ಕಲ್ಪ ಮೀಡಿಯಾ ಹೌಸ್ | ಬೇಲೂರು |
ವಿಶ್ವ ವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಇಂದು ಅದ್ದೂರಿಯಾಗಿ ನೆರವೇರಿತು.
ರಥೋತ್ಸವ ಅಂಗವಾಗಿ ಇಂದು ನಸುಕಿನಿಂದಲೇ ಮೂಲ ದೇವರಿಗೆ, ಸೌಮ್ಯ ನಾಯಕಿ, ರಂಗ ನಾಯಕಿ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ನೆರವೇರಿತು.
ಅನಂತರ ದೇವಾಲಯದ ಪ್ರಾಂಗಣ, ರಥ ಬೀದಿಯಲ್ಲಿ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೆಯಿತು. ನಂತರ ಶ್ರೀ ಸ್ವಾಮಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಟೆ ಮಾಡಲಾಯಿತು. ಸಹಸ್ರಾರು ಭಕ್ತರ ಹರ್ಷೋದ್ಗಾರದೊಂದಿಗೆ ಬ್ರಹ್ಮ ರಥೋತ್ಸವ ನಡೆಯಿತು. ನಿಗದಿತ ಮುಹೂರ್ತಕ್ಕೆ ಗರುಡ ಪ್ರದಕ್ಷಿಣೆ ಹಾಕಿದ್ದು ವಿಶೇಷವಾಗಿತ್ತು.
Also read: ಹಿಂದೂಗಳ ಮೇಲೆ ನಿರಂತರ ದಾಳಿ: ಸಂಸದ ರಾಘವೇಂದ್ರ, ಶಾಸಕ ಚನ್ನಬಸಪ್ಪ ಆಕ್ರೋಶ
ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಆಗಮಿಸಿದ್ದ ಭಕ್ತರು ನಸುಕಿನಿಂದಲೇ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಆಗಮಿಸಿದ್ದ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.
ತಂಪು ವಾತಾವರಣ, ಜನ ಸಂತಸ
ಇನ್ನು ಸಾಮಾನ್ಯವಾಗಿ ಬೇಸಿಗೆ ಆದ ಕಾರಣ ರಥೋತ್ಸವ ವೇಳೆ ಬಿರು ಬಿಸಿಲು ಸುಡುತ್ತದೆ. ಆದರೆ, ನಿನ್ನೆಯಿಂದ ಮೋಡ ಕವಿದ ವಾತಾವರಣ ಹಾಗೂ ನಿನ್ನೆ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಇಂದು ವಾತಾವರಣ ತಂಪಾಗಿದ್ದು, ಭಕ್ತರು ಹೆಚ್ಚು ಸಂತಸದಿಂದ ಪಾಲ್ಗೊಂಡಿದ್ದರು.
ಮಧ್ಯ ರಾತ್ರಿ ಗರುಡೋತ್ಸವ
ನಿನ್ನೆ ರಾತ್ರಿ ಶ್ರೀ ಸ್ವಾಮಿಯ ಗರುಡೋತ್ಸವ ಅದ್ದೂರಿಯಾಗಿ ನಡೆಯಿತು. ರಾತ್ರಿ 12.45 ಕ್ಕೆ ಅಲಂಕೃತ ಗರುಡ ದೇವರ ಮೇಲೆ ಉತ್ಸವ ಮೂರ್ತಿ ಇರಿಸಿ ರಥ ಬೀದಿಯಲ್ಲಿ ಉತ್ಸವ ಮಾಡಲಾಯಿತು. ತಡ ರಾತ್ರಿಯದರೂ ಲೆಕ್ಕಿಸದೆ ಸಾವಿರಾರು ಭಕ್ತರು ಗರುಡೋತ್ಸವ ಕಣ್ತುಂಬಿಕೊಳ್ಳಲು ನೆರೆದಿದ್ದು ವಿಶೇಷವಾಗಿತ್ತು.
ಇನ್ನು, ಬ್ರಹ್ಮ ರಥೋತ್ಸವದ ವೇಳೆ ಜಿಲ್ಲಾಧಿಕಾರಿ ಸತ್ಯಪ್ರಭ, ಎಸ್ ಪಿ ಸೂಜಿತ, ಸಿಇಒ ಪೂರ್ಣಿಮಾ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸುರೇಶ್ ಸೇರಿ ಹಲವಾರು ಇದ್ದರು. ಮುಂಜಾಗ್ರತಾ ಕ್ರಮವಾಗಿ ಪ್ರತಿ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ನಾಳೆ ಭಾನುವಾರ ಶ್ರೀ ಸ್ವಾಮಿಯ ನಾಡ ರಥೋತ್ಸವ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post