Saturday, September 27, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಆನಂದ ಕಂದ

ಆಯುರ್ವೇದ ಜೀವನ ಮೋದ

December 19, 2024
in ಆನಂದ ಕಂದ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-18  |
ಭಾರತವು ನಮ್ಮ ಶಾಸ್ತ್ರಗಳಲ್ಲಿ ಕರ್ಮಭೂಮಿ ಎಂಬ ಹೆಸರಿನಿಂದ ಪ್ರಸಿದ್ಧಿ ಗಳಿಸಿದೆ. ಇದಕ್ಕೆ ಕಾರಣ ಏನಿರಬಹುದು? ಎಂದು ನೋಡ ಹೊರಟರೆ ಇಲ್ಲಿನ ಜ್ಞಾನ, ಸಂಸ್ಕೃತಿಗಳೇ ಮೂಲ ಕಾರಣಗಳಾಗಿವೆ. ಭಾರತದ ಈ ಸಾಂಸ್ಕೃತಿಕ ಸಂಪತ್ತು ಹಾಗೂ ಜ್ಞಾನಭಂಡಾರವೆಂಬ ಅಯಸ್ಕಾಂತದ ಸೆಳೆತಕ್ಕೆ ಪ್ರಪಂಚದ ಮೂಲೆ ಮೂಲೆಯಿಂದ ಹಲವಾರು ರಾಜ್ಯ, ಸಾಮ್ರಾಜ್ಯಗಳು ಆಕರ್ಷಿತವಾಗಿರುವುದನ್ನು ನಾವು ನಮ್ಮ ಇತಿಹಾಸದಲ್ಲಿ ಕಾಣುತ್ತೇವೆ. ತನ್ನ ಜ್ಞಾನನಿಧಿ, ಆರೋಗ್ಯ ಶಕ್ತಿ, ಸಂಪತ್ತುಗಳಿಂದ ತನ್ನನ್ನು ಗುರುತಿಸಿಕೊಂಡು ಕರ್ಮಭೂಮಿ ಎನಿಸಿಕೊಂಡ ದೇಶ ನಮ್ಮ ಭಾರತ. ನಮ್ಮಲ್ಲಿನ ಈ ಅಗಾಧ ಜ್ಞಾನದ ಆಕರಗಳೇ ವೇದಗಳು. ಅಂತೆಯೇ ಸಾಧನೆಗೆ ಪೂರಕವಾದ ಆರೋಗ್ಯ‌ ರಕ್ಷಣೆಯ ಆಕರ ಆಯುರ್ವೇದ. ರೋಗಮೂಲವನ್ನು ಗುರುತಿಸಿ ಪರಿಹಾರವನ್ನು ಹುಡುಕುವುದರಿಂದ ಶಾರೀರಿಕ ಹಾಗು ಮಾನಸಿಕ ಆರೋಗ್ಯವನ್ನು ಒದಗಿಸಬಲ್ಲ ವಿದ್ಯಾಧನವೇ ನಮ್ಮ ಆಯುರ್ವೇದ.

