ಸಾಮಾನ್ಯವಾಗಿ ಎಲ್ಲಾ ವಿಷಯಗಳೂ ಅರಿವಿಗೆ ಬರುವುದು ಮೊದಲು ವಿಷಯದ ಸತ್ಯಾಸತ್ಯತೆಯ ಪರೀಕ್ಷೆ, ಆಮೇಲೆ ಅದರ ಮೇಲೆ ವಿಶ್ವಾಸ. ಆದರೆ ಈ ರೀತಿ ಓದುವುದು ಲೌಕಿಕ ವಿಷಯಗಳಲ್ಲಿ. ಇಲ್ಲಿ ಅನುಭವಗಳಿಂದ ಬದಲಾವಣೆಗಳನ್ನು ಅರಿಯಬಹುದು. ಗ್ರಹಿಸಿ ನಂಬಬಹುದು.
ಆದರೆ ಈ ಗೀತೆ ಆತ್ಮ, ಧರ್ಮ, ಜೀವ, ಮೋಕ್ಷ, ಇಹ ಎಂಬ ಹಲವಾರು ಅಲೌಕಿಕ ವಿಷಯಗಳನ್ನೇ ಒಳಗೊಂಡಿದೆ. ಹಾಗಿದ್ದರೆ ಯಾವ ರೀತಿ ಇಲ್ಲಿ ಸಲ್ಲುತ್ತದೆ?
ಇವು ಅಲೌಕಿಕ ವಿಷಯಗಳು, ಆದ್ದರಿಂದ ಇಲ್ಲಿ ಮೊದಲು ವಿಶ್ವಾಸ, ಆಮೇಲೆ ಅನುಭವಪೂರಕ ವಿಮರ್ಶೆ – ಇದು ರೀತಿ.
ಆತ್ಮವೆಂಬುದು ಅತೀಂದ್ರಿಯ ವಸ್ತು. ಅದರ ಸುತ್ತಳತೆ, ತೂಕ ಎಲ್ಲವೂ ನಮ್ಮ ಹಿಡಿತಕ್ಕೆ ಸಿಕ್ಕದ್ದಲ್ಲ! ಇದು ಎಲ್ಲರಿಗೂ ತಿಳಿದಿರುವ ವಿಷಯ.
ಅಂತರಂಗ ಶೋಧನೆಯಿಲ್ಲವೆಂದರೆ, ಆತ್ಮದ ಅಸ್ತಿತ್ವದ ಅರಿವೇ ಆಗುವುದಿಲ್ಲ! ಮೊದಲು ಅಂತರಂಗ ಶೋಧನೆ, ಇದಕ್ಕೆ ಯಾವ ಸುಲಭೋಪಾಯವು ಇರುವುದಿಲ್ಲ. ಇದು ಬುದ್ಧಿಮಟ್ಟಕ್ಕೆ ನಿಲುಕೋ ವಸ್ತುವಲ್ಲ ಇದು, ಬ್ರಹ್ಮತತ್ವ.ಈ ಅಂತರಂಗ ಅಥವ ಮನಸ್ಸಿನ ಶುದ್ಧಿಗಾಗಿ ಇವುವ ಏಕೈಕ ಮಾರ್ಗವೇ ಸಾಧನಚತುಷ್ಟಯಗಳು.
1)ನಿತ್ಯಾನಿತ್ಯ ವಿವೇಕ Permanent – Temporary Classification.
2)ಇಹಾಮುತ್ರಾರ್ಥಭೋಗ-ವಿರಾಗ (ಇಂದ್ರಿಯ ಭೋಗ/ನಿಗ್ರಹ)
3)ಶಮಾದಿಷಟ್ ಸಂಪತ್ತಿ
1) ಶಮ
2) ದಮ
3) ಉಪರತಿ
4) ತಿಕ್ಷಿಕೆ
5) ಶ್ರದ್ಧೆ, ಶಾಸ್ತ್ರ / ಗುರುವಿನ ಮೇಲೆ ನಂಬಿಕೆ
6) ಸಮಾಧಾನ (ಮನಃ ನಿಗ್ರಹ, ನಿಶ್ಚಂತ ಸ್ಥತಿ)
4)ಮುಮುಕ್ಷುತ್ವ: ದುಃಖದ ಸ್ಮರಣೆಯಿಲ್ಲದೆ, ದ್ವಂದ್ವಗಳಿಗೆ ಮೇಲ್ಪಟ್ಟ, ಬಂಧಗಲಿಲ್ಲದೆ ಆನಂದಾನುಭವದಿಂದ ಕೂಡಿದ ಸ್ಥಿತಿ.
