ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ ಸಿ. ಎಸ್. ಷಡಕ್ಷರಿ #C S Shadakshari ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಿ ಎಸ್. ಷಡಕ್ಷರಿ (507 ಮತಗಳು ) ಹತ್ತಿರದ ಪ್ರತಿಸ್ಪರ್ಧಿ ಕೃಷ್ಣ ಗೌಡ (442 ಮತಗಳು )ರವರಿಗಿಂತ 65 ಹೆಚ್ಚಿನ ಮತದ ಅಂತರದಿಂದ ಗೆಲುವು ಸಾಧಿಸಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಜಿ ಸ್ಥಾನದ ಚುನಾವಣೆಯಲ್ಲಿ ಶಿವರುದ್ರಯ್ಯ ವಿ. ವಿ. (485 ಮತಗಳು ) ರವರು ಹತ್ತಿರದ ಪ್ರತಿಸ್ಪರ್ಧಿ ನಾಗರಾಜ ಆರ್ ಜುಮ್ಮನವರ್ (467 ಪಡೆದ ಮತಗಳು ) ರವರಿಗಿಂತ 18 ಮತಗಳ ಅಂತರದಿಂದ ಶಿವರುದ್ರಯ್ಯ ವಿ. ವಿ. ಗೆದ್ದು ಬೀಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಿ ಎಸ್. ಷಡಕ್ಷರಿ ಹಾಗೂ ಖಜಾಂಜಿಯಾಗಿ ಆಯ್ಕೆಯಾದ ಶಿವರುದ್ರಯ್ಯ ರವರಿಗೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರು ಹಾಗೂ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post