ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಬಳ್ಳಾರಿ ನಗರದಲ್ಲಿರುವ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಪೋಷಕರು ತಮ್ಮ ಮಕ್ಕಳ ದಾಖಲಾತಿಯನ್ನು ಬಯಸಿದ್ದಲ್ಲಿ ಕಾಲೇಜಿನ ಬಗ್ಗೆ ಕೆಲವು ಅಂಶಗಳನ್ನು ಪರಿಶೀಲಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಗೇಂದ್ರ ಅವರು ತಿಳಿಸಿದ್ದಾರೆ.
ಬಳ್ಳಾರಿ ನಗರದಲ್ಲಿ ಕೆಲವು ಖಾಸಗಿ ಪದವಿ ಪೂರ್ವ ಕಾಲೇಜುಗಳು ಇಲಾಖೆಯಿಂದ ಶೈಕ್ಷಣಿಕ ಮಾನ್ಯತೆಯನ್ನು ಪಡೆಯದೇ ದಾಖಲಾತಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗೂ ನಗರದಲ್ಲಿ ಜಾಹಿರಾತುಗಳ, ಪ್ಲೆಕ್ಸ್ಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳ ಫೋಟೋ ಸಹಿತ ಲಿಖಿತ ದೂರು ನೀಡಿದ್ದಾರೆ.
ಪರಿಶೀಲಿಸಬೇಕಾದ ಅಂಶಗಳು:
ನಗರದಲ್ಲಿನ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು, ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಶೈಕ್ಷಣಿಕ ಮಾನ್ಯತೆಯನ್ನು ಪಡೆದಿರುತ್ತಾರೆಯೇ ಎಂಬುದರ ಕುರಿತು ಆದೇಶ ಪ್ರತಿಯನ್ನು ಪರಿಶೀಲಿಸಬೇಕು. ಈಗಾಗಲೇ ನಡೆಸುತ್ತಿರುವ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜಾಗಿದ್ದಲ್ಲಿ ಮಾನ್ಯತೆ ನವೀಕರಣಕ್ಕಾಗಿ ರೂ. 12ಸಾವಿರ ಮೊತ್ತವನ್ನು ಕೆ-2 ಚಲನ್ನಲ್ಲಿ ಮೊತ್ತವನ್ನು 2021-22 ಮತ್ತು 2022-23ನೇ ಸಾಲಿನಲ್ಲಿ ಕಟ್ಟಿರುತ್ತಾರೆಯೇ ಎಂಬುದರ ಕುರಿತು ಕೆ-2 ಪ್ರತಿಯನ್ನು ಪರಿಶೀಲಿಸುವುದು. ಈಗಾಗಲೇ ನಡೆಯುತ್ತಿರುವ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜು ಆಗಿದ್ದಲ್ಲಿ ಮಾನ್ಯತೆ ನವೀಕರಣದ ಮೊತ್ತ ಯಾವ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜಿನ ಹೆಸರಿನಲ್ಲಿ ಕಟ್ಟಿದ್ದಾರೆ? ಎಂದು ಪರಿಶೀಲಿಸುವುದು.
ನಗರದಲ್ಲಿ ಮಾನ್ಯತೇ ಪಡೆಯದೇ ಇರುವ ಕಾಲೇಜುಗಳು: ವಿಜಯವಾಡ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜು, ಸರ್.ಎಂ.ವಿ.ಪದವಿ ಪೂರ್ವ ಕಾಲೇಜು, ಶ್ರೀ ಆಚಾರ್ಯ ಪದವಿ ಪೂರ್ವ ಕಾಲೇಜು, ಈ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಶೈಕ್ಷಣಿಕ ಮಾನ್ಯತೆಯನ್ನು ಪಡೆದಿರುವುದಿಲ್ಲ. ಪೋಷಕರು ಈ ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿಯನ್ನು ಮಾಡುವಾಗ ಎಚ್ಚರವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post