No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
  • Advertise With Us
  • Grievances
  • About Us
  • Contact Us
Sunday, July 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಹಾಡುಗಳಿಂದಲೇ ಮುಗಿಲೆತ್ತರಕ್ಕೆ ಬೆಳೆದ ಪೋರ ಅರ್ಜುನ್ ಇಟಗಿ

kalpa News by kalpa News
April 16, 2021
in ಸಚಿನ್ ಪಾರ್ಶ್ವನಾಥ್
0
ಹಾಡುಗಳಿಂದಲೇ ಮುಗಿಲೆತ್ತರಕ್ಕೆ ಬೆಳೆದ ಪೋರ ಅರ್ಜುನ್ ಇಟಗಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಎರಡು ವರ್ಷಗಳ ಹಿಂದಿನ ಮಾತು, ಅವರ ತಂದೆ ವ್ಯಾಪಾರದ ಸರಕಾಗಿ ತಂದ ಒಂದು ಸ್ಪೀಕರ್ ಹಾಗೆ ಅಂಗಡಿಯ ಮೂಲೆಯಲ್ಲಿ ಇತ್ತು. ಅದೇನೋ ಅವರಿಗೂ ಯಾವಾಗಲೂ ಸಂಗೀತದ ಹುಚ್ಚು. ತಾವು ಹಾಡೋದು, ರೆಕಾರ್ಡ್ ಮಾಡಿಕೊಂಡು ಕೇಳೋದು ಹೀಗೆ ನಡೆದಿತ್ತು. ಅಲ್ಲೇ ಆಡುತ್ತಿದ್ದ ಪುಟ್ಟ ಮಗು ಅವನದು ದಿನ ಒಂದೇ ಹಠ ಅಪ್ಪ ನಾನೂ ಹಾಡಬೇಕು, ರೆಕಾರ್ಡ್ ಮಾಡಿ ಅನ್ನೋದು. ತಂದೆಗೆ ಇದು ಸಾಮಾನ್ಯ ಅಲ್ವಾ? ಚಿಕ್ಕ ಮಕ್ಕಳು ಏನೇ ನೋಡಿದರೂ ನಂಗೂ ಬೇಕು ಅನ್ನೋದು ಇದ್ದಿದ್ದೇ. ಅವನ ಸಮಾಧಾನಕ್ಕೆ ಹಾಡಿಸೋರು. ತೊದಲಾಗಿ, ಬಂದ ಹಾಗೆ ಏನೋ ಒಂದಿಷ್ಟು ಹಾಡಿರುತ್ತಿದ್ದ. ಹೀಗೆ ದಿನಾ ನಡೆಯೋದು.
ಆದರೆ ಒಂದು ವಿಷಯ ಗಮನಿಸಬೇಕು, ಉಳಿದ ಮಕ್ಕಳು ಆದರೆ ದಿನ ದಿನ ಅವರ ಆಸೆಗಳು ಬದಲಾಗುತ್ತವೆ. ಇವತ್ತು ಸ್ಪೀಕರ್, ನಾಳೆ ಬ್ಯಾಟ್, ನಾಳಿದ್ದು ಫುಟ್ಬಾಲ್, ಮತ್ತೆ ಡಾನ್ಸ್ ಹೀಗೆ. ಈ ಪೋರನದು ಹಾಗಲ್ಲ. ದಿನ ಬೆಳಗಾದರೆ ಅದೇ ಪ್ರಯತ್ನ. ಅದೊಂದು ದಿನ ಎಲ್ಲೋ ಹೋಗಿದ್ದ ಅಪ್ಪ ಬಂದು ಕೂತರು. ‘ಅಪ್ಪ ನಾನು ಹಾಡ್ತಿನಿ’ ದಿನದ ಹಾಗೆ ‘ಆಯ್ತು’ ಅಂದರು. ಅದು ಬೊಂಬೆ ಹೇಳುತೈತೆ ಹಾಡು. ಅವನು ಐದರ ಎಳವೆಯಲ್ಲೇ ರಾಶಿ ರಾಶಿ ಪದಗಳ ನೆನಪಿಸಿಕೊಂಡು ಹಾಡುತ್ತಿದ್ದರೆ ತಂದೆಗೋ ರೋಮಾಂಚನ. ಒಂದೇ ಏಟಿಗೆ ಇದ್ದ ಸುಸ್ತು, ಕಷ್ಟ ಎಲ್ಲಾ ಮಾಯವಾದ ಅನುಭವ. ಇನ್ನು ತಡ ಮಾಡಲಿಲ್ಲ. ತಮ್ಮ ಕನಸುಗಳಿಗೆಲ್ಲ ಬಾಗಿಲು ಹಾಕಿ ಮಗನ ಬೆನ್ನಿಗೆ ನಿಂತರು. ಮಗನನ್ನೇ ಕನಸಾಗಿ ಕಂಡರು. ಅಲ್ಲಿ ಕಾಸಿಗೆ ಬಡತನ ಇತ್ತೋ ಏನೋ ಆದರೆ ಕನಸಿಗೆ ಬಡತನ ಇರಲಿಲ್ಲ. ಅವರ ನಂಬಿಕೆಯೂ ಸುಳ್ಳಾಗಲಿಲ್ಲ. ಒಂದು ಕನ್ನಡದ ಜನ ತನ್ನ ಗುರುತಿಸಿ ಆರಾಧಿಸುವ ಮಟ್ಟಿಗೆ ಅವನು ಬೆಳೆದ. ಅವನು ವಯಸ್ಸು ಏಳು. ಹೆಚ್ಚಿನವರಿಗೆ ತಂದೆ ತಾಯಿಯೇ ಹೋಗಿ ಏಳಿಸುವ ವಯಸ್ಸು. ಯಾರವನು? ನಿಮಗೆ ಗೊತ್ತಾಗಿರಬೇಕು, ಬೇರಾರೂ ಅಲ್ಲ ಅರ್ಜುನ್ ಇಟಗಿ.
ಸರಿ ಸುಮಾರು ಒಂದು ವರ್ಷದ ಹಿಂದೆ ಒಂದು ಗಾನ ಯಕ್ಷ ಉದಿಸಿದ. ಯಾವುದೇ ಹಾಡು ಕೊಡಿ ರೆಡಿ ಅನ್ನೋದೆಯ, ಮೈಕ್ ತಗೊಂಡು ಬಂದು ಹಾಡ್ತಾ ಇರೋದೆ. ಚಿಕ್ಕ ಹುಡುಗ ಬಂದು ಸ್ಟೇಜ್ ಮೇಲೆ ನಿಂತಾಗ ಎಷ್ಟು ತಾನೇ ಹಾಡಿಯಾನು? ಒಂದೋ ಎರಡೋ ವಾರ ಅಷ್ಟೆ ಅಂದುಕೊಂಡು ಸುಮ್ಮನಾದವರೆಷ್ಟೋ! ಆದರೆ ಹಾಗೆ ಆಗಲಿಲ್ಲ. ದಿನೆ ದಿನೇ ಹೊಸ ಹಾಡುಗಳೊಂದಿಗೆ ಬಂದು ಬೆಳೆಯುತ್ತಲೇ ಹೋದ. ಎಂಥ ಎಂಥ ಅಭಿಮಾನಿಗಳು! ಅದ್ಭುತ. ಒಳಿತು ಮಾಡು ಮನುಷ, ನಿ ಇರದು ಮೂರು ದಿವಸ ಅಂತ ಅವನು ಹಾಡುತ್ತ ಇದ್ದರೆ, ಅದರ ಅರ್ಥವೇ ಇನ್ನು ಚಂದ ಅನ್ನಿಸುತಿತ್ತು.

