ಆತ್ಮವು ಎಂದೂ ಭೌತವಸ್ತುಗಳಿಗೆ ಬದ್ಧವಲ್ಲ,ಅದು ಪೂಜ್ಯ, ನಿರ್ಮಲ, ಸಂಪೂರ್ಣ, ಸ್ವತಂತ್ರ. ಎಂದೆಲ್ಲ ಹೇಳಿದ್ದೆವು, ಆದರೆ ಪೂಜ್ಯ, ನಿರ್ಮಲ, ಸಂಪೂರ್ಣ, ಸ್ವತಂತ್ರ ಗುಣಗಳನ್ನು ಹೊಂದಿದ್ದು, ಯಾಕೆ ಆತ್ಮವು ಭೌತವಸ್ತುವಿನ ನಿಯಂತ್ರಣದಲ್ಲಿದೆ? ಪವಿತ್ರ ಆತ್ಮಕ್ಕೆ ಹೇಗೆ ಭ್ರಾಂತಿಯಿಂದ ಅಪವಿತ್ರತೆ ಕಾಡುತ್ತದೆ?
ಹಲವಾರು ಚಿಂತಕರು ಇದಕ್ಕೆ ವೈವಿಧ್ಯವಾದ ಬಹುಸಂಖ್ಯೆಯಲ್ಲಿ ನಾಮಕರಣ ಮಾಡಿರುತ್ತಾರೆ, ಆದರೆ ಸಮಸ್ಯೆಯ ನಮಕರಣದಿಂದ ಪರಿಹಾರ ದೊರಕೊಲ್ಲ! ಹೇಗೆತಾನೆ “ಪೂರ್ಣಸ್ಥಿತಿ”ಗೆ “ಭಾಗಶಃ-ಪೂರ್ಣಸ್ಥಿತಿ” ಯ ಸಮ್ಮತಿ ಇದ್ದೀತು ? ಶುದ್ಧ, ನಿರ್ಮಲ, ಸಂಪೂರ್ಣತೆ ಗೆ ಸೂಕ್ಷ್ಮಕಣದಲ್ಲೋ ಕಿಂಚಿತ್ತೂ ಬದಲಾಗಲು ಸಮ್ಮತಿ ಇರೋದಿಲ್ಲ! ಹಿಂದುವು ಮಿಥ್ಯಾ- ತರ್ಕವನ್ನು ಇಲ್ಲಿ ಪ್ರತಿಪಾದಿಸೂದಿಲ್ಲ, ಪುರುಷಯೋಗ್ಯವಾಗಿ ಸ್ಪಷ್ಟೀಕರಿಸುತ್ತಾನೆ; ಚಿರಂಜೀವ, ನಿಖರ, ಅಗಣಿತ ಮತ್ತು ಸಾವು. ಸಾವು ಎಂದರೆ ವೃತ್ತದ ಕೇಂದ್ರ ಬಿಂದುಮಾತ್ರ ದೇಹದಿಂದೆ ದೇಹಕ್ಕೆ ಬದಲಾವಣೆಯಾಗುತ್ತದೆ ಎಂದು.
ಈ ವಾರ್ತಮಾನಕ್ಕೆ ನಮ್ಮ ಭೂತಕಾಲದ ಆಧಾರವಿದೆ, ಹಾಗೆಯೇ ನಮ್ಮ ಭವಿಷ್ಯ ನಮ್ಮ ವರ್ತಮಾನ ಕೃತಿಗಳಿಂದ ಆದರಿತವಾಗಲಿದೆ. ಹಾಗಿದ್ದರೆ, ಆತ್ಮದ ಈ ‘ಸಾವಿಂದ-ಸಾವು’ ‘ಹುಟ್ಟಿನಿಂದ-ಹುಟ್ಟು’ ಈ ನಿರಂತರ ಬದಲಾವಣೆಯಲ್ಲೇ ಸಿಲುಕಿದ್ದೀವಾ? ಮನುಷ್ಯನು ಚಂಡಮಾರುತಕ್ಕೆ ಸಿಲುಕಿರುವ ಸಣ್ಣ ಹಾಯಿ ದೋಣಿಯಾ? ನಮ್ಮ ಕ್ರಿಯಾ-ಕರ್ಮಾದಿಗಳ ಆಧಾರಗಳ ಮೇಲೆ ದೊಡ್ಡ ಅಲೆಗೊಳೊಡನೆ ಮೇಲಕ್ಕೆ ಹಾಗು ಸಣ್ಣದರೊಡನೆ ಕೆಳಕ್ಕೆ , ಏರುತ್ತ ಇಳಿಯುತ್ತ?
