ಕಲ್ಪ ಮೀಡಿಯಾ ಹೌಸ್ | ಸಿರುಗುಪ್ಪ |
ತಾಲೂಕಿನ ಮಿಟ್ಟೆಸೂಗೂರು ಗ್ರಾಮದ ಅಧಿದೇವತೆ ಶ್ರೀ ಮಾರಿಕಾಂಭೆಯ ದೇವಸ್ಥಾನದಲ್ಲಿ ರಥೋತ್ಸವ ಹಾಗೂ ವಿಜಯದಶಮಿಯ #Vijayadashami ಅಂಗವಾಗಿ ವಿವಿಧ ಫಲಪುಷ್ಪ, ಆಭರಣಗಳು ಹಾಗೂ ವೀಳ್ಯದೆಲೆಗಳಿಂದ ಸಿಂಗರಿಸಿ ಮಹಾಮಂಗಳಾರತಿ ಮಾಡಲಾಯಿತು.
ಸಾಲಾಗಿ ನಿಂತು ಮಹಿಳೆಯರು ರಥದ ಹಗ್ಗವನ್ನು ಎಳೆಯುವುದರೊಂದಿಗೆ ರಥೋತ್ಸವ ಅದ್ದೂರಿಯಾಗಿ ಜರುಗಿತು. ಈ ರಥೋತ್ಸವದಲ್ಲಿ ಮಹಿಳೆಯರೇ ತೇರನ್ನು ಎಳೆಯುತ್ತಿರುವುದು ಇಲ್ಲಿನ ವಿಶೇಷವಾಗಿದೆ.

ಗ್ರಾಮದಲ್ಲಿ ವಿಜೃಂಭಣೆಯಿಂದ ರಥೋತ್ಸವದಲ್ಲಿ ಭಾಗವಹಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಪರಸ್ಪರ ಬನ್ನಿ ಹಂಚಿಕೊಂಡು ಸಂಭ್ರಮಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post