No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Thursday, July 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

kalpa News by kalpa News
March 17, 2026
in Special Articles
0
ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಪ್ರತಿಷ್ಠಿತ ಹೆನ್ಕೆಲ್ #Henkel ಸಂಸ್ಥೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯಕ್ಕೆ ನೆರವಾಗುವ ನಿಟ್ಟಿನಲ್ಲಿ, ಇಂದು ಬೆಂಗಳೂರಿನಲ್ಲಿ ತನ್ನ ಹೊಚ್ಚ ಹೊಸ ‘ಕಸ್ಟಮರ್ ಅಪ್ಲಿಕೇಶನ್ ಸೆಂಟರ್’ #Customer Application Center ಅನ್ನು ಉದ್ಘಾಟಿಸಿದೆ.

ಈ ನೂತನ ಘಟಕವು ಸಹಯೋಗದ ಆವಿಷ್ಕಾರ ಕೇಂದ್ರವಾಗಿ (ಕೊಲ್ಯಾಬೊರೇಟಿವ್ ಇನ್ನೋವೇಷನ್ ಹಬ್) ಕಾರ್ಯನಿರ್ವಹಿಸಲಿದ್ದು, ಇಲ್ಲಿ ಹೆನ್ಕೆಲ್ ತಜ್ಞರು ಮತ್ತು ಗ್ರಾಹಕರು ಸೇರಿ ಮುಂದಿನ ಪೀಳಿಗೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನ ಉತ್ಪಾದನೆಗಾಗಿ ಸುಧಾರಿತ ಅದೆಸಿವ್ ಮತ್ತು ಶಾಖ ನಿರ್ವಹಣಾ ಉತ್ಪನ್ನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಬಹುದು, ಪರೀಕ್ಷಿಸಬಹುದು ಮತ್ತು ಮೌಲ್ಯೀಕರಿಸಬಹುದಾಗಿದೆ.
ಈ ಹೊಸ ಕೇಂದ್ರವು ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ (ಐಎಂಇಎ) ವಲಯದಲ್ಲಿ ಹೆನ್ಕೆಲ್ ಸಂಸ್ಥೆಯ ಅತ್ಯಂತ ಪ್ರಮುಖ ಅಪ್ಲಿಕೇಶನ್ ಎಂಜಿನಿಯರಿಂಗ್ ಘಟಕಗಳಲ್ಲಿ ಒಂದಾಗಿದ್ದು, ಇದನ್ನು ಭಾರತದ ಎಲೆಕ್ಟ್ರಾನಿಕ್ಸ್ ಮೌಲ್ಯವರ್ಧಿತ ಸರಣಿಯಲ್ಲಿನ ಒಂದು ಪ್ರಮುಖ ಕೊರತೆಯನ್ನು ನೀಗಿಸಲು ವಿನ್ಯಾಸಗೊಳಿಸಲಾಗಿದೆ. ಆ ಕೊರತೆ ಏನೆಂದರೆ, ಈವರೆಗೆ ಸುಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವುಗಳ ಗುಣಮಟ್ಟ ಪರೀಕ್ಷಿಸಲು ಉತ್ಪನ್ನಗಳನ್ನು ವಿದೇಶಗಳಿಗೆ ಕಳುಹಿಸಬೇಕಿತ್ತು. ಇದೀಗ ಈ ಹೊಸ ಮೂಲಸೌಕರ್ಯವು ಈ ಪ್ರಕ್ರಿಯೆಗೆ ತಗಲುವ ಸಮಯ ಮತ್ತು ವೆಚ್ಚವನ್ನು ಉಳಿಸಿ, ತಯಾರಕರು ಸ್ಥಳೀಯವಾಗಿಯೇ ವಿಶ್ವದರ್ಜೆಯ ಪರೀಕ್ಷೆ ಮತ್ತು ಮೌಲ್ಯೀಕರಣ ನಡೆಸಲು ಅನುವು ಮಾಡಿಕೊಡುತ್ತದೆ.

