ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಮಂತ್ರಿಯವರನ್ನು ಅವಹೇಳನಕಾರಿಯಾಗಿ ಬಿಂಬಿಸುವ ರೀತಿಯಲ್ಲಿ ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡು ಸುಳ್ಳು ಸುದ್ದಿ ಹರಡಿರುವ ಬಿಂದು ಸಿರ ಅವರ ವಿರುದ್ಧ ಕಟ್ಟುನಿಟ್ಟಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಕೀಲ ಸುರೇಶ್ ಬಾಬು ಜಯನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣವಾದಲ್ಲಿ ಬಿಂದು ಸಿರ ಎಂಬ ವ್ಯಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಅಶ್ಲೀಲ ಹಾಗೂ ವಿಕೃತವಾಗಿ ಕಾಣುವಂತೆ ಚಿತ್ರಿಸಿ ಅವರ ವಿರುದ್ಧ ಸುಳ್ಳು ಸುದ್ದಿಯನ್ನು ಹರಡಿದ್ದು, ದೇಶದ ಪ್ರಧಾನ ಮಂತ್ರಿಗಳನ್ನು ಅತ್ಯಂತ ಅವಹೇಳನಕಾರಿಯಾಗಿ ಬಿಂಬಿಸಿರುತ್ತಾರೆ. ಅಲ್ಲದೇ ಸುಳ್ಳು ಸುದ್ದಿಯನ್ನು ಬಳಸಿ ಸಾರ್ವಜನಿಕರಲ್ಲಿ ಗೊಂದಲ ಮತ್ತು ದ್ವೇಷದ ಭಾವನೆಯನ್ನು ಮೂಡಿಸಲು ಪ್ರಯತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ನೆಲದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದನ್ನು ಪ್ರಶ್ನಿಸುವ ವಿಶ್ಲೇಸಿಸುವ ಮತ್ತು ವಿಮರ್ಶಾತ್ಮಕವಾಗಿ ಟೀಕೆಗೆ ಒಳಪಡಿಸುವ ಹಕ್ಕನ್ನು ಭಾರತ ಸಂವಿಧಾನವು ನೀಡಿದೆ. ಆದರೆ ಅಂತಹ ಟೀಕೆ ಟಿಪ್ಪಣಿಗಳು ಮತ್ತೊಬ್ಬರ ಮಾನ ಮರ್ಯಾದೆ ಮತ್ತು ಗೌರವಕ್ಕೆ ಧಕ್ಕೆ ಉಂಟುಮಾಡಬಾರದು. ಟೀಕೆ ಮಾಡುವ ಬರದಲ್ಲಿ ದೇಶದ ಪ್ರಧಾನ ಮಂತ್ರಿ ಅವರನ್ನು ಈ ರೀತಿ ಅಶ್ಲೀಲ ಮತ್ತು ಅವೇಳನಕಾರಿಯಾಗಿ ಚಿತ್ರಿಸುವುದು ಈ ದೇಶದ ಸಂವಿಧಾನದಲ್ಲಿ ನಂಬಿಕೆ ಇಟ್ಟ ಪ್ರತಿಯೊಬ್ಬ ಭಾರತೀಯನಿಗೂ ನೋವು ಮಾಡಿದೆ ಉನ್ನತ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಪ್ರಧಾನಮಂತ್ರಿಯವರಿಗೆ ಮಾಡಿದ ಅವಮಾನ ಈ ದೇಶದ ಜನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಮತ್ತು ಜನರ ಭಾವನೆಗಳ ಮೇಲೆ ನೋವು ಉಂಟು ಮಾಡಿರುತ್ತದೆ. ಈ ವಿಚಾರವು ಉದ್ದೇಶ ಪೂರ್ವಕವಾಗಿ ಸುಳ್ಳು ಸುದ್ಧಿಯನ್ನು ಸೃಷ್ಠಿಮಾಡಲೆಂದು, ದ್ವೇಶಭಾವನೆ ಬಿತ್ತಲೇಂದು, ಹಾಗೂ ದೇಶದ ಪ್ರಧಾನಿಗಳಿಗೆ ಅವಮಾನ ಮಾಡಲೇಂದೇ ಈ ಕೃತ್ಯಮಾಡಿರುತ್ತಾರೆ, ಆದ್ದರಿಂದ ಬಿಂದು ಸಿರ ಅವರ ವಿರುದ್ಧ ಕಟ್ಟುನಿಟ್ಟಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















