ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ನಗರದ ಬಸವನಗುಡಿಯಲ್ಲಿರುವ ಐತಿಹಾಸಿಕ ದೊಡ್ಡ ಗಣಪತಿ ದೇವಾಲಯದಲ್ಲಿ ಸೆ.21ರಂದು ಮಂಗಳವಾರ ಸಂಜೆ 6 ಗಂಟೆಗೆ ಗಣಪತಿಗೆ 108 ಬಗೆಯ ನೈವೇದ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿನಗಳಿಂದಲೂ ಮತ್ತು ಪ್ರಾಕೃತಿಕ ಸಂಕಷ್ಟಗಳಿಂದ ಸಂಕಟವನ್ನು ಅನುಭವಿಸುತ್ತಿರುವ ಜನರಿಗೂ ಹಾಗೂ ಸಮಾಜಕ್ಕೆ ಸಕಲ ರೀತಿಯಲ್ಲೂ ಒಳಿತಾಗಲಿ ಎಂದು ವಿಘ್ನ ವಿನಾಶಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಆಸಕ್ತರು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದೆಂದು ಕೃ.ವೆಂ. ರಾಮಚಂದ್ರ ಮನವಿ ಮಾಡಿದ್ದಾರೆ.
108 ಸಂಖ್ಯೆಯಲ್ಲಿ ನೈವೇದ್ಯ:
108×108=11664 ಅಂದರೆ ಮೋದಕ ಪ್ರಿಯ ಗಣಪತಿಗೆ 108 ಬಗೆಯ ವೈವಿದ್ಯಮಯ ತಿನಿಸುಗಳನ್ನು, ಒಂದೊಂದು ಬಗೆಯ 108 ಸಂಖ್ಯೆಯಲ್ಲಿ ನೈವೇದ್ಯ ಮಾಡುವ ಮೂಲಕ ಅತ್ಯಂತ ವಿಶೇಷವಾಗಿ ಭಕ್ತಿಯಿಂದ ಪೂಜಿಸುವ ಕಾರ್ಯಕ್ರಮ ಇದಾಗಿದೆ.
ಪ್ರಸಾದ ರೂಪದಲ್ಲಿ ವಿತರಣೆ:
ಭಗವಂತನಿಗೆ ನೈವೇದ್ಯವನ್ನು ಅರ್ಪಿಸಿದ ನಂತರ ತಿನಿಸುಗಳನ್ನು ದೇವಾಲಯಕ್ಕೆ ಬಂದ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗೆ ಮೊ: 9342921229ಗೆ ಸಂಪರ್ಕಿಸಬಹುದು
ಪೂರಕ ಮಾಹಿತಿ : ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post