ಕಳೆದ ದಶಕದಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ಸುಮಾರು ಆರು ಪಟ್ಟು ಬೆಳೆದಿದೆ. ಡೇಟಾ ಸೆಂಟರ್ ಮತ್ತು ಎಐ ಕಂಪ್ಯೂಟಿಂಗ್ ಮೂಲಸೌಕರ್ಯಗಳ ಕ್ಷಿಪ್ರ ನಿರ್ಮಾಣ, 5ಜಿ ಮತ್ತು ಫೈಬರ್ ನೆಟ್‌ ವರ್ಕ್ ವಿಸ್ತರಣೆ, ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ವ್ಯವಸ್ಥೆಗಳು, ಕೈಗಾರಿಕಾ ಆಟೊಮೇಷನ್ ಹಾಗೂ ಸುಧಾರಿತ ವೈದ್ಯಕೀಯ ಉಪಕರಣಗಳಿಂದಾಗಿ ಈ ವೇಗವು ಮತ್ತಷ್ಟು ಜಾಸ್ತಿಯಾಗುತ್ತಿದೆ. ಈ ಪ್ರತಿಯೊಂದು ವಲಯಗಳೂ ಉನ್ನತ ದರ್ಜೆಯ ಅದೆಸಿವ್, ಶಾಖ ನಿರ್ವಹಣಾ ಸಾಮಗ್ರಿಗಳು ಮತ್ತು ರಕ್ಷಣಾತ್ಮಕ ಲೇಪನಗಳ (ಪ್ರೊಟೆಕ್ಟಿವ್ ಕೋಟಿಂಗ್ಸ್) ಮೇಲೆ ಬಹಳವಾಗಿ ಅವಲಂಬಿತವಾಗಿವೆ. ಅಲ್ಲದೆ, ಇವೆಲ್ಲವೂ ಭಾರತದಲ್ಲಿ ಸಾಂಪ್ರದಾಯಿಕವಾಗಿ ಲಭ್ಯವಾಗುವುದಕ್ಕಿಂತಲೂ ಹೆಚ್ಚಿನ ವೇಗದ ಮತ್ತು ಸ್ಥಳೀಯ ಅಪ್ಲಿಕೇಶನ್ ಎಂಜಿನಿಯರಿಂಗ್ ಬೆಂಬಲವನ್ನು ನಿರೀಕ್ಷಿಸುತ್ತಿವೆ.
ಈ ನಿಟ್ಟಿನಲ್ಲಿ ಈ ಸಮಸ್ಯೆಗೆ ಪರಿಹಾರ ಕಾಣಲು ಬೆಂಗಳೂರು ಅತ್ಯಂತ ಸಹಜವಾದ ಆಯ್ಕೆಯಾಗಿತ್ತು. ನಗರದಲ್ಲಿರುವ ಸೆಮಿಕಂಡಕ್ಟರ್ ವಿನ್ಯಾಸದ ಪ್ರತಿಭೆಗಳು, ಎಲೆಕ್ಟ್ರಾನಿಕ್ಸ್ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಕೇಂದ್ರಗಳು ಹಾಗೂ ಜಾಗತಿಕ ಒಇಎಂ ಎಂಜಿನಿಯರಿಂಗ್ ತಂಡಗಳ ಲಭ್ಯತೆಯು ಬೆಂಗಳೂರನ್ನು ಭಾರತದ ಎಲೆಕ್ಟ್ರಾನಿಕ್ಸ್ ಆವಿಷ್ಕಾರ ಕ್ಷೇತ್ರದ ಪ್ರಮುಖ ಕೇಂದ್ರವನ್ನಾಗಿ ಮಾಡಿದೆ. ಈ ಕೇಂದ್ರವನ್ನು ಇಲ್ಲಿ ಸ್ಥಾಪಿಸಿರುವುದು ಹೆನ್ಕೆಲ್‌ ನ ಅಪ್ಲಿಕೇಶನ್ ಪರಿಣತಿಯನ್ನು ಅದರ ಅಗತ್ಯವಿರುವ ಎಂಜಿನಿಯರ್‌ ಗಳು ಮತ್ತು ತಯಾರಕರ ಹತ್ತಿರಕ್ಕೆ ನೇರವಾಗಿ ತಲುಪಿಸಿದಂತಾಗಿದೆ.

ಈ ಕುರಿತು ಮಾತನಾಡಿದ ಹೆನ್ಕೆಲ್ ಇಂಡಿಯಾದ ಕಂಟ್ರಿ ಪ್ರೆಸಿಡೆಂಟ್ ಎಸ್‌. ಸುನಿಲ್ ಕುಮಾರ್ ಅವರು, “ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರವು ಇಂದು ಒಂದು ನಿರ್ಣಾಯಕ ಘಟ್ಟದಲ್ಲಿದೆ ಮತ್ತು ಬೆಂಗಳೂರು ಅದರ ಕೇಂದ್ರಬಿಂದುವಾಗಿದೆ. ನಮ್ಮ ಆದ್ಯತೆಯ ವಲಯಗಳಲ್ಲಿರುವ ತಯಾರಕರಿಗೆ ಈಗ ಕೇವಲ ವಿಶ್ವದರ್ಜೆಯ ಸಾಮಗ್ರಿಗಳು ಮಾತ್ರ ಬೇಕಿಲ್ಲ, ಬದಲಾಗಿ ನೈಜ ಉತ್ಪಾದನಾ ಪರಿಸ್ಥಿತಿಗಳಲ್ಲಿ ಆ ಸಾಮಗ್ರಿಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ, ಪರೀಕ್ಷಿಸುವ ಮತ್ತು ಮೌಲ್ಯೀಕರಿಸುವ ಹಾಗೂ ಪರಿಕಲ್ಪನೆಯ ಹಂತದಿಂದ ಮಾರುಕಟ್ಟೆಯ ಹಂತಕ್ಕೆ ವೇಗವಾಗಿ ಕೊಂಡೊಯ್ಯಲು ಸಹಾಯ ಮಾಡುವ ಸ್ಥಳೀಯ ಪಾಲುದಾರರ ಅಗತ್ಯವಿದೆ. ಈ ಕೇಂದ್ರವನ್ನು ನಿಖರವಾಗಿ ಆ ಉದ್ದೇಶಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ. ಭಾರತದ ಎಲೆಕ್ಟ್ರಾನಿಕ್ಸ್ ಭವಿಷ್ಯದ ಬಗ್ಗೆ ಹೆನ್ಕೆಲ್ ಹೊಂದಿರುವ ದೀರ್ಘಕಾಲದ ಬದ್ಧತೆಯನ್ನು ಈ ಕ್ರಮವು ತೋರಿಸುತ್ತದೆ” ಎಂದು ಹೇಳಿದರು.

