ಕಲ್ಪ ಮೀಡಿಯಾ ಹೌಸ್ | ತುಮಕೂರು |
ಜಿಲ್ಲೆಯ ಗುಬ್ಬಿಯ ಶ್ರೀ ಚಿದಂಬರ ಆಶ್ರಮದ ಶ್ರೀ ನಾರಾಯಣ ಗುರುಕುಲ ಮಾದರಿಯ ಶಾಲೆಗೆ (4 ನೇ ತರಗತಿಯಿಂದ 8 ನೇ ತರಗತೀವರೆಗೆ) ಸೇರಲು ಬಯಸುವ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ತ್ರಿಮತಸ್ಥ ಉಪನೀತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ 2026-2027 ಸಾಲಿನ ಪ್ರವೇಶ ಪ್ರಕ್ರಿಯೆ ಶುರುವಾಗಿದೆ.
Also Read>> ವಿಶ್ವಾಸ ಮತ ಗೆದ್ದ ತಮಿಳುನಾಡು ಸಿಎಂ ವಿಜಯ್ | ಒಟ್ಟು ಎಷ್ಟು ಶಾಸಕರ ಬೆಂಬಲ ದೊರೆಯಿತು?
ಏನೆಲ್ಲಾ ಕಲಿಸಲಾಗುತ್ತದೆ?
ಆಧುನಿಕ ಶಿಕ್ಷಣದ ಜೊತೆಗೆ ವೈದಿಕ ಸಂಪ್ರದಾಯ, ವೇದ, ಉಪನಿಷತ್ತು, ಸಂಸ್ಕೃತ ಭಾಷೆಯ ಪರಿಚಯ, ಗೀತಾರ್ಥ ಪ್ರಕಾಶ, ಯೋಗ, ಧ್ಯಾನ ಮತ್ತು ಮೌಲ್ಯಯುತ ಶಿಕ್ಷಣವನ್ನು ಗುಬ್ಬಿಯ ಶ್ರೀ ಚಿದಂಬರ ಆಶ್ರಮದಲ್ಲಿ ನೀಡಲಾಗುತ್ತಿದೆ.
ಕಳೆದ ಹತ್ತು ದಶಕಗಳಿಂದ ಬ್ರಾಹ್ಮಣ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಅವಧೂತ ಪರಂಪರೆಯ ಶ್ರೀ ಚಿದಂಬರ ಆಶ್ರಮ ನಿರಂತರವಾಗಿ ಶ್ರಮ ವಹಿಸುತ್ತಿದೆ.
ಗುರುಕುಲ ಶಿಕ್ಷಣಕ್ಕೆ ಸೇರಲು ಬಯಸುವವರು ಆಶ್ರಮದ ಅಧ್ಯಕ್ಷರಾದ ಡಾ. ಸಚ್ಚಿದಾನಂದ ಶರ್ಮಾ ಅವರನ್ನು ದೂರವಾಣಿ ಸಂಖ್ಯೆ: 8660142615 ಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಲು ಕೋರಲಾಗಿದೆ.
Also Read>> AESL Launches Victory Batch at Rs 99 to support students appearing for RE-NEET
ಅಲ್ಲದೆ, ಆಶ್ರಮದ ಈ ಮೇಲ್ : manager@chidambara.org/ ಸಂಪರ್ಕಿಸಬಹುದು. ಆಶ್ರಮದ ದೂರವಾಣಿ ಸಂಖ್ಯೆ: +91 99647 96451ಗೆ ಅಥವಾ ವಾಟ್ಸಾಪ್ ಮೂಲಕ ಸಹ ಸಂಪರ್ಕ ಮಾಡಬಹುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















