ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಜಯನಗರದ ಆಶ್ರಯ ಹಸ್ತ ಚಾರಿಟಬಲ್ ಟ್ರಸ್ಟ್ನ ಸದಸ್ಯರಾದ ನೇತ್ರ, ಭರತ್, ಶಶಾಂಕ್ ನೇತೃತ್ವದಲ್ಲಿ ನಗರದ ಬನಶಂಕರಿ 3ನೇ ಹಂತದ ಇಟ್ಟಮಡುವಿನಲ್ಲಿ ಅನ್ನದಾನ ಮಾಡಲಾಯಿತು.
ಕೊರೋನಾದಿಂದಾಗಿ ಸಮಾಜದ ಬಹುತೇಕರು ಕಷ್ಟದಲ್ಲಿದ್ದು, ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದು, ಸತತ 30 ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಆಶ್ರಯ ಹಸ್ತ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಅನೇಕ ಭಾಗಗಳಲ್ಲಿ ಅನ್ನದಾನ ಮಾಡುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೂಡಗಿಸಿಕೊಂಡಿದ್ದಾರೆ.
ಹಸಿದವರ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ ಯಾವುದೇ ರೀತಿಯ ಪ್ರಚಾರ ಬಯಸದೇ ತನ್ನ ಕಾರ್ಯ ನಡೆಸುತ್ತಾ ಇರುವುದು ಈ ಸಂಸ್ಥೆಯ ಹೆಗ್ಗಳಿಕೆ.

ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