ಈ 5,000 ಚದರ ಅಡಿ ವಿಸ್ತೀರ್ಣದ ಘಟಕದಲ್ಲಿ ಸರಿಸುಮಾರು 2,400 ಚದರ ಅಡಿಯಷ್ಟು ಜಾಗವನ್ನು ಪ್ರಯೋಗಾಲಯ ಮತ್ತು ಪರೀಕ್ಷಾ ಸ್ಥಳಕ್ಕಾಗಿ ಮೀಸಲಿಡಲಾಗಿದೆ. ಎಲೆಕ್ಟ್ರಾನಿಕ್ಸ್‌ ನ ನೈಜ ಉತ್ಪಾದನಾ ವ್ಯವಸ್ಥೆಗಳನ್ನೇ ಇಲ್ಲಿ ಮರುಸೃಷ್ಟಿಸಲಾಗಿದ್ದು, ಇದರಿಂದ ಗ್ರಾಹಕರು ಬೃಹತ್ ಪ್ರಮಾಣದ ಉತ್ಪಾದನೆಗೆ ಇಳಿಯುವ ಮೊದಲೇ ಸಾಮಗ್ರಿಗಳು ಮತ್ತು ಪ್ರಕ್ರಿಯೆಗಳನ್ನು ಮೌಲ್ಯಮಾಪನ ಮಾಡಲು ಹಾಗೂ ಉತ್ತಮಪಡಿಸಲು ಅವಕಾಶ ಸಿಗುತ್ತದೆ. ಒಟ್ಟು ಹೂಡಿಕೆಯ ಸುಮಾರು ಶೇ. 60-65 ರಷ್ಟು ಭಾಗವನ್ನು ಸುಧಾರಿತ ಲ್ಯಾಬ್ ಮತ್ತು ಪರೀಕ್ಷಾ ಉಪಕರಣಗಳಿಗೆ ವ್ಯಯಿಸಲಾಗಿದ್ದು, ಶೇ. 20-25 ರಷ್ಟನ್ನು ಗ್ರಾಹಕರೊಂದಿಗಿನ ಜಂಟಿ-ಅಭಿವೃದ್ಧಿ ಮೂಲಸೌಕರ್ಯಕ್ಕಾಗಿ ಬಳಸಲಾಗಿದೆ.
ಈ ಸೌಲಭ್ಯವು ಟೆಲಿಕಾಂ ಮತ್ತು 5ಜಿ ಮೂಲಸೌಕರ್ಯ, ಡೇಟಾ ಸೆಂಟರ್ ಮತ್ತು ಎಐ ಕಂಪ್ಯೂಟಿಂಗ್, ಪವರ್ ಎಲೆಕ್ಟ್ರಾನಿಕ್ಸ್ ಮತ್ತು ಇವಿ ಸಿಸ್ಟಮ್ ಗಳು, ಕೈಗಾರಿಕಾ ಆಟೊಮೇಷನ್ ಹಾಗೂ ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಎಂಬ ಐದು ಹೆಚ್ಚಿನ ಅಭಿವೃದ್ಧಿ ಸಾಧ್ಯತೆಯ ವಲಯಗಳಿಗೆ ಸೇವೆ ನೀಡಲಿದೆ. ಸುಧಾರಿತ ಶಾಖ ನಿರ್ವಹಣಾ ಪರೀಕ್ಷೆ, ನಿಖರವಾದ ಡಿಸ್ಪೆನ್ಸಿಂಗ್ ಸಿಸ್ಟಮ್‌ ಗಳು, ಎಲೆಕ್ಟ್ರಿಕಲ್ ಕ್ಯಾರೆಕ್ಟರೈಸೇಶನ್ ಪರಿಕರಗಳು ಮತ್ತು ಕ್ಷಿಪ್ರ-ಕ್ಯೂರ್ ಚೇಂಬರ್‌ ಗಳನ್ನು ಈ ಘಟಕವು ಒಳಗೊಂಡಿವೆ. ಇವು ಮಾದರಿ ತಯಾರಿಕೆ (ಪ್ರೋಟೊಟೈಪಿಂಗ್) ಮತ್ತು ಸಾಮಗ್ರಿಗಳ ಮೌಲ್ಯೀಕರಣದಿಂದ ಹಿಡಿದು ಉತ್ಪಾದನಾ ಸಿದ್ಧತೆಯವರೆಗಿನ ಸಂಪೂರ್ಣ ಪ್ರಕ್ರಿಯೆಗೆ ಬೆಂಬಲ ನೀಡುತ್ತವೆ.

ಅಪ್ಲಿಕೇಶನ್ ಎಂಜಿನಿಯರಿಂಗ್, ಪ್ರಕ್ರಿಯೆ ಸುಧಾರಣೆ ಮತ್ತು ವಿಶ್ವಾಸಾರ್ಹತೆಯ ಮೌಲ್ಯೀಕರಣವನ್ನು ಸ್ಥಳೀಯವಾಗಿ ಲಭ್ಯವಾಗಿಸುವ ಮೂಲಕ, ಈ ಕೇಂದ್ರವು ಭಾರತದ ‘ಮೇಕ್- ಇನ್ -ಇಂಡಿಯಾ’ ಮತ್ತು ‘ಉತ್ಪಾದನಾ ಆಧಾರಿತ ಪ್ರೋತ್ಸಾಹಕ’ (ಪಿಎಲ್ಐ) ಯೋಜನೆಗಳ ಉದ್ದೇಶಗಳಿಗೆ ನೇರವಾಗಿ ಬೆಂಬಲ ನೀಡುತ್ತದೆ. ಈ ಹಿಂದೆ ಭಾರತೀಯ ಎಲೆಕ್ಟ್ರಾನಿಕ್ಸ್ ತಯಾರಕರು ವಿದೇಶಿ ಸೌಲಭ್ಯಗಳ ಮೂಲಕ ನಡೆಸಬೇಕಿದ್ದ ಅಥವಾ ಮುಂದೂಡಬೇಕಿದ್ದ ಗಮನಾರ್ಹ ಚಟುವಟಿಕೆಗಳನ್ನು ಈಗ ಸ್ಥಳೀಯವಾಗಿಯೇ ನಡೆಸಬಹುದಾಗಿದ್ದು, ಇದು ಉತ್ಪನ್ನ ಅಭಿವೃದ್ಧಿಯ ಅವಧಿಯನ್ನು ಕಡಿಮೆ ಮಾಡುವುದಲ್ಲದೆ, ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಹೆನ್ಕೆಲ್‌ನ ಅಪ್ಲಿಕೇಶನ್ ತಜ್ಞರು ಈ ಘಟಕದಲ್ಲಿ ಗ್ರಾಹಕ ಎಂಜಿನಿಯರಿಂಗ್ ತಂಡಗಳೊಂದಿಗೆ ಜೊತೆಗೂಡಿ ಕೆಲಸ ಮಾಡಲಿದ್ದಾರೆ. ನಿರ್ದಿಷ್ಟ ಸಾಧನಗಳ ವಿನ್ಯಾಸ ಮತ್ತು ಉತ್ಪಾದನಾ ಅವಶ್ಯಕತೆಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಿದ್ದಾರೆ. ಈ ಸಹಯೋಗದ ಮಾದರಿಯೇ ಈ ಕೇಂದ್ರದ ವಿನ್ಯಾಸದ ತಿರುಳಾಗಿದ್ದು, ಇದು ಸಾಂಪ್ರದಾಯಿಕ ಪರೀಕ್ಷಾ ಪ್ರಯೋಗಾಲಯಕ್ಕಿಂತ ಈ ಕೇಂದ್ರವನ್ನು ಭಿನ್ನವಾಗಿಸುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: 'ಕಸ್ಟಮರ್ ಅಪ್ಲಿಕೇಶನ್ ಸೆಂಟರ್'BENGALURUCustomer Application CenterHenkelKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಬೆಂಗಳೂರುಹೆನ್ಕೆಲ್
Share199Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ | ಪ್ರಕೃತಿ ವಿಷಯದ ಚಿತ್ರಕಲೆ ಸ್ಪರ್ಧೆ | ತೀರ್ಥಹಳ್ಳಿಯ ಮೂವರಿಗೆ ಮೊದಲ 3 ಬಹುಮಾನ

Next Post

Bengaluru Gets a World-Class Electronics Co-Innovation Hub as Henkel Launches Advanced Application Center

kalpa News

kalpa News

Next Post
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL