ಕಲ್ಪ ಮೀಡಿಯಾ ಹೌಸ್
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜ ಅವರು ಮಿನಿ ವಿಧಾನ ಸೌಧ ಬಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೋವಿಡ್ ನೋಡೆಲ್ ಅಧಿಕಾರಿ ವೆಂಟೇಶ್, ಆರೋಗ್ಯಧಿಕಾರಿ ಡಾ. ಕಲಾಮಧು, ತಹಶೀಲ್ದಾರ್ ಮಹೇಶ್, ತಾ.ಪಂ. ಇಒ ಕುಸುಮಾಧರ್, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಆರೋಗ್ಯ ಶಿಕ್ಷಣ ಅಧಿಕಾರಿ ಅಮ್ಮಿ, ಬಿಇಒ ವಿರುಪಾಕ್ಷಪ್ಪ ಎಚ್.ಎಸ್.ಮುಂಡಾಜೆ, ಪ್ರಾ.ಆ.ಕೇ. ವೈದ್ಯಾಧಿಕಾರಿ ಡಾ.ಕಾವ್ಯಾ ವೈಪನಾ, ಅಳದಂಗಡಿ ಪ್ರಾ.ಆ.ಕೇ.ವೈದ್ಯಾಧಿಕಾರಿ ಡಾ.ಚೈತ್ರಾ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ತಂಡದವರು ಉಪಸ್ಥಿತರಿದ್ದರು.

ತಂಡದ ಕಾರ್ಯ ಚಟುವಟಿಕೆ:
ಬೆಳ್ತಂಗಡಿ ತಾಲೂಕಿನಲ್ಲಿ 59,877 ಮನೆಗಳಿದ್ದು, 2,86,667 ಜನಸಂಖ್ಯೆ ಇದೆ. ಅಷ್ಟು ಮಂದಿಯ ಸರ್ವೇ ಕಾರ್ಯ ನಡೆಯಲಿದೆ. ತಾಲೂಕಿನಾದ್ಯಂತ ಗ್ರಾಮದ ಪ್ರತಿಯೊಬ್ಬರ ಪರೀಕ್ಷೆ ನಡೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸೋಂಕಿನ ಲಕ್ಷಣ ಇರುವವರ ಜೊತೆಗೆ ಪ್ರಥಮ, ದ್ವಿ ತೀಯ ಸಂಪರ್ಕಿತರ ಪರೀಕ್ಷೆಯನ್ನು ತಂಡದವರು ನಡೆಸಲಿದ್ದಾರೆ.
ಒಟ್ಟು 21 ತಂಡಗಳಲ್ಲಿ ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನೀಶಿಯನ್ , ಒಬ್ಬರು ವೈದ್ಯ, ಎ.ಎನ್ ಎಂ., ಮೆಡಿಕಲ್ ಕಿಟ್ ಇರಲಿದೆ. ಆಶಾ ಕಾರ್ಯಕರ್ತೆಯರು, ಸ್ಥಳೀಯಾಡಳಿತ ಸಹಕಾರ ನೀಡಲಿದೆ.

ಆರು ಮಾಗ೯ಗಳು:
ವೇಣೂರು, ನಾರಾವಿ, ಕಣಿಯೂರು, ಇಂದಬೆಟ್ಟು, ನೆರಿಯ, ಧರ್ಮಸ್ಥಳ ಆರು ಮಾಗ೯ಗಳಿದ್ದು, ಪಂಚಾಯತ್ ನಿಂದ ಊಟದ ವ್ಯವಸ್ಥೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