ರೋಗಲಕ್ಷಣಗಳನ್ನು ಗಮನಿಸಿ, ಒಳಹೊಕ್ಕು ಇಣುಕಿ ನೋಡುವ ವಿಶಿಷ್ಟ ಸಾಮರ್ಥ್ಯವನ್ನು ಆಯುರ್ವೇದವು ಹೊಂದಿದೆ. ಒಳಗಿನಿಂದ ಉದ್ಭವಿಸಿದ ಸಮಸ್ಯೆಗಳಿಗೆ ಒಳಗಿನಿಂದಲೇ ಪರಿಹಾರ ಕಂಡುಕೊಳ್ಳಬೇಕೆಂಬ ಧ್ಯೇಯವನ್ನು ಹೊಂದಿರುವ ಈ ಶಾಸ್ತ್ರವು ನೈಸರ್ಗಿಕವಾಗಿ, ಪ್ರಕೃತಿತಾಯಿಯೊಂದಿಗೆ ಹೊಂದಿಕೊಂಡು ಜೀವನ ಸಾಗಿಸುವ ಬಗೆಯನ್ನು ತೋರಿಸುತ್ತಾ ಬಂದಿದೆ. ಭಗವದ್ಗೀತಾದಿ ಗ್ರಂಥಗಳು ಉಲ್ಲೇಖಿಸುವಂತೆ ನಾವು ಸ್ವೀಕರಿಸುವ ಆಹಾರದ ಪರಿಣಾಮವೇ ನಮ್ಮ ಆರೋಗ್ಯ. ಈ ವಿಷಯವನ್ನು ಮನದಟ್ಟು ಮಾಡಿಕೊಂಡಿದ್ದ ನಮ್ಮ ಪೂರ್ವಜರು ಪ್ರತಿಯೊಬ್ಬರ ದೇಹಕ್ಕೆ ತಕ್ಕ ಪೋಷಣೆಯನ್ನು ನೀಡಬಲ್ಲ ಭೋಜನಕ್ಕೆ ಆದ್ಯತೆಯನ್ನಿತ್ತವರಾಗಿದ್ದರು. ಸಾತ್ವಿಕವಾದ ಆಹಾರವನ್ನು ಪರಿಶುದ್ಧವಾದ ಮನದಿಂದ ತಯಾರಿಸಿ, ಅದನ್ನು ಭುಂಜಿಸುವವರಾಗಿದ್ದರಿಂದ ಆ ಅನ್ನವು ನರನಾಡಿಗಳಲ್ಲಿ ಹೊಕ್ಕು, ವಪುವಿಗೆ ಅವಶ್ಯವಾದ ಆರೋಗ್ಯಭಾಗ್ಯವನ್ನು ಕರುಣಿಸುತ್ತದೆ. ತನ್ಮೂಲಕ ಹೃತ್ಕಮಲಕ್ಕೆ ಹೊಕ್ಕು ಸದ್ಭಾವ – ಸಚ್ಚಿಂತನೆಗಳನ್ನು ಮೂಡಿಸುತ್ತದೆ. ಮಾನಸಿಕ ಸ್ಥಿತಿಯು ಹದಗೆಡದೆ ಆಂತರಿಕ ಆರೋಗ್ಯವನ್ನು ಒದಗಿಸುತ್ತದೆ. ಸುಖಶಾಂತಿಗಳು ಮನವನ್ನು ತಬ್ಬಿಕೊಳ್ಳುತ್ತವೆ. ಇದರಿಂದ ಮಾನವನ ವ್ಯಕ್ತಿತ್ವವು ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದೆ ಎಂಬುದನ್ನು ಋಷಿಮುನಿಗಳ ಆದರ್ಶದ ಮೂಲಕ ಪ್ರತ್ಯಕ್ಷವಾಗಿ ನಾವು ಕಾಣಬಹುದು.
ಭಗವಂತನು ತಾನು ಒಬ್ಬರಿಂದ ಒಬ್ಬರನ್ನು ಭಿನ್ನವಾಗಿ, ವಿಶೇಷವಾಗಿ ಸೃಷ್ಟಿಸಿರುವಾಗ ಪ್ರತಿಯೊಬ್ಬನಿಗೂ ಏಕರೀತಿಯ ಚಿಕಿತ್ಸೆ, ಔಷಧಿಯು ಹೇಗೆ ತಾನೇ ಪ್ರಭಾವ ಬೀರೀತು? ಎಂಬ ವಿಚಾರಪಥದಲ್ಲಿ ಸಾಗುವುದು ಆಯುರ್ವೇದ. ವೈಯಕ್ತಿಕ ಸ್ವಭಾವವನ್ನು ಅರಿತು ಅದಕ್ಕನುಗುಣವಾಗಿ ಬೇರಿನಲ್ಲಿಯೇ ಪರಿಣಾಮ ಬೀರುವಂತಹ ಫಲಿತಾಂಶವನ್ನು ಕಂಡುಕೊಳ್ಳುವ ಮಾರ್ಗದಲ್ಲಿ ಹೆಜ್ಜೆ ಹಾಕುವುದು ಈ ವೇದಶಾಖೆ. ಇತರ ಚಿಕಿತ್ಸಾ ಪದ್ಧತಿಗಳಿಗೂ ಆಯುರ್ವೇದ ಜ್ಞಾನನಿಧಿಗೂ ಇರುವ ಗಮನಾರ್ಹ ವ್ಯತ್ಯಾಸವೇ ಇದು. ಅದರಿಂದಲೇ ಆಯುರ್ವೇದದ ಸ್ಥಾನಮಾನವು ಗಗನದೆತ್ತರಕ್ಕೆ ಏರುವುದು. ಪ್ರಕಾಶಮಾನ ತಾರೆಯಂತೆ ತಾರಾಪಥಕ್ಕೆ ಮತ್ತಷ್ಟು ಶೋಭೆಯನ್ನು ತರುವುದು. ಅಲೋಪತಿ ಮುಂತಾದ ಚಿಕಿತ್ಸಾವಿಧಿಗಳು ತಾತ್ಕಾಲಿಕ ಪ್ರಭಾವ ಬೀರುವ ಪದ್ಧತಿಗಳನ್ನು ಅವಲಂಬಿಸಸಿದ್ದರೆ, ಇತ್ತ ಆಯುರ್ವಿದ್ಯೆಯು ಆ ರುಜಿನವು ಮತ್ತೆ ಬಾರದಂತೆ ಹೊಣೆಯನ್ನು ವಹಿಸಿ ಚಿಕಿತ್ಸೆಯನ್ನು ಕೈಗೊಳ್ಳುತ್ತದೆ. ಆರೋಗ್ಯವು ಮತ್ತಷ್ಟು ದೃಢವಾಗುವುದು. ಅದರೊಂದಿಗೆ ಮಾನಸಿಕ ನೆಮ್ಮದಿಯೂ ಸಿದ್ಧಿಸಿ, ಅದು ಸುಖಸಂತೋಷಗಳಿಂದ ಭರಿತವಾದ ಜೀವನಕ್ಕೆ ಕಾರಣವಾಗುವುದು. ಆರೋಗ್ಯದೊಂದಿಗೆ ಜೀವನ ಶೈಲಿಯಲ್ಲಿಯೂ ಕ್ರಮೇಣ ಸ್ವಾಭಾವಿಕ ಬದಲಾವಣೆಗಳು ಕಂಡುಬರುತ್ತವೆ. ಸ್ವಧರ್ಮವನ್ನು ಕೈಗೊಳ್ಳಲು ಮತ್ತಷ್ಟು ಶಕ್ತಿಯು ತುಂಬಿಕೊಂಡು, ಅರ್ಥವ್ಯಯವು ಹೆಚ್ಚು ಪ್ರಮಾಣದಲ್ಲಾಗದೆ, ಮನದಾಳದ ಆಸೆಗಳು ಪೂರ್ತಿಯಾಗಿ, ಜೀವನನೀತಿಗಳನ್ನು ಮನವರಿತು ಕೊನೆಗೆ ಹರಿಯನ್ನು ಪಡೆಯುವ ದಾರಿಯಲ್ಲಿ ಮುನ್ನಡೆಯುವೆವು.
ಇಂತಹ ವಿಸ್ಮಯವೇ ಆದ ಆಯುರ್ವೇದದ ಪಿತೃವಾದ ಧನ್ವಂತರಿಯ ಮಹಾತ್ಮೆಯು ಭಾರತೀಯ ಮಹಾಗ್ರಂಥಗಳಲ್ಲಿ ಅಗಣಿತವಾಗಿದೆ. ಸಮುದ್ರಮಥನ ಕಾಲದಲ್ಲಿ ಉದಿಸಿದ ಈ ದೇವನ ರೂಪವು ಅಪಾರ ಜ್ಞಾನಸಂಪತ್ತಿನಿಂದ ಭಕ್ತರ ಕಣ್ತೆರೆಯಿತು. ಹರಿಯ ಈ ಅವತಾರವು ಬಲಗೈಯಲ್ಲಿನ ಜ್ಞಾನಮುದ್ರೆಯಿಂದ, ಎಡದಲ್ಲಿನ ಅಮೃತಕಲಶದಿಂದ, ಇನ್ನಿತರ ಕೈಗಳಲ್ಲಿನ ಶಂಖಚಕ್ರ ಹಾಗೂ ಗಿಡಮೂಲಿಕಗಳೊಂದಿಗೆ ಶೋಭಾಯಮಾನವಾಗಿದೆ. ದಾಸವರೇಣ್ಯರು ಪಾಡಿ ಕೊಂಡಾಡಿದಂತೆ ವೈದ್ಯಮೂರ್ತಿಯಾದ ಈ ದೇವನ ಸಂಸ್ಮರಣೆಯಿಂದ ಆಯುಷ್ಯ, ಆರೋಗ್ಯ ಹಾಗೆ ಐಶ್ವರ್ಯದ ಭಾಗ್ಯವೂ ಒಲಿಯುವುದು. ಶ್ರೇಯಸ್ಸು ಅದನ್ನು ಹಿಂಬಾಲಿಸಿ ಬರುವುದು. ಅಷ್ಟೇ ಏಕೆ? ಧನ್ವಂತರಿಯೊರ್ವನೇ ದೇವ , ಯಾವುದೇ ವ್ಯಾಧಿಯನ್ನು ಪರಿಹರಿಸುವ ಸಾಮರ್ಥ್ಯವುಳ್ಳವನು.

