ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಯೋಧ್ಯೆ ಮನುಕುಲದ ರಾಜಧಾನಿ. ಮನುಕುಲಕ್ಕೆ ನಾಗರಿಕತೆಯ ಸಂಸ್ಕೃತಿಯನ್ನು ತನ್ನ ಆದರ್ಶ ಜೀವನದ ಮೂಲಕ ತೋರಿಸಿ ಕೊಟ್ಟವನೇ ಶ್ರೀರಾಮ ಎಂದು ಉಡುಪಿ ಭಂಡಾರಕೇರಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಅಯೋಧ್ಯೆ ಉತ್ಸವದ ಅಂಗವಾಗಿ ಭಾಗವತ ಆಶ್ರಮದಲ್ಲಿ ಸೋಮವಾರ ಶ್ರೀ ಮಠ ಹಮ್ಮಿಕೊಂಡಿದ್ದ ಪ್ರವಚನ ಸರಣಿ, ಭಜನೆ, ಪಲ್ಲಕ್ಕಿ ಉತ್ಸವ ಮತ್ತು ರಂಗ ದೀಪೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ರಾಮನ ವೈಭೋಗವನ್ನು ಎಲ್ಲರೂ ಅಯೋಧ್ಯೆಗೆ ಪ್ರತ್ಯಕ್ಷವಾಗಿ ನೋಡಲು ಆಗಿಲ್ಲ. ಆದರೂ ಪರೋಕ್ಷವಾಗಿ ವಿವಿಧ ವಾಹಿನಿಯಲ್ಲಿ ಕಂಡು ಸಂಭ್ರಮಿಸಿದ್ದೇವೆ. ನಮ್ಮ ನಮ್ಮ ಮನೆ, ಮಂದಿರ, ಗುಡಿ, ಮಠದಲ್ಲಿ ಉತ್ಸವ ನಡೆಸಿ ರಾಮನಿಗೆ ಭಕ್ತಿ ಸಮರ್ಪಣೆ ಮಾಡಿದ್ದೇವೆ. ಇದು ಮಹೋನ್ನತ ಭಾಗ್ಯ ಎಂದರು.

ನಾವು 82ರಲ್ಲಿ ಕರ ಸೇವೆಗೆ ಅಯೋಧ್ಯೆಗೆ ಹೋಗಿದ್ದೆವು. ಆಗ ಶಾಸಕರಾಗಿದ್ದ ವಿ.ಎಸ್. ಆಚಾರ್ಯ, ಪೇಜಾವರ ಶ್ರೀ ವಿಶ್ವೇಶ ತೀರ್ಥರು ನೇತೃತ್ವ ವಹಿಸಿದ್ದರು ಎಂದು ಶ್ರೀ ಗಳು ಸ್ಮರಿಸಿದರು.
ಸಂಜೆ ಪಂಡಿತ ಮಳಗಿ ಆನಂದ ತೀರ್ಥಾಚಾರ್ಯರಿಂದ ಪ್ರವಚನ, ದಾಸರ ಕೃತಿ ಗಾಯನ, ಶ್ರೀ ವಿದ್ಯೇಶ ವಿಠಲಾಂಕಿತ ಕೃತಿ ಸಾಮೂಹಿಕ ಗಾಯನ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿ, ಪ್ರಸಾದ, ಮಂತ್ರಾಕ್ಷತೆ ಸ್ವೀಕರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post