ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಅವರು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರನ್ನು ಭೇಟಿ ಮಾಡಿ ಗಾಂಧಿ ಕಥನ ಪುಸ್ತಕವನ್ನು ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರೈತರ ಆಶಾಕಿರಣವಾದ ಯಶಸ್ವಿನಿ ಯೋಜನೆಯಿಂದ ಸಾಕಷ್ಟು ಬಡ ರೈತರಿಗೆ ಅನುಕೂಲವಾಗಿತ್ತು. ಆದ್ದರಿಂದ ಯಶಸ್ವಿನಿ ಯೋಜನೆಯನ್ನು ಮುಂದುವರಿಸವಂತೆ ಮನವಿ ಮಡಲಾಯಿತು.
ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ನದಿಯಿಂದ 12.5ಟಿಎಮ್ಸಿ, ತುಂಗಾ ನದಿಯಿಂದ 17.4ಟಿಎಮ್ಸಿ ನೀರೆತ್ತಿ ಕೊಡಲು ಡಿಪಿಆರ್ ಆಗಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಭದ್ರಾ ಅಣೆಕಟ್ಟು ನಿರ್ಮಾಣವಾಗಿ 58 ವರ್ಷಗಳಲ್ಲಿ ಕೇವಲ 23 ಬಾರಿ ತುಂಬಿದೆ. ಬರಗಾಲದ ಬೇಸಿಗೆಯ ವರ್ಷಗಳಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಜನ-ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲದೆ ತೋಟಗಳು ಸಹ ಒಣಗಿ ಹೋಗಿ ಬೆಳೆದು ನಿಂತ ಮರಗಳನ್ನು ಕಡಿಯುವಂತ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಆದ್ದರಿಂದ ಭದ್ರಾ ನದಿಯಿಂದ 12.5ಟಿಎಮ್ಸಿ ನೀರೆತ್ತುವ ಬದಲಾಗಿ, ತುಂಗಾ ನದಿಯಿಂದಲೇ ಸಂಪೂರ್ಣ 29.9ಟಿಎಮ್ಸಿ ನೀರೆತ್ತಲು ಹೊಸದಾಗಿ ಡಿಪಿಆರ್ ಮಾಡಿ ಆದೇಶ ಹೊರಡಿಸಬೇಕಾಗಿ ಕೋರಲಾಯಿತು.
ಜೊತೆಗೆ ರೈತರಿಗೆ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಆಗದೆ ತಿಂಗಳುಗಟ್ಟಲೇ ಅಲೆದಾಡುವತಾಂಗಿದೆ. ಹಾಗೂ ರೈತರ ಇನ್ನೂ ಅನೇಕ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post