ಶ್ರೀನಗರ: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ 42 ಯೋಧರು ವೀರಸ್ವರ್ಗ ಸೇರಿದ 100 ಗಂಟೆಯೊಳಗೇ ಜೈಷ್ ಉಗ್ರರ ಸಂಘಟನೆಯ ಮುಖಂಡನನ್ನು ಹೊಡೆದು ಹಾಕಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ.
ಈ ಕುರಿತಂತೆ ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಭಾರತೀಯ ಸೇನೆಯ ಕಾಪ್ಸ್ ಕಮಾಂಡರ್ ಆಫ್ ಚಿನಾರ್ ಕಾಪ್ಸ್ ಕನ್ವಾಲ್ ಜೀತ್ ಸಿಂಗ್ ದಿಲಾನ್ ಅವರು, ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ಮಾಹಿತಿ ನೀಡಿದರು.
#WATCH Live from Srinagar: Army, CRPF and J&K Police address the media https://t.co/b4u0mnJzJD
— ANI (@ANI) February 19, 2019
ಭಾರತದ ಸಾರ್ವಭೌಮತ್ವದ ವಿರುದ್ಧ ಯಾರೇ ಬಂದೂಕು ಹಿಡಿದು ಹೋರಾಡಲು ಮುಂದಾದರೆ ಅವರನ್ನು ನಮ್ಮ ಸೇನೆ ಬೇಟೆಯಾಡುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಫೆ.14ರಂದು ಪುಲ್ವಾಮಾದಲ್ಲಿ ಕಾರು ಬಾಂಬ್ ಸ್ಫೋಟಿಸಿದ ಉಗ್ರರ ಕೃತ್ಯದ ನಂತರ ಭಾರತೀಯ ಸೇನೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ, ದೇಶದ ಭದ್ರತೆ ದೃಷ್ಠಿಯಿಂದ ನಾವು ಎಲ್ಲ ರೀತಿಯ ಅವಕಾಶಗಳನ್ನು ತೆರೆದಿಟ್ಟಿದ್ದೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಉಗ್ರರ ವಿರುದ್ಧದ ಹೋರಾಟದಲ್ಲಿ ನಾವೂ ಸಹ ಸ್ಫೋಟಕಗಳನ್ನು ಬಳಸುತ್ತಿದ್ದೇವೆ. ಆದರೆ, ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಅವುಗಳ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದರು.
ಉಗ್ರರ ವಿರುದ್ಧದ ನಮ್ಮ ಕಾರ್ಯಾಚರಣೆ ಆರಂಭವಾಗಿರುವುದು ಸ್ಪಷ್ಟ. ಕಾಶ್ಮೀರ ಕಣಿವೆಯಲ್ಲಿ ಅಕ್ರಮವಾಗಿ ಆಗಮಿಸುವ ಯಾರನ್ನೂ, ಯಾವುದೇ ದೇಶದ್ರೋಹಿಗಳನ್ನೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನ ಹಾಗೂ ಐಎಸ್”ಐ ಪಾತ್ರವಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜೈಷ್ ಉಗ್ರ ಸಂಘಟನೆ ಪಾಕಿಸ್ಥಾನ ಸೇನೆ ಕೂಸು ಎಂದರು.
ಸಿಆರ್’ಪಿಎಫ್’ನ ಜುಲ್ಫಿಕಾರ್ ಹಸನ್ ಮಾತನಾಡಿದ್ದು, ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ 14411 ದೇಶದಾದ್ಯಂತ ಕಾಶ್ಮೀರಿಗಳಿಗೆ ಸಹಾಯ ಮಾಡಲಾಗುತ್ತಿದೆ. ಕಾಶ್ಮೀರಿ ವಿದ್ಯಾರ್ಥಿಗಳೆಲ್ಲರೂ ದೇಶದಾದ್ಯಂತ ಸಹಾಯಕ್ಕಾಗಿ ಈ ಹೆಲ್ಪ್’ಲೈನ್ ಅನ್ನು ಸಂಪರ್ಕಿಸಿದ್ದಾರೆ. ಹೊರಗಡೆ ಅಧ್ಯಯನ ಮಾಡುತ್ತಿರುವ ಎಲ್ಲಾ ಕಾಶ್ಮೀರಿ ಮಕ್ಕಳನ್ನು ಭದ್ರತಾ ಪಡೆಗಳು ನೋಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Discussion about this post