Sunday, June 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಾನು ಚಿಕ್ಕವಳಿದ್ದಾಗ ಅಮ್ಮ ಹೇಳುತ್ತಿದ್ದ ಅಟಲ್ ಜೀ ಕಥೆ

August 16, 2018
in Special Articles
0 0
0
Share on facebookShare on TwitterWhatsapp
Read - 2 minutes
ಕಾರ್ಗಿಲ್ ಯುದ್ದ ಗೆದ್ದಾಗ ರೇಡಿಯೋ ನ್ಯೂಸ್ ಕೇಳಿ ಹೇಗೆ ಖುಷಿ ಪಟ್ಟಿದ್ದೆನೋ ಹಾಗೆಯೇ ನಂತರದ ಲೋಕಸಭಾ ಚುನಾವಣೆಯಲ್ಲಿ ಅಟಲ್ ಜೀಗೆ ಸೋಲಾದಾಗ ಅಷ್ಟೇ ಕಣ್ಣೀರಿಟ್ಟಿದ್ದೆ.

ವಿಶೇಷ ಲೇಖನ: ಅಕ್ಷತಾ ಬಜ್ಪೆ, ಖ್ಯಾತ ಅಂಕಣಕಾರ್ತಿ

ಆಗಿನ್ನೂ ತುರ್ತು ಪರಿಸ್ಥಿತಿಯಿಂದ ಹೊರಬಂದಿರಲಿಲ್ಲ ದೇಶ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ್ದ ಅಪ್ಪ(ನನ್ನ ತಾತ)ನ ಅನೇಕ ಒಡನಾಡಿಗಳು ನಮ್ಮ ಮನೆಗೆ ಬಂದು ಹಲವಾರು ಘಟನೆಗಳ ಅವಲೋಕನ ಮಾಡುತ್ತಿದ್ದರು. ಇಂದಿರಾ ಗಾಂಧಿ ಅವರನ್ನು ಜೈಲಿಗಟ್ಟಿದ ಸಂದರ್ಭದಲ್ಲಿನ ಅನುಭವ ಘೋರವಾದದ್ದು.

ದಿನದಲ್ಲಿ ಒಂದು ಬಾರಿ ದೊರೆಯುತ್ತಿದ್ದ ಒಂದು ಪ್ಲೇಟ್ ಅನ್ನದಲ್ಲಿ ಒಂದು ದಿನ 98 ಕಲ್ಲುಗಳನ್ನು ಲೆಕ್ಕ ಮಾಡಿದ್ದರಂತೆ. ಅನ್ನಕ್ಕೆ ಕಲ್ಲು ಬೆರಸುತ್ತಿದ್ದರೋ ಅಥವಾ ಕಲ್ಲಿಗೆ ಅನ್ನ ಬೆರೆಸುತ್ತದ್ದರೋ ತಿಳಿಯುತ್ತಿರಲಿಲ್ಲ. ಆದರೂ ನಮಗೆ ನೋವಾಗುತ್ತಿರಲಿಲ್ಲ. ಏಕೆಂದರೆ ನಾವು ಮಾಡುವ ಕೆಲಸ ತಾಯಿ ಭಾರತಿಗೆ ಸಮರ್ಪಿತ ಅಲ್ಲವೇ? ಯಾವಾಗಲಾದರೂ ತುಂಬ ಬೇಜಾರಾದಾಗ ಬೆಂಗಳೂರಿನ ಜೈಲಿನಲ್ಲಿ ಸೆರೆವಾಸ ಅನುಭಿಸುತ್ತಿದ್ದ ಅಟಲ್ ಜೀ ಅಡ್ವಾಣೀ ಜೀ ನೆನಪು ಮಾಡಿಕೊಳ್ಳುತ್ತಿದ್ದರಂತೆ.

ಈ ಕಥೆ ಕೇಳಿಸಿಕೊಳ್ಳುತ್ತಿದ್ದ ಅಪ್ಪ(ನನ್ನ ತಾತ) ಇರಲಿ ಬಿಡು.(70ರ ದಶಕ ಅದು) ನಮಗೂ ಕಾಲ ಬರುತ್ತದೆ. ಕಾಂಗ್ರೆಸ್ ನ ಅಟ್ಟಹಾಸ ಬೇಗ ಕೊನೆಗೊಳ್ಳುತ್ತದೆ. ಅತೀ ಶೀಘ್ರದಲ್ಲಿ ಜನಸಂಘ ಅಧಿಕಾರಕ್ಕೆ ಬರುತ್ತದೆ. ನಮ್ಮ ಕಷ್ಟ ನೀಗುತ್ತದೆ ಎಂದು.

