಎಲ್ಲಿ ಪ್ರಕೃತಿ ಹಾಗೂ ಧರ್ಮಕ್ಕೆ ಸಂಚಕಾರ ಒದಗುತ್ತಿದೆಯೋ ಅಲ್ಲಿ ಪ್ರಕೃತಿ ತನ್ನ ರುದ್ರ ನರ್ತನ ತೋರುವುದು ನಿಶ್ಚಿತ.

ಮೊನ್ನೆ, ವಿಜಯದಶಮಿ ದಿನ ಅಮೃತಸರದಲ್ಲಿ ರಾವಣ ದಹನದ ವೇಳೆ ರೈಲು ಹರಿದು 62 ಮಂದಿ ಬಲಿಯಾಗಿದ್ದಾರೆ.

ತೀರಾ ರಾಜ್ಯದ ವಿಚಾರದಲ್ಲಿ ನೋಡುವುದಾದರೆ, ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ವಿಲನ್ ಚಿತ್ರದ ಯಶಸ್ಸಿಗಾಗಿ ಅವರ ಅಂದಾಭಿಮಾನಿಗಳು ಕೋಣ ಕಡಿದು ಅದರ ರಕ್ತದಿಂದ ಚಿತ್ರಕ್ಕೆ ಅಭಿಶೇಕ ಮಾಡಿ ವಿಕೃತಿ ಮೆರೆದಿದ್ದಾರೆ. ಇದು ನಿಜಕ್ಕೂ ಅಂದಾಭಿಮಾನದ ಪರಾಕಾಷ್ಟೆ ಹಾಗೂ ಧರ್ಮಕ್ಕೆ ಸಂಚಕಾರ ತರುವಂತಹ ಕೃತ್ಯದ ಭಾಗವೇ ಆಗಿದ್ದು, ನಾಗರಿಕ ಸಮಾಜ ಇದರಿಂದ ಧಕ್ಕೆಯಾಗುತ್ತದೆ ಎನ್ನುವುದು ಸತ್ಯ..

ಇದು ಆರಂಭವಷ್ಟೆ… ಮುಂದೆ ಕಾದಿದೆ ದೇಶಕ್ಕೆ ಭಾರೀ ಗಂಡಾಂತರ

ಅಕ್ಟೋಬರ್ 11ರಿಂದ ವೃಶ್ಚಿಕ ರಾಶಿಯಲ್ಲಿ ಅತಿಚಾರ ಗುರು ಸಂಚಾರ ಆರಂಭವಾಗಿದೆ. ಇದು ಇಡಿಯ ದೇಶವನ್ನೇ ಭಯಾನಕಗೊಳಿಸಿಯಾನು. ಯಾವ ಯಾವ ದುರ್ಬುದ್ಧಿ ಮನಗಳಿರುತ್ತದೋ ಅವರ ಮನಸ್ಸು ವಿಕೃತಗೊಂಡು ಮಾಡಬಾರದ್ದನ್ನು ಮಾಡಿ ದೇಶದ ಆಡಳಿತಕ್ಕೇ ಮಾರಕವಾದೀತು. ನೈಸರ್ಗಿಕ ಕುಂಡಲಿಯ ಮರಣ, ರಂದ್ರ ಸ್ಥಾನದ ಗುರುವಿನ ವೇಗವು ಹೆಚ್ಚಾಗಿ, ಅತಿಚಾರವಾಗುತ್ತೋ ಆಗ ಇಡಿ ಪ್ರಜೆಗಳಿಗೆ ಕಂಟಕವಾಗುತ್ತದೆ. ಮಾಡಬಾರದ್ದನ್ನು ಮಾಡಿಸುತ್ತಾನೆ ಈ ಗುರುವಿನ ಗೋಚರ ಫಲ.

ಮಾರ್ಚ್‍ವರೆಗಿರುವ ವೃಶ್ಚಿಕ ಸಂಚಾರದ ಆದಿಭಾಗದಲ್ಲೇ ಇದರ ಅನುಭವ ಆಗಿದೆ. ಇನ್ನೂ ಮಧ್ಯ ಭಾಗ ತಲುಪಿಲ್ಲ. ಈಗಲೇ ಶುರುವಾಗಿದೆ. ಇದು ಪ್ರಾರಂಭವಷ್ಟೆ. ಮುಂದೆ ಇನ್ನೂ ಭೀಕರ ದಿನಗಳು ದೇಶಕ್ಕೆ ಎದುರಾಗಲಿವೆ.