ಗೀತಾ ವ್ಯಾಸಂಗಿ:
ಇಹಲೋಕದ ಬೋಗ-ಐಶ್ವರ್ಯಗಳ ಪರಿಮಿತಿಯನ್ನು ಕಂಡು, ಕಾಮ, ಕ್ರೋಧ, ಮತ್ಸರಗಳನ್ನು ಹದ್ದಿನಲ್ಲಿರಿಸಿಕೊಂಡು ದೇಹವು ಮತ್ತು ಜೀವನಕ್ಕಿಂತ ಮೇಲೆ ಆತ್ಮತತ್ವ ಎಂಬ ಪರಮಾರ್ಥವನ್ನೇ ಸರ್ವೋತ್ತಮವಾದದ್ದೆಂದು ಗಣಿಸಿರುತ್ತಾನೆ.
ಮುನ್ನೆಚ್ಚರಿಕೆಗಳು:
1) ಲೋಕ – ಇಹ ಲೋಕಕ್ಕೆ ಹಿಡಿಯದೇ, ಸಣ್ಣ, ಪುಟ ಪ್ರಶ್ನೆಗಳಿಗೆ ಲಗಾಮು ಹಾಕುವುದು.
ಎ) ಪಾಂಡವರು ಮಂತ್ರದಿಂದ ಹುಟ್ಟಿದರೆ?
ಬಿ) ನರಕಾಸುರ ಬಂಧಿಸಿದ್ದ ಎಲ್ಲ ಸ್ತ್ರೀಯರೂ ತರುಣಿಯರೆ?
ಈ ತರಹದ ಪ್ರಶ್ನೆಗಳು ನಮ್ಮಲ್ಲಿ ಯಾವ ಪ್ರಗತಿಯನ್ನೂ ಉಂಟು ಮಾಡುವುದಿಲ್ಲ! ಅಲಂಕಾರದ ಪ್ರಯೋಗವನ್ನು ಅರ್ಥವೃದ್ಧಿಗಾಗಿ ಮಾತ್ರ ಪರಿಗಣಿಸಬೇಕು. ತಾತ್ಪರ್ಯದ ಕಡೆಗೆ ಲಕ್ಷ್ಯವಿಟ್ಟು ಅಭ್ಯಸಿಸಬೇಕು.
ಜೀವನಕ್ಕಾಗಿ ದುಡಿಯುವುದು ನಿಕೃಷ್ಟಕಾರ್ಯವಲ್ಲಾ! ಅದು ಶ್ರೇಷ್ಠವಾದ ಕರ್ತವ್ಯ. ಬ್ರಹ್ಮಸಾಕ್ಷಾತ್ಕಾರಕ್ಕೂ ಕೂಡ ಅದು ಅತ್ಯವಶ್ಯವಾದುದು.
ಅಂಶಗಳು:
1) ತತ್ವ – ಶ್ರವಣ, ವನನ, ಜ್ಞಾನಾರ್ಜನೆಗಳಿಂದಲೇ ಅಡಿಪಾಯ ಭದ್ರವಾಗೋದು.
2) ಸಾಧನ ಅನುಸಂಧಾನ ಶಾಸ್ತ್ರದ ಅಭ್ಯಾಸದ ಜೊತೆಗಿದ್ದರೆ ಮಾತ್ರವೇ ಯಾವ ವಿಧ್ಯೆಯೂ ತನ್ನ ಶ್ರೇಷ್ಠತೆ ಪಡೆಯುವುದು.
ಮುಂದುವರೆಯುವುದು
ಅರಿಕೆ:
ಓದುಗ ಮಿತ್ರರೇ, ಈ ಲೇಖನ ಮಾಲಿಕೆಯ ಬಹುಬಾಗ ಕನ್ನಡದ ಹೆಮ್ಮೆಯ ಸಾಹಿತ್ಯ ಚಿಂತಕ, ಕವಿ, ಶ್ರೀ ಡಿ.ವಿ. ಗುಂಡಪ್ಪನವರ ಜೀವನ ಧರ್ಮಯೋಗ’ ಎಂಬ ಭಗವದ್ಗೀತೆಯ ಮೇಲಿನ ಗ್ರಂಥದ ಮೇಲೆ ಆಧಾರಿತವಾಗಿದೆ. ಇದಲ್ಲದೆ ಹಲವಾರು ಮಹನೀಯರುಗಳ ಪ್ರವಚನ, ಗ್ರಂಥಗಳ ಮೇಲೆ ಆಧಾರಿತ ವಾಗಿದೆ. ಆಯಾ ಲೇಖನದ ಕೆಳಗೆ ತತ್ ಸಂಭಂಧೀ ಗ್ರಂಥ ಋಣದ ವಿಷಯವೂ ಇರುತ್ತದೆ.
ಗ್ರಂಥ ಋಣ:
1. ಜೀವನ ಧರ್ಮಯೋಗ ಡಿವಿಜಿ
2 ಉಪನಿಷದ್ ರಹಸ್ಯವು ದ.ರಾ. ಬೇಂದ್ರೆ
ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಲೇಖಕರಿಗೆ ತಿಳಿಸಬೇಕಾದಲ್ಲಿ k.ajaykiran@gmail.com ಗೆ ಇಮೇಲ್ ಮಾಡಿ
Discussion about this post