ಅವರ ಮಾತುಗಳು ಮಗಿದ ಮೇಲೆ ನಾನು(ನನ್ನಮ್ಮ) ಅಪ್ಪನಲ್ಲಿ ಪ್ರಶ್ನೆ ಮಾಡಿದೆ. ಅಪ್ಪಾ.. ತಮಾಷೆ ಮಾಡುತ್ತಿದ್ದೀರಾ? ಜನಸಂಘಕ್ಕೆ ಚುನಾವಣೆಯಲ್ಲಿ ಠೇವಣಿಯೂ ಸಿಗುತ್ತಿಲ್ಲ. ಸಂಸತ್ತಿನಲ್ಲಿ 1-2 ಸಂಸದರೂ ಇಲ್ಲ. ನೀವು ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿದ್ದೀರಲ್ಲಾ? ಎಂದು. ಅದಕ್ಕೆ ಅಪ್ಪ(ನನ್ನ ತಾತ) ನೋಡುತ್ತಿರು, 100% ಜನಸಂಘ ಅಧಿಕಾರಕ್ಕೆ ಬರುತ್ತದೆ. ನಾವು ಭೂಗತರಾಗಿ ಕೆಲಸ ಮಾಡುತ್ತಿದ್ದಾಗ ಈ ಅಚಲವಾದ ವಿಶ್ವಾಸವೇ ನಮಗೆ ಸ್ಪೂರ್ತಿ ತುಂಬಿದ್ದು. ಹಾಗೆಯೇ ಅಟಲ್ ಜೀ ಒಂದು ದಿನ ಖಂಡಿತಾ ಈ ದೇಶದ ಪ್ರಧಾನಿಯಾಗುತ್ತಾರೆ.ದೇಶ ಮತ್ತೆ ಸುಭೀಕ್ಷವಾಗುತ್ತದೆ. ಎಂದು ಭವಿಷ್ಯ ನುಡಿದಿದ್ದರು.

ಇದು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನನ್ನ ಅಮ್ಮ ನನಗೆ ಹೇಳಿದ ಕಥೆಯಿದು. ಹಾಗೆಯೇ ಅಂದು ಅಟಲ್ ಜೀ ಪ್ರಧಾನಿಯಾಗುವುದನ್ನು ನೋಡಲು ಅಪ್ಪ(ನನ್ನ ತಾತ) ಬದುಕಿಲ್ಲವಲ್ಲ ಎಂದು ಬೇಸರಿಸಿ ಕೊಂಡಿದ್ದರು ಕೂಡ.

ಇಂತಹ ಕಥೆಗಳನ್ನು ಕೇಳುತ್ತಲೇ ಬೆಳೆದ ನನಗೆ ಅಟಲ್ ಜೀ ನನ್ನ ತಾತನಷ್ಟೇ ಮನಸ್ಸಿಗೆ, ಹೃದಯಕ್ಕೆ ಹತ್ತಿರ. ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭ ಪರೀಕ್ಷೆಯಲ್ಲಿ ದೇಶದ ಇಂದಿನ ಪ್ರಧಾನಿ. ಈ ಪ್ರಶ್ನೆಗೆ ಅಟಲ್ ಬಿಹಾರಿ ವಾಜಪೇಯಿ ಅಂತ ಒಂದಕ್ಷರವೂ ತಪ್ಪಿಲ್ಲದೆ ಹೆಮ್ಮೆಯಿಂದ ಬರೆದು ಬರುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. ನನ್ನಮ್ಮ ಅಟಲ್ ಜೀ ಆಡಳಿತದ ಮುತ್ಸದ್ಧಿತನವನ್ನು ವರ್ಣಿಸುತ್ತಿದ್ದಿದ್ದು ಹೀಗೆ ಒಂದು ಕೈಯಲ್ಲಿ 10 ತೆಂಗಿನಕಾಯಿ(ಹತ್ತಾರು ಮಿತ್ರಪಕ್ಷಗಳು) ಹಿಡಿದುಕೊಂಡು ಅಷ್ಟು ದಿಟ್ಟ ಆಡಳಿತ ನೀಡಿದ ನಾಯಕ ಈ ದೇಶದಲ್ಲಿ ಇನ್ನೊಬ್ಬನಿಲ್ಲ. ಎಂದೂ ತಾನು ನಂಬಿದ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡಿಲ್ಲ, ಆದರೂ ಆತ ಅಜಾತಶತ್ರು.