ಆಯುರ್ವೇದವನ್ನು ಅವಲಂಬಿಸುವುದರಿಂದ ಸಾವಿರಾರು ರೋಗರುಜಿನಗಳು, ಅದರ ಜೊತೆ ಜೊತೆಯಲ್ಲಿ ಬರುವ ದುಃಖದುಮ್ಮಾನಗಳು ನಶಿಸುತ್ತವೆ. ಶ್ರದ್ಧಾಭಕ್ತಿಯಿಂದ ಧನ್ವಂತರಿಯ ಜಪ ಮಾಡುವುದರಿಂದ ವ್ಯಾಧಿಗಳು ದೂರ ಸರಿಯುತ್ತವೆ. ಅಷ್ಟು ಪವಿತ್ರವಾದುದು ನಮ್ಮ ಜ್ಞಾನನಿಧಿ. ದೇಶವಿದೇಶದವರು ಇಚ್ಛಾಪೂರ್ವಕವಾಗಿ ನಮ್ಮ ವಿದ್ಯಾವಿತ್ತವನ್ನು ಅಪಹರಿಸುತ್ತಿರುವರೆಂಬ ವಿಚಾರವೂ ನಮ್ಮ ಮನವನ್ನು ಕಲುಕದೇ ಇರುವುದೇ ವಿಪರ್ಯಾಸ. ಅಧ್ಯಯನ ವಿಮುಖರಾಗಿ,ನಮ್ಮ ಇತಿಹಾಸದ ಅರಿವು ಮಾಡಿಕೊಳ್ಳದೇ‌ ಅಡಿಗರ ಮಾತಿನಂತೆ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ” ಎಂಬಂತಾಗಿದೆ ನಮ್ಮ ಬದುಕು. ಇದರಿಂದಾಚೆ ಬರಬೇಕು. ನಮ್ಮಲ್ಲಿರುವ ಸತ್ವವನ್ನು ಅರಿತು, ನಮ್ಮ ಜೀವನದಲ್ಲಿ ಆ‌ ಸತ್ವವನ್ನು ಅಳವಡಿಸಿಕೊಂಡು, ಆರೋಗ್ಯವಂತರಾಗಿ ಬಾಳಿ ನಮ್ಮ ಲ್ಲಿರುವ ಉತ್ತಮ ಗುಣಗಳನ್ನು ಇಡೀ ಪ್ರಪಂಚಕ್ಕೆ ಹಂಚಬೇಕಿರುವುದು ಪ್ರಪಂಚದ ಒಳಿತಿನ ದೃಷ್ಟಿಯಿಂದ ಅನಿವಾರ್ಯವಾಗಿದೆ. ಆರೋಗ್ಯವನ್ನು ಭಾಗ್ಯವಾಗಿಸಿಕೊಳ್ಳುವ ಸಾಮರ್ಥ್ಯ ನಮ್ಮ ಆಯುರ್ವೇದದಲ್ಲಿದೆ. ತಾಳ್ಮೆಯಿಂದ ಅರಿತು, ರೂಢಿಸಿಕೊಂಡು ಬದಲಾವಣೆಯತ್ತ ಹೆಜ್ಜೆ ಹಾಕಿದಲ್ಲಿ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಅಳಿಲು ಸೇವೆಯ ಪ್ರಯತ್ನಗೈದ ಧನ್ಯತಾಭಾವ ನಮ್ಮದಾಗುವುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AnandakandaayurvedaKannada News WebsiteLatest News KannadaPurnapramathi SchoolPurnapramati Gurukulaಆಯುರ್ವೇದಕರ್ಮಭೂಮಿಭಗವದ್ಗೀತೆಸಾತ್ವಿಕ ಆಹಾರ
Previous Post