ಎಣ್ಣೆ ನಿಮ್ದು ಊಟ ನಮ್ದು ಅಂತ ಒಬ್ಬ ಪುಟ್ಟ ಗಾಯಕ ಕನ್ನಡಿಗರ ಮನ ಗೆದ್ದಿದ್ದ. ಆಗಿನ್ನೂ ಅವನಿಗೆ ಏಳರ ಹರೆಯ. ಸ್ವಲ್ಪ ಹಿಂದಿನ ಪೀಳಿಗೆ ಆಗಿದ್ದರೆ ಗೋಲಿ ಆಡಿಕೊಂಡು ಇರುತ್ತಿದ್ದ, ಈಗಿನ ಕಾಲದಲ್ಲಿ ಅಂದರೆ ಎಲ್ಲೋ ಆನ್ಲೈನ್ ಗೇಮ್ಸ್ ಆಡಿಕೊಂಡು, ಪುಸ್ತಕ, ಟ್ಯೂಷನ್ ಅಂದುಕೊಂಡು ಇರುವ ವಯಸ್ಸು. ಅದರೆ ಇವನು ಹಾಗಲ್ಲ. ಸಾಧು ಕೋಕಿಲ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ಸೇರಿದಂತೆ ಅದೆಷ್ಟೋ ಸಂಗೀತ ಕ್ಷೇತ್ರದ ದಿಗ್ಗಜರು ಅರ್ಜುನನ ಹಾಡಿಗೆ ಮಾರು ಹೋದರು. ನೋಡ ನೋಡುತ್ತಿದ್ದಂತೆ ಆ ಪುಟ್ಟ ಮಾಂತ್ರಿಕ ಕರುನಾಡನ್ನು ತನ್ನ ಕಡೆ ಸೆಳೆದುಕೊಂಡು ಬಿಟ್ಟ. ಸದಾ ನೆನಪಾಗುವ ಒಂದು ವಿಷಯ ಕ್ಷೇತ್ರ ಯಾವುದೇ ಇರಲಿ ಅಲ್ಲಿ ಒಬ್ಬ ವಿಶಿಷ್ಟ ಸಾಧಕ ಉದಿಸಿದರೆ ಅವನ ಕಂಡು ಮತ್ತಷ್ಟು ಸಾಧಕರು ಪ್ರೇರಣೆ ಪಡೆಯುತ್ತಾರೆ. ಅಂತೆಯೇ ಇಲ್ಲೂ ಅರ್ಜುನನ ಕಂಡು ಅದೆಷ್ಟೋ ಮಕ್ಕಳ ಪೋಷಕರು ಸಂಗೀತ ಕೂಡ ವಿದ್ಯೆಯ ಜೊತೆಗೆ ನಮಗೆ ಒಂದು ಗುರುತು ನೀಡಬಲ್ಲುದು ಎಂದು ಅರಿತರು ಎನ್ನಬಹುದು.

