ಕಲ್ಪ ಮೀಡಿಯಾ ಹೌಸ್ | ಬೀದರ್ |
ಸಂವಿಧಾನದ ಆಶಯಗಳನ್ನು ಈಡೇರಿಸುತ್ತಾ, ಡಾ. ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪಾಲಿಸುವ ಮೂಲಕ ನಿಜವಾದ ಗೌರವ ಸಲ್ಲಿಸೋಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕರೆ ನೀಡಿದರು.
ಅವರು ಇಂದು ಬೀದರ್ ನಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು ತುಳಿತಕ್ಕೆ ಒಳಗಾದ ಜನಾಂಗವನ್ನು ಮುಖ್ಯ ವಾಹಿನಿಗೆ ತಂದವರು. ಅಸ್ಪೃಶ್ಯತೆ ದೂರ ಮಾಡಿ ದೀನದಲಿತರಿಗೆ ಅವಕಾಶಗಳನ್ನು ಕೊಟ್ಟು ಮಾನವೀಯ ದೃಷ್ಟಿಯಿಂದ ಕಂಡವರು. ಅವರ ಭಾರತಕ್ಕೆ ನೀಡಿದ ಸಂವಿಧಾನ ಸರ್ವ ಶ್ರೇಷ್ಠ ವಾದದ್ದು. ಎಲ್ಲ ಕಾಲಗಳಿಗೂ, ಎಲ್ಲ ಸಮಸ್ಯೆ ಗಳಿಗೆ ಪರಿಹಾರ ಒದಗಿಸುವ ಸಂವಿಧಾನವಾಗಿದೆ. ವಿಶ್ವದ ಎಲ್ಲಾ ಸಂವಿಧಾನಗಳಿಗೆ ಹೋಲಿಸಿದಾಗ ಭಾರತ ಸಂವಿಧಾನದಷ್ಟು ಶ್ರೇಷ್ಠ ಹಾಗೂ ಬೃಹತ್ ಸಂವಿಧಾನ ಮತ್ತೊಂದಿಲ್ಲ.
130 ಕೋಟಿ ಭಾರತೀಯರು ಡಾ: ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಚಿರಋಣಿಯಾಗಿರಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post