ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಳಗಾವಿ: ಅಥಣಿ ತಾಲೂಕಿನ ಮದಭಾವಿ ಗ್ರಾಮದ 5 ನೆ ವಾರ್ಡ್ನಲ್ಲಿ ಕೆಲವು ದಿನಗಳಿಂದ ನೀರು ಸರಬರಾಜು ಸರಿಯಾಗಿ ಆಗದೇ ಜನರು ಪರದಾಡುವಂತಾಗಿದೆ.
ಒಂದೆಡೆ ಬೇಸಿಗೆ ಪ್ರಾರಂಭವಾಗಿದ್ದು, ಇದರ ಜೊತೆ ಕೊರೋನಾದಿಂದ ಹೊರಗಡೆ ಹೋಗದಂತೆ ಲಾಕ್ ಡೌನ್ ಆಗಿರುವುದರಿಂದ ಹೊರಗಡೆ ನೀರು ತರಲು ಜನರು ಹಿಂಜರಿಯುತ್ತಿದ್ದಾರೆ.
ನೀರಿನ ಬವಣೆ ಆರಂಭವಾಗಿರುವ ಕಾರಣ ಜನ-ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದು, ಪ್ರಮುಖವಾಗಿ ಜೈಭೀಮ್ ನಗರದಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ, ಈ ಸಮಸ್ಯೆಯನ್ನು ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಎರಡು ದಿನದಲ್ಲಿ ಸರಿಪಡಿಸಿ ಸುಲಲಿತವಾಗಿ ನೀರು ಸರಬರಾಜು ಆಗವಂತೆ ಕ್ರಮಕೈಗೊಳ್ಳಬೇಕು. ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಗರ ಕಾಂಬಳೆ, ಸಿದ್ದಪ್ಪ ಕಾಂಬಳೆ, ಮಹಾಂತೇಶ ನಡುವಿನಕೇರಿ, ಸಿದರಾಯ ಕಾಂಬಳೆ, ಜಯಪ್ಪ ಕಾಂಬಳೆ, ಸಚಿನ ಕಾಂಬಳೆ, ಮುರಗೇಪ್ಪ ಕಾಂಬಳೆ, ರಾಜು ಕಾಂಬಳೆ, ಜಿತೇಂದ್ರ ಕಾಂಬಳೆ, ಸತ್ಯಪ್ಪ ಕಾಂಬಳೆ ಇದ್ದರು.
(ವರದಿ: ಮಂಜುನಾಥ ಶರ್ಮಾ, ಅಥಣಿ)
Get in Touch With Us info@kalpa.news Whatsapp: 9481252093
Discussion about this post