ಸರ್ಜರಿಗೆ ಅಮೆರಿಕಾಗೆ ತೆರಳುವ ಮುನ್ನ ಕಣ್ಣೀರು ಹಾಕಿ ಮಾತನಾಡಿದ ಶಿವಣ್ಣ ಹೇಳಿದ್ದೇನು?

Next Post

ಪ್ರೇಮಿಗಾಗಿ ಆತ್ಮಹತ್ಯೆಗೆ ಶರಣಾದ ಗೃಹಿಣಿ, ವಿಷಯ ತಿಳಿದು ಪ್ರಿಯತಮನೂ ನೇಣಿಗೆ ಶರಣು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಪ್ರೇಮಿಗಾಗಿ ಆತ್ಮಹತ್ಯೆಗೆ ಶರಣಾದ ಗೃಹಿಣಿ, ವಿಷಯ ತಿಳಿದು ಪ್ರಿಯತಮನೂ ನೇಣಿಗೆ ಶರಣು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸೆ.29-ಅ.30ರವರೆಗೂ ಬಳ್ಳಾರಿ-ದಾವಣಗೆರೆ, ಹೊಸಪೇಟೆ-ಹರಿಹರ ರೈಲುಗಳ ಬಿಗ್ ಅಪ್ಡೇಟ್

September 27, 2025

ತಾಯಿ ಹೃದಯ ಇಲ್ಲದವರು ಗುರುವಾಗಲು ಸಾಧ್ಯವಿಲ್ಲ: ರಾಮಚಂದ್ರಾಪುರ ಶ್ರೀ

September 27, 2025

ರವೀಂದ್ರ ನಗರದಲ್ಲಿ ವೃದ್ಧೆಯ ಸರ ಕಳ್ಳತನ | ಒಂದೇ ದಿನದಲ್ಲಿ ಆರೋಪಿ ಬಂಧನ | ಪತ್ತೆಯಾಯ್ತು 3 ಪ್ರಕರಣ

September 27, 2025

ಸೆ.29 | ಕನ್ನಡ ಸಾಹಿತ್ಯ ವೈಚಾರಿಕ ಪ್ರಜ್ಞೆ ವಿಚಾರ ಸಂಕಿರಣ

September 27, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸೆ.29-ಅ.30ರವರೆಗೂ ಬಳ್ಳಾರಿ-ದಾವಣಗೆರೆ, ಹೊಸಪೇಟೆ-ಹರಿಹರ ರೈಲುಗಳ ಬಿಗ್ ಅಪ್ಡೇಟ್

September 27, 2025

ತಾಯಿ ಹೃದಯ ಇಲ್ಲದವರು ಗುರುವಾಗಲು ಸಾಧ್ಯವಿಲ್ಲ: ರಾಮಚಂದ್ರಾಪುರ ಶ್ರೀ

September 27, 2025

ರವೀಂದ್ರ ನಗರದಲ್ಲಿ ವೃದ್ಧೆಯ ಸರ ಕಳ್ಳತನ | ಒಂದೇ ದಿನದಲ್ಲಿ ಆರೋಪಿ ಬಂಧನ | ಪತ್ತೆಯಾಯ್ತು 3 ಪ್ರಕರಣ

September 27, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!