ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶವನ್ನು ಮುನ್ನಡೆಸುವ ಹಾಗೂ ನಿಮ್ಮ ಕ್ಷೇತ್ರವನ್ನು ಮುಂದಿನ ಐದು ವರ್ಷ ಪ್ರತಿನಿಧಿಸುವ ನಾಯಕನನ್ನು ಆರಿಸಿಕೊಳ್ಳುವ ಅವಕಾಶವನ್ನು ತಪ್ಪಿಸಿಕೊಳ್ಳದೇ, ಮತಕೇಂದ್ರಕ್ಕೆ ಬಂದು ಮತದಾನ ಮಾಡಿ ಎಂದು ನಟ ಅನಿರುದ್ ಜತ್ಕರ್ #Anirudh Jathkar ಕರೆ ನೀಡಿದರು.
ಜೆಪಿ ನಗರ 2ನೇ ಹಂತದ 172ನೇ ಮತಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿ, ಕಲ್ಪ ನ್ಯೂಸ್’ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ನಿಮ್ಮನ್ನು, ನಿಮ್ಮ ಕ್ಷೇತ್ರವನ್ನು ಹಾಗೂ ನಿಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮುಂದಿನ ಐದು ವರ್ಷ ಪ್ರತಿನಿಧಿಸುವ ನಾಯಕಯನ್ನು ಆಯ್ಕೆ ಮಾಡಿಕೊಳ್ಳುವ ಸುವರ್ಣಾವಕಾಶ ಇದಾಗಿದೆ. ಸಂಜೆಯವರೆಗೂ ಮತದಾನಕ್ಕೆ ಅವಕಾಶವಿದ್ದು, ಮನೆಯಲ್ಲಿ ಕುಳಿತುಕೊಳ್ಳದೇ ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಿ ಎಂದು ಕರೆ ನೀಡಿದರು.
Also read: ಮತದಾನಕ್ಕೆ ಆಗಮಿಸಿದ್ದ ಮಹಿಳೆಗೆ ಹೃದಯಾಘಾತ | ವೈದ್ಯರ ಸಮಯಪ್ರಜ್ಞೆಯಿಂದ ಉಳಿಯಿತು ಜೀವ
ಅನಿರುದ್ ಜತ್ಕರ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಜೆಪಿ ನಗರ 2ನೇ ಹಂತದ ಬೂತ್ ಸಂಖ್ಯೆ 172ರಲ್ಲಿ ಮತದಾನ ಮಾಡಿದರು.
ನಟಿ ಭಾರತಿ ವಿಷ್ಣುವರ್ಧನ್ ಮತದಾನ
ಜಯನಗರ 4ನೇ `ಟಿ’ ಬ್ಲಾಕ್ ನಿವಾಸಿಯಾಗಿರುವ ದಿ.ನಟ. ಡಾ. ವಿಷ್ಣುವರ್ಧನ್ #Vishnuvardhan ಅವರ ಪತ್ನಿ ಭಾರತಿ ವಿಷ್ಣುವರ್ಧನ್ #Bharathi Vishnuvardhan ಅವರು ತಮ್ಮ ಬಡಾವಣೆಯ ಬೂತ್ ಸಂಖ್ಯೆ 50ರಲ್ಲಿ ಮತದಾನ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬವಾಗಿರುವ ಚುನಾವಣೆಯಲ್ಲಿ ಅರ್ಹ ಪ್ರತಿಯೊಬ್ಬರೂ ಪಾಲ್ಗೊಂಡು ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post