ದಿನಗಳು ಉರುಳಿದಂತೆ ರಾಜಕೀಯ ಬದಲಾಯಿತು. ಕಾರ್ಗಿಲ್ ಯುದ್ದ ಗೆದ್ದಾಗ ರೇಡಿಯೋ ನ್ಯೂಸ್ ಕೇಳಿ ಹೇಗೆ ಖುಷಿ ಪಟ್ಟಿದ್ದೆನೋ ಹಾಗೆಯೇ ನಂತರದ ಲೋಕಸಭಾ ಚುನಾವಣೆಯಲ್ಲಿ ಅಟಲ್ ಜೀಗೆ ಸೋಲಾದಾಗ ಅಷ್ಟೇ ಕಣ್ಣೀರಿಟ್ಟಿದ್ದೆ.

ಅಟಲ್ ಜೀ ನೀವು ರಾಜಕೀಯ ದಿಂದ ದೂರ ಉಳಿದಾಗ, ನಿಮ್ಮ ಆರೋಗ್ಯ ಕೈ ಕೊಡುತ್ತಿದೆ ಎಂದಾಗೆಲ್ಲಾ ತುಂಬಾ ನೊಂದುಕೊಳ್ಳುತ್ತಿದ್ದೆ. ದೇಶಸೇವೆ ಕಂಕಣ ತೊಟ್ಟ ಅಖಂಡ_ಬ್ರಹ್ಮಚಾರಿ ನಿಮ್ಮನ್ನೊಮ್ಮೆ ನೋಡಬೇಕು ಎಂಬ ಆಸೆ ಇನ್ನೂ ನೆರವೇರಿಲ್ಲ.

ಇಂದಿನ ನಿಮ್ಮ ಆರೋಗ್ಯ ಸ್ಥಿತಿಯ ಸುದ್ದಿ ಕೇಳಿ ಆಘಾತವಾಗಿದೆ. ನನಗೇ ತಿಳಿಯದಂತೆ ಕಣ್ಣಂಚು ಒದ್ದೆಯಾಗಿದೆ. ನನ್ನ ತಾತನ ಆರೋಗ್ಯ ಕೆಟ್ಟಾಗ ಅಳು ಒತ್ತರಿಸಿ ಬಂದಂತೆ ಇಂದೂ ಸಮಾಧಾನ ಮಾಡಿಕೊಳ್ಳಲಾಗುತ್ತಿಲ್ಲ.

ಭಗವಂತನ ಕೃಪೆ ನಿಮ್ಮ ಜೊತೆಗಿರಲಿ ಎಂದಷ್ಟೇ ಹಾರೈಸಬಲ್ಲೆ.

ಅಜಾತಶತ್ರು_ಅಟಲ್ ಜೀ
#pray_for_Ataljee

Tags: Akshatha BajpeAtal Bihari VajpayeeAtal jiIndira GandhiJana Sanghapray_for_Ataljee
Previous Post

ಮತ್ತೆ ಮಾತನಾಡುವಂತಾಗಲಿ: ವಾಜಪೇಯಿ ಸೋದರ ಸೊಸೆ ಪ್ರಾರ್ಥನೆ

Next Post

ನನ್ನ ಜೀವನದಲ್ಲಿ ಕಂಡ ಸಜ್ಜನಿಕೆಯ ಪ್ರಧಾನಿ ಅಟಲ್ ಜೀ: ಬಿಎಸ್‌ವೈ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನನ್ನ ಜೀವನದಲ್ಲಿ ಕಂಡ ಸಜ್ಜನಿಕೆಯ ಪ್ರಧಾನಿ ಅಟಲ್ ಜೀ: ಬಿಎಸ್‌ವೈ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025

ಹಾಸನ | ದೇವೇಗೌಡರ ಪ್ರಯತ್ನ | 30 ರಸ್ತೆಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ | ಗಡ್ಕರಿ ಭರವಸೆ

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!