ಕಲ್ಪ ಮೀಡಿಯಾ ಹೌಸ್
ಅದೊಂದು ಸರ್ಕಾರಿ ಕಚೇರಿ. ಅಲ್ಲೊಂದು ಅತೃಪ್ತ ಜೀವ. ಅದರ ಬಳಿ ಎಲ್ಲವೂ ಇತ್ತು, ಮನಶ್ಶಾಂತಿ ಒಂದನ್ನು ಬಿಟ್ಟು. ಅದರ ಪರಿಧಿ ಒಳಗೆ ಒಂದು ಸೊಳ್ಳೆಯೂ ಬರುವಂತೆ ಇರಲಿಲ್ಲ. ಅದನ್ನು ಹಿಂಡಿ ಮೇಲಿನವರ ಬಳಿ ಒಯ್ಯುತ್ತಿದ್ದ ಪ್ರಾಣಿ ಅದು. ಮೊಗಸಾಲೆಯಲ್ಲಿ ಒಂದು ಮಾತಿತ್ತು, ಅವನು ಒಂಬತ್ತು ತಿಂಗಳು ಕಳೆದರೂ ಹುಟ್ಟಿರಲಿಲ್ಲ ಅಂತೆ. ಆಗ ಅವರ ತಂದೆ ದೇವರಿಗೆ ಒಂದು ಕಂಪ್ಲೈಂಟ್ ಮಾಡಿದ. ಆವಾಗ ಇವನು ಹುಟ್ಟಿದ್ದು. ಅದಕ್ಕೆ ಮಾತು ಮಾತಿಗೆ ಕಂಪ್ಲೇಟ್ ಮಾಡ್ತಾನೆ ಅಂತ. ಇದ್ರೂ ಇರಹುದೇನೊ. ನನಗೇನು ಗೊತ್ತು, ನಾನು ಪಾಪದೋನು.
ಅದರ ಕಾಟಕ್ಕೆ ಬೇಸತ್ತು ಹೊದವರೆಷ್ಟೋ, ಅತ್ತು ಕರೆದು ನೊಂದವರೆಷ್ಟೋ. ನನ್ನ ಪ್ರಶ್ನೆ ಒಂದೇ ಆ ದೇವರಿಗೆ, ಇಂತಹ ಒಂದು ಎಡಬಿಡಂಗಿ ಅವಶ್ಯಕತೆ ಏನಿತ್ತು ಈ ಭೂಮಿಯ ಮೇಲೆ ಅಂತ. ಏನಾದ್ರೂ ಕಷ್ಟ ಅಂತ ಬರ್ತಿದೆ ಅಂತ ಗೊತ್ತಾದ್ರೆ ಸಾಕು ಯಾರನ್ನೋ ಸಿಕ್ಕು ಹಾಕಿಸಿ ತಾನು ತಪ್ಪಿಸಿಕೊಳ್ಳುತ್ತಿದ್ದ. ದಿನ ಬೆಳಗಾದರೆ ಕಚೇರಿಯಲ್ಲಿ ಜಗಳ, ಕೆಲಸದಲ್ಲಿ ಗೋಳು ಹೊಯ್ದುಕೊಳ್ಳುವುದು. ಲಿಮಿಟೆಡ್ ಲಂಚಾವತಾರ ಕೂಡ ಇತ್ತು.

ಕಚೇರಿಯ ಮುಂದೆ ಯಾವಾಗಲೂ ಒಂದು ನಾಯಿ ಬಂದು ಮಲಗುತ್ತಿತ್ತು. ಯಾರೋ ಊಟ ಉಳಿದಾಗ ಒಂದಿಷ್ಟು ಹಾಕೊರು. ಅದನ್ನೇ ತಿಂದುಕೊಂಡು ಯಾರಿಗೂ ಕಷ್ಟ ಕೊಡದೆ ಅಲ್ಲೇ ಬಿದ್ದುಕೊಂಡು ಇರುತ್ತಿತ್ತು. ಇವನಿಗೆ ಅನ್ನ ಹಾಕುವುದು ಬಿಡಿ, ಅದನ್ನು ಕಂಡರೆ ಆಗ್ತಾ ಇರಲಿಲ್ಲ. ಹೊಡೆಯೋನು ಬಡಿಯೋನು ಅವನು ಅದು ಅಲ್ಲೇ ಎಲ್ಲೋ ಓಡಿ ಹೋಗಿ ಮತ್ತೆ ಬಂದು ಮಲಗುತ್ತಿತ್ತು. ದುರದೃಷ್ಟವಶಾತ್ ಅದು ಆ ಮಳೆಯಲ್ಲಿ ಮರಿಗಳನ್ನು ಕೂಡ ಹಾಕಿತ್ತು. ಆ ಪುಟ್ಟ ಮರಿಗಳನ್ನು ತಗೊಂಡು ಅಲ್ಲಿ ಇಲ್ಲಿ ಓಡೋದು. ಅವನ್ನು ಬೆಚ್ಚಗಿನ ಜಾಗ ಹುಡುಕಿ, ಇಡೋದು. ಬೇರೆ ನಾಯಿ, ಎಲ್ಲರ ಕಣ್ಣು ತಪ್ಪಿಸಿ ಅವಕ್ಕೆ ಹಾಲು ಕುಡಿಸಿ, ತಾನು ಏನಾದ್ರೂ ತಿನ್ನೋಕೆ ಓಡಿ ಹೋಗೋದು. ಅವತ್ತು ಜನರ ಸಂಧಿಯಲ್ಲಿ ಬಾಗಿಲ ಬಳಿಯೇ ಮರಿಗಳನ್ನು ಇಟ್ಟುಕೊಂಡು ಥರ ಥರ ನಡುಗುತ್ತ ನಿಂತ್ಕೊಂಡು ಇತ್ತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post