ಇಲ್ಲಿಂದ ಮುಕ್ತಿಯ ಮಾತು ಇಲ್ಲವೇ ಇಲ್ಲವ? ಈ ಪ್ರಶ್ನೆಗೆ ನಮ್ಮ ವೇದಗಳಲ್ಲೇ ಉತ್ತರವಿದೆ! “ಕೇಳಿ ಓ ಚಿರಂಜೀವ ಅಮರ ಆನಂದದ ಕುಡಿಗಳೇ, ಪುರಾತನ ಶಕ್ತಿಯೊಂದು ಎಲ್ಲ ಭ್ರಮೆ, ಅಂಧಕಾರಗಳನ್ನೂ ಮೀರಿ ನಿಂತಿದೆ, ಆ ಶಕ್ತಿಯ ಅರಿವೇ ಸಾಕು! ಎಲ್ಲ ನಿರ್ಭಂದಗಳ ವಿಮೋಚನೆಗೆ! ” ಎಂದು.
ಚಿರಂಜೀವ ಅಮರ ಆನಂದದ ಕುಡಿಗಳು, ಆಹ್ ಎಂಥ ನಾಮಕರಣ ನಮಗೆ, ಭರವಸೆಯ ಸೆಲೆ! ನಮ್ಮನ್ನು ನಾವು ಈ ಹೊಸ ನಾಮದಿಂದ ಸಂಬೋದಿಸುವ “ಅಮರ ಆನಂದದ ಕುಡಿಗಳು”! ನಾವು ಯಾರನ್ನೂ ಪಾಪಿ ಅನ್ನೂದಿಲ್ಲ, ಬದಲಿಗೆ ಚಿರಂಜೀವ ಅಮರ ಆನಂದದ ಕುಡಿಗಳು ಎನ್ನುತ್ತೇವೆ, ಭೂಮಿಯ ಮೇಲಿನ ನಿರ್ಮಲ, ಸಂಪೂರ್ಣ, ಸ್ವತಂತ್ರ್ಯಆತ್ಮ. ಪಾಪಿಗಳು! ಅಂತ ಸಂಬೋದನೆಯೇ ನಮ್ಮ ಪ್ರಖಾರ ಒಂದು ಮಿಥ್ಯಾರೋಪ! ಎದ್ದೇಳಿ, ಓ ಸಿಂಹಗಳೇ ನಿಮ್ಮ ನಿಮ್ಮ ಭ್ರಾಂತಿಯ ಆಡುತನದಿಂದ ಹೊರಗೆ ಬನ್ನಿ! ನೀವು ಪೂಜ್ಯ, ನಿರ್ಮಲ, ಸಂಪೂರ್ಣ, ಸ್ವತಂತ್ರ್ಯಆತ್ಮ. ನೀವು ಭೌತವಸ್ತುಗಳಲ್ಲ! ನೀವು ದೇಹವಲ್ಲ, ನೀವು ಭೌತಶಕ್ತಿಯಿಂದ ನಿರ್ಮಾಣವಾಗಿಲ್ಲ! ಹಾಗಾಗಿ ವೇದಗಳ ಪ್ರತಿಪಾದನೆ, ನಾವು ಬಹು ಭಯಪಡುವಂತಹ ಕೊನೆಯಿಲ್ಲದ ಕಾರಣ – ಪ್ರಭಾವದ ಬಂಧಿಯಲ್ಲ! ಆದರೆ ಯಾವುದರ ಮೂಲಕ ಸರ್ವ ಕಣಗಳೂ – ಎಲ್ಲ ಕಾರ್ಯಗಳೂ ವ್ಯಾಪ್ತವಾಗಿದೆಯೋ, ಯಾರಿಂದ ಗಾಳಿ, ನೀರು, ಅಗ್ನಿ, ಮೋಡಗಳು ಜೀವಿತವಿದೆಯೋ ಆ ಪದಾರ್ಥವೂ ನಾನೆ.
( ಮುಂದುವರೆಯುತ್ತದೆ)
ಜ್ಞಾನ ಋಣ – ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣ
Discussion about this post