ದೇಶ ಏನೆಲ್ಲಾ ಪರಿಸ್ಥಿತಿಗಳನ್ನು ಎದುರಿಸುವ ಸಾಧ್ಯತೆಯಿದೆ?
  • ಅತಿಚಾರ ಗುರುವಿನ ಸಂಚಾರ 10 ಡಿಗ್ರಿ ತಲುಪಿದ ನಂತರ ದೇಶದಲ್ಲಿ ಅತ್ಯಂತ ಭೀಕರ ಘಟನೆಗಳು ನಡೆಯುುವುದು ನಿಶ್ಚಿತ
  • ಇದರ ಸಮಾರೋಪವನ್ನು ಪ್ರಕೃತಿಯು ಪೂರ್ವ ಕರಾವಳಿಯ ಭಾಗದಲ್ಲಿ, ಪಶ್ಚಿಮ ಕರಾವಳಿ ಭಾಗದಲ್ಲಿ ಪ್ರಕೃತಿಯು ಮುನಿದು ತಾಂಡವವಾಡಲಿಕ್ಕಿದ್ದಾಳೆ
  • ದೇಶದಲ್ಲಿ ಇಂತಹ ಪರಿಸ್ಥಿತಿಗಳು ತಾಂಡವವಾಡಿದರೂ ಸಜ್ಜನರು ಮೌನಕ್ಕೆ ಹೋಗಲಿದ್ದಾರೆ
  • ದೈವ ಭಕ್ತಿಯ ಬದಲು, ದೆವ್ವ ಹಿಡಿದು ವಿಕೃತರು ಕೇಕೆ ಹಾಕಲಿದ್ದಾರೆ
  • ಧರ್ಮದ ವಿರುದ್ದ ದೆವ್ವ ಸಂತಾನಗಳು ಕೇಕೆ ಹಾಕಿ ಗಹಗಹಿಸಲಿವೆ
  • ನ್ಯಾಯಾಲಯಗಳ ತೀರ್ಪುಗಳು ಪ್ರಜೆಗಳಿಗೆ ಮಾರಕವಾದೀತು
  • ಎಚ್ಚರಿಕೆ... ಎಚ್ಚರಿಕೆ... ಎಚ್ಚರಿಕೆ...

-ಪ್ರಕಾಶ್ ಅಮ್ಮಣ್ಣಾಯ,
  ಜ್ಯೋರ್ತಿವಿಜ್ಞಾನಂ

Tags: HinduKeralaKodaguLord AyyappaMuslimPrakash AmmannayaShabarimalaiಅತಿಚಾರ ಗುರುವಿನ ಸಂಚಾರಪ್ರಕಾಶ್ ಅಮ್ಮಣ್ಣಾಯವೃಶ್ಚಿಕದಲ್ಲಿ ಗುರುಶಬರಿಮಲೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನೇತಾಜಿಗಾದ 75 ವರ್ಷಗಳ ಅನ್ಯಾಯಕ್ಕೆ ನ್ಯಾಯ ಒದಗಿಸಿದ ಮೋದಿ

Next Post

ಚಿತ್ರಕ್ಕಾಗಿ ಕೋಣ ಬಲಿ, ಪೇಟಾ ಸಂಘಟನೆಯವರು ಎಲ್ಲಿ ತೊಲಗಿದ್ದೀರೀ?

kalpa News

kalpa News

Next Post
ಚಿತ್ರಕ್ಕಾಗಿ ಕೋಣ ಬಲಿ, ಪೇಟಾ ಸಂಘಟನೆಯವರು ಎಲ್ಲಿ ತೊಲಗಿದ್ದೀರೀ?

ಚಿತ್ರಕ್ಕಾಗಿ ಕೋಣ ಬಲಿ, ಪೇಟಾ ಸಂಘಟನೆಯವರು ಎಲ್ಲಿ ತೊಲಗಿದ್ದೀರೀ?

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL