ನವದೆಹಲಿ: ನಮ್ಮನ್ನಗಲಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದಶಕಗಳ ಕಾಲ ಪ್ರತಿಪಕ್ಷದಲ್ಲಿ ಕುಳಿತಿದ್ದರೂ ಸಹ, ಅಧಿಕಾರಕ್ಕಾಗಿ ಎಂದಿಗೂ ಸಿದ್ದಾಂತವನ್ನು ಬಿಡಲಿಲ್ಲ ಎಂದ ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡರು.
PM Shri @narendramodi and BJP National President Shri @AmitShah at the prayer meeting of former PM Atal Bihari Vajpayee in Delhi. Watch LIVE at https://t.co/LyWJuBSyho pic.twitter.com/NeiSNNbyHh
— BJP LIVE (@BJPLive) August 20, 2018
ಅಟಲ್ ಜೀ ನಿಧನದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಆಯೋಜನೆ ಮಾಡಲಾಗಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಅವರು, ಅಟಲ್ ಜೀ ಅವರ ಇಡಿಯ ಜೀವನ ಭಾರತಕ್ಕಾಗಿ ಮುಡಿಪಾಗಿತ್ತು. ದೇಶದ ಸೇವೆ ಮಾಡಬೇಕು ಎಂದು ಚಿಕ್ಕ ವಯೋಮಾನದಲ್ಲೇ ನಿರ್ಧಾರ ಮಾಡಿದ್ದರು. ದೇಶವನ್ನು ಒಂದೇ ರಾಜಕೀಯ ಪಕ್ಷ ನಿಯಂತ್ರಿಸುತ್ತಾ ಆಳುತ್ತಿದ್ದ ಕಾಲದಲ್ಲಿ ಅಟಲ್ ಜೀ ರಾಜಕೀಯಕ್ಕೆ ಬಂದು ಹೋರಾಟ ನಡೆಸಿದವರು ಎಂದರು.
ಈ ವೇಳೆ ತಮ್ಮ ಸ್ನೇಹಿತರನ್ನು ಕಳೆದುಕೊಂಡು ದುಃಖದಲ್ಲಿರುವ ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಮಾತನಾಡಿ, ನಾನು ಬಹಳಷ್ಟು ಸಾರ್ವಜನಿಕ ಸಮಾರಂಭಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಆದರೆ, ಅಟಲ್ ಜೀ ಇಲ್ಲದ ಸಮಾರಂಭ, ಅದರಲ್ಲೂ ಅವರಿಗೆ ಸಂತಾಪ ಸೂಚಿಸುವ ಸಭೆಯಲ್ಲಿ ನಾನು ಮಾತನಾಡುವ ಸಮಯ ಬರುತ್ತದೆ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ ಎಂದು ದುಃಖ ವ್ಯಕ್ತಪಡಿಸಿದರು.
Shri L. K. Advani is addressing a prayer meeting for former PM Shri Atal Bihari Vajpayee. Watch LIVE at https://t.co/LyWJuBSyho pic.twitter.com/FtOPDnxEYv
— BJP LIVE (@BJPLive) August 20, 2018
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಯೋಗ ಗುರು ಬಾಬಾ ರಾಮ್ ದೇವ್, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರುಖ್ ಅಬ್ದುಲ್ಲಾ ಹಾಗೂ ಮುಫ್ತಿ ಮೆಹಬೂಬಾ ಸೇರಿದಂತೆ ದೇಶದ ಗಣ್ಯಾತಿಗಣ್ಯರು ಕೀರ್ತಿಶೇಷ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಂಡು ನುಡಿನಮನ ಸಲ್ಲಿಸಿದರು.
Discussion about this post