ಇಂದು ಅರ್ಜುನನ ಹುಟ್ಟು ಹಬ್ಬ. ಏಪ್ರಿಲ್ ತಿಂಗಳ 16 ರಂದು ಕೊಪ್ಪಳದ ಗುಂಡಬಾಳದಲ್ಲಿ ಜನನ, ತಂದೆ ಚನ್ನಬಸಪ್ಪ ಇಟಗಿ ಮತ್ತು ತಾಯಿ ಸರಸ್ವತಿ. ತಂದೆಯ ಝೆರಾಕ್ಸ್ ಅಂಗಡಿ ಇದ್ದು, ಅವರಿಗೂ ಸಂಗೀತದ ಒಲವು ಹೆಚ್ಚು. ಹಾಗಾಗಿ ರಕ್ತದಲ್ಲೇ ಸಂಗೀತ ಬಂದು ಬಿಟ್ಟಿದೆ. ಖಾಸಗಿ ಟಿವಿ ಚಾನೆಲ್ ನಲ್ಲಿ ಹಾಡಿನ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆದ, ದಸರೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ, ಕರುನಾಡ ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ವಿಶ್ವ ಚೇತನ ಪುಟ್ಟರಾಜ ಪ್ರಶಸ್ತಿ, ಕಲಾಶ್ರೀ ಕನ್ನಡ ಕುವರ ಪ್ರಶಸ್ತಿ, ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ, ಪಂಚಮಸಾಲಿ ಪ್ರತಿಭೆ ಪ್ರಶಸ್ತಿ ಸೇರಿದಂತೆ ಒಟ್ಟು ಒಂದು ರಾಷ್ಟ್ರ ಪ್ರಶಸ್ತಿ ಮತ್ತು ಐದು ರಾಜ್ಯ ಪ್ರಶಸ್ತಿ ಅಲ್ಲದೆ ಇನ್ನೂ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.

ಅಲ್ಲದೆ ದಸರಾ, ಕಿತ್ತೂರು ಉತ್ಸವ, ಇಟಗಿ ಉತ್ಸವ, ಆನೆಗೊಂದಿ ಉತ್ಸವ, ಬೀದರ್ ಕನ್ನಡ ರಾಜ್ಯೋತ್ಸವ, ಇಟಗಿ ಉತ್ಸವದ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗೌರವ, ಬೆಂಗಳೂರು, ಸಿಂಧಗಿ, ಬೆಳಗಾವಿ ಮತ್ತು ಶಿವಮೊಗ್ಗ ಸೇರಿದಂತೆ ಇನ್ನೂ ಹಲವಾರು ಕಡೆ 300 ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾನೆ.
ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರವು ನೀಡುವ ಮೂಲಕ, ಕೋವಿಡ್ ಸಮಯದಲ್ಲಿ ಜಿಲ್ಲಾಧಿಕಾರಿಗಳ ನೈತಿಕ ಬೆಂಬಲವಾಗಿ ನಿಂತದ್ದು, ತನ್ನ ಪುಟ್ಟ ತಲೆಯಲ್ಲಿ ಸಾಮಾಜಿಕ ಜವಾಬ್ದಾರಿ ಅರಿತು ತನ್ನ ಕೈಲಾದ ಸೇವೆ ಮಾಡುತ್ತಲೇ ಇರುವುದು ಅರ್ಜುನನ ವೈಶಿಷ್ಟ್ಯತೆಗೆ ಸಾಕ್ಷಿ. ಎಂಟರ ಹರೆಯದ ಈ ಗೋಲ್ಡನ್ ಟ್ಯಾಗ್ ಸ್ಟಾರ್ ಗವಿ ಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ನೇತ್ರ ದಾನವನ್ನೂ ಮಾಡುವ ಮೂಲಕ ತನ್ನ ಹಿರಿಮೆಯನ್ನು ಮೆರೆದಿದ್ದಾನೆ, ಅವನಿಂದಾಗಿ ಇಡೀ ಕುಟುಂಬವೇ ಇಂದು ನೇತ್ರದಾನ ಮಾಡಿದ್ದಾರೆ. ತನ್ನ ಹೋದ ವರ್ಷದ ಹುಟ್ಟು ಹಬ್ಬವನ್ನು ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿ ಆಚರಿಸಿದ್ದ. ಇದಾಗಲೇ ಏಳು ಚಿತ್ರಗಳಲ್ಲಿ ಗಾಯನ ಮಾಡಿದ್ದು ಜೊತೆಗೆ ಎರಡು ಆಲ್ಬಂ ಸಾಂಗ್ಸ್ ಕೂಡ ಮಾಡಿರುತ್ತಾನೆ. ಇತ್ತೀಚೆಗೆ ಹಿಟ್ಲರ್ ಎಂಬ ಚಿತ್ರದಲ್ಲಿ ನಟನೆಯನ್ನೂ ಮಾಡುವ ಮೂಲಕ ತನ್ನ ಪ್ರತಿಭೆಯನ್ನು ತೋರುತ್ತಿದ್ದಾನೆ, ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಹೀಗೆ ಅರ್ಜುನ ಒಬ್ಬ ಗಾಯಕನಾಗಿ ಅಷ್ಟೇ ಅಲ್ಲ, ಒಬ್ಬ ಉತ್ತಮ ನಾಗರೀಕನಾಗಿಯೂ ಬೆಳೆಯುತ್ತಿದ್ದಾನೆ. ಹೆಮ್ಮೆ ಅನ್ನಿಸುವುದು ಇಂತಹ ವಿಚಾರಗಳಲ್ಲಿ; ಕನ್ನಡಾಂಬೆ ಇಂತಹ ಇನ್ನೂ ಅನೇಕ ಪುತ್ರರ ಆಶೀರ್ವದಿಸಲಿ. ಇವರ ಸಂತತಿ ನೂರ್ಮಡಿ ಆಗಲಿ. ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಅರ್ಜುನ. ತಾಯಿ ಭಾರತಿಯ ಆಶೀರ್ವಾದ ಸದಾ ನಿನ್ನ ಮೇಲಿರಲಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Arjun itagiKannada News WebsiteLates News KannadaSachin Parshwanathಅರ್ಜುನ್ ಇಟಗಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಜಾಪುರ: ಏ.16ರಿಂದ ಮೇ 15ರವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ

Next Post

ಕೋವಿಡ್ 2ನೆಯ ಅಲೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಸ್ಥಗಿತ

kalpa News

kalpa News

Next Post
ಕೋವಿಡ್ 2ನೆಯ ಅಲೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಸ್ಥಗಿತ

ಕೋವಿಡ್ 2ನೆಯ ಅಲೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಸ್ಥಗಿತ

Leave a Reply Cancel reply

Your email address will not be published. Required fields are marked *

No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL