ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡದ ತಿಂಡಿ ಕೇಂದ್ರ, ಚಾಮರಾಜಪೇಟೆ ಸಾಂಸ್ಕೃತಿಕ ಕೇಂದ್ರ ಮತ್ತು ಚಾಮರಾಜಪೇಟೆ ವಿಪ್ರ ಸಭಾ ಇವರ ಸಹಯೋಗದಲ್ಲಿ ಬಸವ ಜಯಂತಿಯ ಪ್ರಯುಕ್ತ ಮೇ 3ರ ಮಂಗಳವಾರ “ಪೌರಕಾರ್ಮಿಕರೊಂದಿಗೆ ಒಂದು ಬೆಳಗು” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಸ್ವಚ್ಛತೆ ಕಾಪಾಡಲು ಪ್ರತಿನಿತ್ಯ ಹಗಲಿರುಳು ಶ್ರಮಿಸುವ 50 ರಿಂದ 80 ಜನ ಪೌರಕಾರ್ಮಿಕರೊಂದಿಗೆ ಬೆಳಗ್ಗೆ 10.30ಕ್ಕೆ ಚಾಮರಾಜಪೇಟೆಯ ಕನ್ನಡದ ತಿಂಡಿ ಕೇಂದ್ರದಲ್ಲಿ ಚಹಾ ಕೂಟ ಮತ್ತು ಲಘು ಉಪಹಾರ ಏರ್ಪಡಿಸಲಾಗಿದೆ .
ಅಕ್ಷಯ ತೃತೀಯಾದಂದು ಮಾನವ ಪ್ರೀತಿ, ಅನ್ನ ಅಕ್ಷಯವಾಗಬೇಕೇ ಹೊರತು ಚಿನ್ನವಲ್ಲ ಬನ್ನಿ ಅಕ್ಷಯ ತೃತೀಯಾ ಆಚರಿಸೋಣ ಎಂದು ಕನ್ನಡದ ತಿಂಡಿ ಕೇಂದ್ರದ ಡಾ. ಕೃ. ವೆಂ. ರಾಮಚಂದ್ರ ಕರೆ ನೀಡಿದ್ದಾರೆ.
Also read: ಕಾರ್ಮಿಕರೇ ಪ್ರತಿ ಕಾರ್ಖಾನೆಯ ಆಸ್ತಿ: ಶಂಕರ್ ಶೇಟ್ ಅಭಿಮತ
ಬಿಬಿಎಂಪಿ ಆಡಳಿತಾಧಿಕಾರಿಗಳ ಸಂಪರ್ಕಾಧಿಕಾರಿ ಎಸ್. ಎನ್. ಶಂಕರ್, ಸಮಾಜ ಸೇವಕ ವಿನಾಯಕ, ಹಿರಿಯ ಪತ್ರಕರ್ತ ನ ಸುಧೀಂದ್ರ ರಾವ್, ಕೆ. ವಿ. ಸತ್ಯನಾರಾಯಣ, ನಿವೃತ್ತ ಶಿಕ್ಷಕರು ಗಿರಿಜಾಂಬ, ಕಲ್ಗುಂಡಿ ನವೀನ್, ಲೇಖಕ ಡಾ. ಮುರಳೀಧರ, ಕೆ ವಿ ಅಶ್ವತ್ಥನಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post