ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಪಠ್ಯಪುಸ್ತಕಗಳಲ್ಲಿ ಟಿಪ್ಪು ಸುಲ್ತಾನನ Tippu Sulthan ವೈಭವೀಕರಣಕ್ಕೆ ಕತ್ತರಿ ಹಾಕಲು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದು, ಟಿಪ್ಪುವಿನ ವೈಭವೀಕರಣಕ್ಕೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
1-10ನೆಯ ತರಗತಿವರೆಗಿನ ಕನ್ನಡ ಭಾಷಾ ವಿಷಯಗಳ 15 ಪಠ್ಯಗಳು ಹಾಗೂ ಸಮಾಜ ವಿಜ್ಞಾನದ 7 ಮಾಧ್ಯಮಗಳ ಪಠ್ಯಗಳು ಪರಿಷ್ಕರಣೆ ಪರಿಷ್ಕರಣೆ ನಡೆದಿದೆ. 2 ಮತ್ತು 4ನೆಯ ತರಗತಿಗಳ ಪರಿಸರ ಅಧ್ಯಯನ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ಸಮಿತಿ ವರದಿ ಸಲ್ಲಿಕೆ ಮಾಡಿದೆ.
2022-23 ನೆಯ ಸಾಲಿನಿಂದ ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕ ಅಳವಡಿಕೆಗೆ ಸರ್ಕಾರ ನಿರ್ಧಾರ ಮಾಡಿದೆ. ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕೆಲ ಇತಿಹಾಸ ತಿರುಚಲಾಗಿದೆ ಅಂತ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ಕುರಿತ ತಿರುಚಿದ ಇತಿಹಾಸ ಕೈ ಬಿಡುವಂತೆ ಶಾಸಕ ಅಪ್ಪಚ್ಚು ರಂಜನ್ ಒತ್ತಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ವರ್ಣರಂಜಿತ, ಮತ್ತು ವೈಭವೀಕರಣದ ಅಂಶಗಳನ್ನು ಕೈಬಿಟ್ಟು ನೂತನ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.
ಪರಿಷ್ಕರಣೆ ಪಠ್ಯದಲ್ಲೇನಿದೆ?
ಟಿಪ್ಪು ಸುಲ್ತಾನ್ ಪಠ್ಯ ಕೈ ಬಿಟ್ಟಿಲ್ಲ. ರಾಜನಾಗಿ ಟಿಪ್ಪುವಿನ ಇತಿಹಾಸ ಪಠ್ಯದಲ್ಲಿ ಮುಂದುವರಿಕೆ ಮಾಡಲಾಗಿದೆ. ಆದರೆ ಟಿಪ್ಪುವಿನ ಬಗ್ಗೆ ಹೆಚ್ಚು ವೈಭವದ ಮಾಹಿತಿಗೆ ಕತ್ತರಿ. ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯದಲ್ಲಿ ಹೆಚ್ಚು ವೈಭವೀಕರಿಸಲಾಗಿತ್ತು. ಇದಕ್ಕೆ ರೋಹಿತ್ ಚಕ್ರತೀರ್ಥ ಸಮಿತಿಯಿಂದ ಬ್ರೇಕ್ ಹಾಕಲಾಗಿದೆ.
Also read: ಮಾ.27ರಂದು ನಾ ಕಂಡ ಪೌರಾಯುಕ್ತರು ಅಭಿನಂದನಾ ಕೃತಿ ಬಿಡುಗಡೆ
- ಹಿಂದೂ ಭಾವನೆಗೆ ಧಕ್ಕೆ ತರುವ ಕೆಲವು ಅಂಶಗಳ ಪಠ್ಯವನ್ನು ಪರಿಷ್ಕರಣೆ ಮಾಡಲಾಗಿದೆ.
- ಈಶಾನ್ಯ ಭಾರತದಲ್ಲಿ 600 ವರ್ಷ ಆಳಿದ ಅಹೋಮ್ ಸಾಮ್ರಾಜ್ಯ ಮತ್ತು ಕಾಶ್ಮೀರ ಕಣಿವೆಯನ್ನು ೩೦೦ ವರ್ಷ ಆಳಿದ ಕಾರ್ಕೋಟ ವಂಶದ ರಾಜರ ಬಗ್ಗೆ ಪಠ್ಯದಲ್ಲಿ ಅಳವಡಿಕೆ ಶಿಫಾರಸು.
- ಬಾಬಾ ಬುಡನ್ ಗಿರಿ ಕುರಿತಾದ ಇತಿಹಾಸಗಳು ಹಾಗೂ ಬಾಬಾ ಬುಡನ್ ಗಿರಿ ಹೆಸರು ಬದಲಿಗೆ ದತ್ತಪೀಠ ಹೆಸರು ಸೇರ್ಪಡೆಗೆ ಸಮಿತಿಯಿಂದ ಶಿಫಾರಸು.
- ವೈದಿಕ ಧರ್ಮದ ಲೋಪಗಳಿಂದಾಗಿ ಅನೇಕ ಹೊಸ ಧರ್ಮಗಳು ಉದಯವಾಯಿತು ಎಂಬ ಪಠ್ಯದ ಲೋಪವನ್ನು ಸಮಿತಿ ಸರಿಪಡಿಸಿದೆ.
- ಹಿಂದೆ ಯಾಗ-ಯಜ್ಞಗಳನ್ನು ನಡೆಸುವಾಗ ಕೃಷಿಗೆ ಉಪಯೋಗ ಮಾಡುತ್ತಿದ್ದ ಪ್ರಾಣಿಗಳನ್ನು ಬಲಿಕೊಡಲಾಗುತ್ತಿತ್ತು ಎಂದ ಅಂಶ ಪರಿಷ್ಕರಣೆ ಮಾಡಲಾಗಿದೆ. ದವಸ ಧಾನ್ಯಗಳನ್ನು ಯಜ್ಞ ಕುಂಡದಲ್ಲಿ ಸುಡುತ್ತಿದ್ದರು. ಇದರಿಂದ ಆಹಾರದ ಅಭಾವ ಆಗಿತ್ತು ಎಂಬ ಅಂಶವನ್ನು ಪರಿಷ್ಕರಿಸಲಾಗಿದೆ.
ಶಿಕ್ಷಣ ಸಚಿವರು ಹೇಳಿದ್ದೇನು?
ಟಿಪ್ಪು ವಿಚಾರವನ್ನು ಪಠ್ಯದಿಂದ ಕೈ ಬಿಡುವ ಸುದ್ದಿ ಸತ್ಯಕ್ಕೆ ದೂರವಾದುದ್ದು, ಒಂದಷ್ಟು ಇತಿಹಾಸದಲ್ಲಿನ ವಿಚಾರಗಳು ಪಠ್ಯ ಪುಸ್ತಕದಿಂದ ಕಡಗಣನೆಯಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಅದನ್ನು ಪರಿಚಯಿಸಲು ಮಾಡಲು ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post