ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-25 |

ಸೂರ್ಯವಂಶದವರ ನೆಲೆ ಅಯೋಧ್ಯ. ಶ್ರೀರಾಮದೇವರು ಅಯೋಧ್ಯೆಯಲ್ಲಿ ತ್ರೇತಾಯುಗದಲ್ಲಿ ಅವತರಿಸಿದರು, ರಾವಣನ ಸಂಹಾರ ನಂತರ ರಾಮದೇವರು 10,000 ವರ್ಷಗಳ ಕಾಲ ರಾಜ್ಯಭಾರವನ್ನು ಮಾಡಿದರು ಮತ್ತೆ ಪರಂಧಾಮಕ್ಕೆ ತೆರಳಿದರು. ರಾಮ ತನಯನಾದ ಕುಶರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದರು. ಹೀಗೆ ಸುಮಾರು 500 ರಿಂದ 600 ವರ್ಷಗಳಿಗೊಮ್ಮೆ ದೇವಸ್ಥಾನ ಪುನರ್ ನಿರ್ಮಾಣವಾಗುತ್ತಿತ್ತು.

ನಂತರ 1985 ಉಡುಪಿಯಲ್ಲಿ ಧರ್ಮ ಸಂಸತ್ ನಡೆಯಿತು ಅಲ್ಲಿಂದ ಅಯೋಧ್ಯಗೆ ಎಚ್ಚರಿಕೆಯನ್ನು ನೀಡಲಾಯಿತು. ಡಿಸೆಂಬರ್ ಆರನೇ ತಾರೀಕಿಗೆ ಬಾಗಿಲುಗಳನ್ನು ತೆಗೆಯಿರಿ ಇಲ್ಲವಾದಲ್ಲಿ ಘೋರ ಕದನ ನಡೆಸುತ್ತೇವೆ ಎಂದು ಎಲ್ಲೆಡೆ ಘೋಷಿಸಿದರು. ನಂತರ ಅಯೋಧ್ಯೆಯ ಮಸೀದಿಯ ಬಾಗಿಲನ್ನು ತೆರೆಯಲು ಸರ್ಕಾರವು ಆದೇಶಸಿತು. 1989 ಅಯೋಧ್ಯೆಯ ಮಸೀದಿಯ ಮುಂದೆ ಕಾಮೇಶ್ವರ್ ಚೌಪಾಲರಿಂದ ಶಿಲಾನ್ಯಾಸವು ನಡೆಯಿತು. ಆಗ ಮುಲಾಯಂ ಸಿಂಗ್ ಸರ್ಕಾರವಿತ್ತು. ಉತ್ತರ ಪ್ರದೇಶದ ಗಡಿಗಳಲ್ಲಿ ಕಂದಕಗಳನ್ನು ಕಟ್ಟಿದರು. ಹಾಗೆಯೇ ತಪ್ಪಿಸಿಕೊಂಡು ಎರಡುವರೆ ಲಕ್ಷ ಜನ ಸೇರಿದರು.

ಕೋಪದಿಂದ ಮುಲೈಮ್ ಸಿಂಗ್ ಗೋಳಿಬಾರ್ ಮಾಡಿಸಿದ. ಎಷ್ಟೋ ಜನರ ಬಲಿದಾನವಾಯಿತು. ಎರಡು ವರ್ಷಗಳ ನಂತರ 1992, ಡಿಸೆಂಬರ್ 6 ರಂದು ಜನರು ಸೇರಿ ಬಾಬರ್ ಮಸೀದಿಯನ್ನು ಒಡೆದು ಹಾಕಿದರು. ಆಗ ಕಲ್ಯಾಣ ಸಿಂಗ್ ರವರ ಸರ್ಕಾರವಿತ್ತು, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಮಸೀದಿಯ ನಿರ್ನಾಮವಾದ ನಂತರ ರಾಜಕೀಯದಿಂದ ಹೊರಗೆ ಬಂದರು. ಮಸೀದಿಯನ್ನು ಒಡೆದ ನಂತರ ಎಲ್ಲರೂ ಉತ್ಸಾಹದಿಂದ ಹೊರಟರು, ಆದರೆ ಪೇಜಾವರ ಮಠದ ವಿಶ್ವೇಶ ತೀರ್ಥರು ಹೊರಡಲಿಲ್ಲ. ಯಾಕೆಂದರೆ ಪೂಜೆಯು ನಡೆಯಬೇಕು ಎಂದು ಕೆರೆಸಿ ಪೂಜೆಯನ್ನು ಮಾಡಿಸಿ ಹೊರಟರು.

ದೊಡ್ಡ ಗುರುಗಳ ಕನಸಾದ, ಕೋಟ್ಯಾಂತರ ಹಿಂದೂಗಳ ಆರಾಧ್ಯ ದೈವ ರಾಮಮಂದಿರ ನಿರ್ಮಾಣದ ನಂತರ ಮುದ್ದು ಬಾಲರಾಮನ ಪ್ರತಿಷ್ಠಾಪನೆ ಪೂಜೆಗೆ ಸಾಕ್ಷಿಯಾಗಿ ನಿಂತವರು ನಮ್ಮ ಶ್ರೀ ವಿಶ್ವಪ್ರಸನ್ನ ತೀರ್ಥರು. ಬಾಲರಾಮನ ಪ್ರತಿಷ್ಠಾಪನೆಯಾದ ತಕ್ಷಣ, ಇಡೀ ಭೂಮಂಡಲದ ಕಣಕಣವು , ಮನೆ ಮನಗಳಲ್ಲವು ರಾಮಮಯವಾಗಿತ್ತು. ರಾಮನಾಮದ ಜಯಕಾರ ಮುಗಿಲು ಮುಟ್ಟುವಂತಿತ್ತು. ಮೈಮನವೆಲ್ಲ ರಾಮ ರಾಮ ರಾಮ ಎನ್ನುತ್ತಾ ಈ ಐತಿಹಾಸಿಕ ಕ್ಷಣಗಳಿಗೆ ನಾವೆಲ್ಲಾ ಸಾಕ್ಷಿಯಾಗಿರುವುದು ನಮ್ಮ ಪೂರ್ವಜನ್ಮದ ಸುಕೃತವೇ ಸರಿ.
2024 ಜನವರಿ 22,ರಂದು ಅಯೋಧ್ಯೆಯಲ್ಲಿ ನರೇಂದ್ರ ದಾಮೋದರ್ ದಾಸ್ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನವಾಯಿತು. ಹೀಗೆಯೇ ನಮ್ಮೆಲ್ಲರ ಮನದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಬೇಕು.
ಶ್ರೀ ಕೃಷ್ಣಾರ್ಪಣ ಮಸ್ತು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post