ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾವು ಭರವಸೆ ನೀಡಿರುವಂತೆ ಐದು ಯೋಜನೆಗಳ ಜಾರಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ನುಡಿದಂತೆ ನಡೆದಿದ್ದೇವೆ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಹೇಳಿದ್ದಾರೆ.
ಈ ಕುರಿತಂತೆ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಹತ್ವದ ಘೋಷಣೆ ಮಾಡಿರುವ ಅವರು ಐದು ಗ್ಯಾರೆಂಟಿಗಳನ್ನು ಈಡೇರಿಸುತ್ತಿದ್ದೇವೆ. ಹಣಕಾಸು ನಿರ್ವಹಣೆ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹ ಮಾಡಿ, ಯೋಜನೆ ಜಾರಿಗೆ ಆದೇಶ ಪತ್ರ ಸಿದ್ದಪಡಿಸಲು ಸೂಚನೆ ನೀಡಲಾಗಿದೆ. ಈ ಯೋಜನೆಗಳೂ ಎಂದಿನಿಂದ ಜಾರಿಯಾಗುತ್ತದೆ ಎಂಬುದನ್ನು ಮುಂದಿನ ವಾರ ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಐದು ಗ್ಯಾರೆಂಟಿಗಳ ಬಗ್ಗೆ ಹೇಳಿದ್ದಿಷ್ಟು:
ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಎಲ್ಲ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತ ಸರಬರಾಜು. ಇದರ ಮಾಸಿಕ ವೆಚ್ಚ 1200 ಕೋಟಿ ರೂ. ಆಗುತ್ತದೆ.

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ
Also read: ಕಾವೇರಿ-2.0 ತಂತ್ರಾಂಶ ಸದುಪಯೋಗಪಡಿಸಿಕೊಳ್ಳಿ: ಗಿರೀಶ್ ಭಿಸ್ಟನ ಗೌಡರ್ ಸಲಹೆ
ಯುವ ನಿಧಿ ಯೋಜನೆಯ ಅಡಿಯಲ್ಲಿ ಪದವೀಧರರಿಗೆ ಪದವಿ ಮುಗಿದ 2 ವರ್ಷಗಳ ಅವಧಿವರೆಗೂ ಪ್ರತಿ ತಿಂಗಳು 3000 ಸಾವಿರ ರೂ. ಸಹಾಯಧನ (ಒಂದು ವೇಳೆ 2 ವರ್ಷದ ಅವಧಿ ನಡುವೆ ಅವರಿಗೆ ಯಾವುದೇ ರೀತಿಯ ಸರ್ಕಾರಿ/ಖಾಸಗಿ ಉದ್ಯೋಗ ದೊರೆತರೆ ಸಹಾಯಧನ ನಿಲ್ಲಿಸಲಾಗುತ್ತದೆ.) ಅದೇ ರೀತಿ ಡಿಪ್ಲೊಮಾ ಪಾಸಾದವರಿಗೆ ಉದ್ಯೋಗ ದೊರೆಯುವರೆಗೂ ಪ್ರತಿ ತಿಂಗಳು 1500 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.











Discussion about this post